ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾರೋ ಮಾನ ಕಾಯುವರೆಂದು ಕೂಡದಿರು ಕೃಷ್ಣನ‌ ಕೈಯಲಿ ಈಗ ಸೀರೇಯೇ ಇಲ್ಲ
ಯಾರೋ ದಾನ‌ ಕೊಡುವರೆಂದು  ಹಸಿದು ಕೂಡದಿರು ಸಿರಿವಂತರಾರೂ ಖಾಲಿಯೇ ಇಲ್ಲ

ಊರ ನಡುವಿನ ಹಗೆವುಗಳಲ್ಲಿ ಧಾನ್ಯವೆಲ್ಲಿ ಈಗ? ಇಲಿ ಹೆಗ್ಗಣಗಳದೇ ದರಬಾರು
ಹರಕು ಬಟ್ಟೆಯಲಿ ಮೈಯ ತೋರದಿರು ಮಾನ ಮುಚ್ಚುವ ಉದಾರಿಗಳಾರೂ ಈಗ ದೊರಕಿಯೇ ಇಲ್ಲ

ಧರ್ಮ ದೇವರುಗಳೂ ಈಗ ಒಂದೊಂದು  ಜಾತಿ ಅನುಯಾಯಿಗಳ ಮಾತು ಕೇಳುತ್ತಿವೆ
ರಕ್ಷಿಸಿದವರ ರಕ್ಷಿಸುವ ಮಾತು ನಂಬದಿರು ದೇವ ಮಾನವ ರಾರೂ ಜೀವೀಸಿಯೇ ಇಲ್ಲ

ಪುರಾಣ ಪ್ರವಚನಪಟುಗಳ ಹೇಳುವ ಮಾತುಗಳು ಉದರ ಪೋಷಣೆಯ ಮಾರ್ಗವಾಗಿವೆ
ಸಾರು ತತ್ವಗಳು ಗಾಳಿಯಲಿ ತೇಲುತಿವೆ  ಹೇಳಿದವರಾರೂ ಅನುಸರಿಸಿಯೇ ಇಲ್ಲ

ಹರಿದು ಬರುವ ನೀರು ಗಾಳಿ‌ ಕೂಡ ಈಗ ವಿಷವನೆ ಹೊತ್ತು ತರುತ್ತಲಿದೆ ಜೋಗಿ
ಉಳಿಯಲೆಲ್ಲಿದೆ ದಾರಿ ಅರಸುತ್ತಿದ್ದೇನೆ ಸುದರ್ಶನ ಹಿಡಿದ ಚಕ್ರಧರ ನೋಡಿಯೇ ಇಲ್ಲ


About The Author

1 thought on “ವೈ.ಎಂ.ಯಾಕೊಳ್ಳಿ ಅವರ ಗಜಲ್”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ವಾಸ್ತವದ ಕವಿತೆ ಧನ್ಯವಾದಗಳು

Leave a Reply

You cannot copy content of this page

Scroll to Top