ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಿತಿಗಳಿರದವು

ಭಾವಗಳು ಬಡಿವಾಗ ಏಳದಿರಲಾದೀತೆ
ಮಿಡಿತಗಳು ಮೆರೆವಾಗ ಬರದಿರಲಾದೀತೆ
ನುಡಿಗಳು ನೆನೆವಾಗ ಕೇಳದಿರಲಾದೀತೆ
ಆನಂದ ಬಾಷ್ಪಗಳಿಳಿವಾಗ ತಡೆಯಲಾದೀತೆ

ಅರಸದಿರು

ಅರಸದಿರು ನಿನ್ನ ಹಾರೈಸಲೆಂದು
ಬೇಡದಿರು ಬೇಡಿಕೆ ಬರಲೆಂದು
ಕಾಡದಿರು ಕೀರ್ತಿ ಹೆಚ್ಚಾಗಲೆಂದು
ಕರ್ಮವೇ ಸರ್ವೆವ ಎರೆಯುತಿರಲು…!

ಮೆರೆವೆಯೆಲ್ಲಿ

ಮನದಂಗಳದ ಮಧುವಲ್ಲಿ
ಕಣದಂಗಳದ ರಾಶಿಯಲ್ಲಿ
ಬೆಳದಿಂಗಳ ಇರುಳಲ್ಲಿ
ನಲಿದಿರೆ ನೀ ಮರೆವೆಯೆಲ್ಲಿ

ಸರಿ ದಾರಿ

ವಾಸ್ತವ ವರ್ಣನೆ ವಕ್ರವಲ್ಲ
ನೈತಿಕ ನಡೆಯು ನರಳಲ್ಲ
ಸತ್ಯವು ಸಂತಸಕ್ಕೆ ತೊಡಕಲ್ಲ
ಸರಿ ದಾರಿಯೇ ಸಾಧನೆಗೆ ಸೇತುವೆಯಲ್ಲಾ…

ಶ್ರೇಷ್ಠ-ಕನಿಷ್ಠರಿಲ್ಲ

ಸೋಲುವೆವೆಂಬ ಭಯ ಬೇಡ ಗೆಲುವಿಹುದು
ಗೆದ್ದೆನೆಂಬ ಬಿಗುಮಾನ ಬೇಡ ಸೋಲಿಹುದು
ಕಾಡುವರೆಂಬ ಆತಂಕ ಬೇಡ ಕರಗುವರವರೂ
ಕಾಲ ಚಕ್ರದೊಳು ಶ್ರೇಷ್ಠ-ಕನಿಷ್ಠರಿಲ್ಲ ಮರೆಯದೆಂದೂ..


About The Author

Leave a Reply

You cannot copy content of this page

Scroll to Top