ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದ ಒಡತಿ ನೀನು ಅಮೃತ ವರ್ಷಿಣಿ
ಆಕಸ್ಮಿಕ ಅನಿವಾರ್ಯವೋ ನಾ ಕಾಣೆ ವರ್ಷಿಣಿ!
ಮೋಹಿನಿಯಂತೆ ಬಂದ ನನ್ನ ಗೆಳತಿ ನೀನು
ಮನದಾಳದ ಮಾತುಗಳಿಗೆ ಜೀವ ತುಂಬಿದೆ ನೀನು!!

ಹೇಳಲು ಬಯಸಿದೆ ಹೇಳಲಾಗದ ಮಾತುಗಳು
ಸುಮಧುರ ಭಾವನೆಗಳ ಗೊಂಚಲು ನೀನು!
ಮೋಹದ ಬಲೆಯಲ್ಲಿ ಸಿಲುಕಿದ ಮೀನು ನಾನು
ಹೇಗೆ ಬಿಡಿಸಲಿ ಗೆಳತಿ ನಿನ್ನ ಭಾವ ಬಂಧನವು ಹೇಳು!!

ಹೇಳಬೇಕೆಂದು ಕ್ಷಣ ನನ್ನಿ ಮನ ಬಯಸುತ್ತಿದೆ
ಹೇಳಲಾಗದೆ ಈ ಮನಸು ಆತೋರೆಯುತ್ತಿದೆ!
ಪ್ರೀತಿ ಬಯಕೆಯ ಉಯ್ಯಾಲೆ ತೂಗುತಿದೆ
ಈ ಹೃದಯದ ಚಡಪಡಿಕೆ ನಿನಗೆ ಅರ್ಥವಾಗದೆ!!

ಕಾವ್ಯ ಲೋಕದ ವಿಸ್ಮಯ ಕಲ್ಪನೆಯ ಸುಂದರಿ
ಕನಸಲ್ಲಿ ಹಗಲು ಇರುಳು ನರ್ತಿಸುವ ಮಯೂರಿ!
ಅಮೃತ ವರ್ಷಿಣಿಯಾಗಿ ಬರಡು ಭೂಮಿಗೆ ಬರಲು
ಬಂದು ಹಸಿರಾಗಿಸಿದೆ ನೀ ಎನ್ನ ಮನದ ಒಡಲು!!


About The Author

1 thought on “ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ -ಅಮೃತ ವರ್ಷಿಣಿ”

  1. ಅಮೃತ ವರ್ಷಿಣಿ ಕಾವ್ಯ ಮನದಾಳದ ಮಾತು
    ಹೊರ ಬಂದಿವೆ.

Leave a Reply

You cannot copy content of this page

Scroll to Top