ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾರು ಯಾರು ?
ಭಾರತದ ನೆಲದಲಿ
ಬೌದ್ಧ   ಭಿಕ್ಷುಗಳನ್ನು
ಬರ್ಬರವಾಗಿ  ಕೊಂದು
 ಧರ್ಮವ ಓಡಿಸಿದವರು

ಯಾರು ಯಾರು ?
ಕಲ್ಯಾಣದ ಮಣ್ಣಿನಲಿ
ಶರಣರ ರುಂಡ ಚೆಂಡಾಡಿ
ವಚನಗಳ ಸುಟ್ಟು
ಲಿಂಗ ಜಂಗಮ ಹತ್ತಿಕ್ಕಿದವರು ?

 ಯಾರು ಯಾರು ?
ಬುದ್ಧ ಬಸವನ
ಹತ್ಯೆ ಮಾಡಿ
ಸತ್ಯ ಸಮತೆ ಸಮಾಧಿ ಮಾಡಿ
ಜಾತಿಯ ಕಳಶವಿಟ್ಟವರು

ಯಾರು  ಯಾರು
ದಾಬೋಲ್ಕರ ಪನ್ಸಾರೆ
ಕಲಬುರ್ಗಿ ಗೌರಿಯನು ಕೊಂದು
ಡೋಲು ವಾಲಗ ಊದಿ
ಕುಣಿದು ಕುಪ್ಪಳಿಸಿದವರು ?

ಕತ್ತಿ ಪಿಸ್ತೂಲು ಒಂದೇ
ಕೈಗಳು ಬೇರೆ ಬೇರೆ
ಹಿಂಸೆ ಕೊಲೆ ಅವರ ಧರ್ಮ
ಅವರು ಕೊಲ್ಲುವುದು
 ವ್ಯಕ್ತಿಗಳನ್ನು ಸತ್ಯವನ್ನಲ್ಲ
———————————————————————————————-

About The Author

4 thoughts on “ಡಾ.ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಯಾರು ಯಾರು?”

  1. “ಮೋಸದಿಂದ ನೀವು ಕೋಲ್ಲೂವದು ವ್ಯಕ್ತಿಯನ್ನು, ವಿನಃ ಸತ್ಯಾವನ್ನಲ್ಲ” ಎಂಬುದನ್ನು ಅರ್ಥ ಪೂರ್ಣವಾಗಿ ತಮ್ಮ ಕವನದಲ್ಲಿ ಮುಕ್ತವಾಗಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಂಡಿದ್ದಾರೆ.

  2. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಪ್ರತಿಭಟನೆಯನ್ನು ವ್ಯಕ್ತಪಡಿಸುವ ಕಾವ್ಯ ಚೆನ್ನಾಗಿ ಮೂಡಿ ಬಂದಿದೆ

Leave a Reply

You cannot copy content of this page

Scroll to Top