ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಲ್ಲವೂ ನಿನ್ನಿಚ್ಛೆಯಂತೆಯೇ ನಡೆಯುವಾಗ
ನನಗೇಕೆ ಈ ಕಷ್ಟ ಎಂದು ಕೇಳುವುದಾದರೂ ಹೇಗೆ?

ನಿನ್ನಲ್ಲಿ ಶರಣಾದ ಮೇಲೆ ನೀನಲ್ಲವೆ ಸೂತ್ರಧಾರ
ನನ್ನದೇನಿದೆ?

ನಾನು ನಾನೆಂಬ ಮಮಕಾರವ ತೊರೆವುದ ಹೇಗೆಂದು ಹೇಳು

ಎಲ್ಲಿರುವೆ ನೀನು
ನಿನ್ನಾಣತಿಯಂತೆಯೇ
ನಡೆವ ನನ್ನ ಈ ಬದುಕಿನ‌ ಗತಿಗೆ ಅದೇಕೆ ಅಷ್ಟೊಂದು ತಿರುವು?

ಬದುಕಿನೆಲ್ಲ ಗತಿಗೆ ಕಾಲನ ಕೊನೆಯೊಂದಿದೆ
ಕಾಯಬೇಕಿಲ್ಲ
ಬರುವುದು,
ಬಂದ ಮೇಲೆ
ನಿಲ್ಲ ಬೇಕಿಲ್ಲ

ಕಾಲನಂಕೆಗೆ ಸಿಲುಕಿದವರು ನಕ್ಷತ್ರಗಳಾಗುವರಂತೆ ಆಗಸದ ತುಂಬ ಹರಡಿದ ತಾರೆಗಳ ನಡುವೆ
ನನಗೆಲ್ಲಿ ತಾಣ

ಅದೋ ಹೊಳೆವ ಚುಕ್ಕಿಗಳ ಹೊಳಪಿನ ನಗೆ
ಬುವಿಯ ಬವಣೆ ಮರೆತವರ
ಮಹೋನ್ನತ ಮೆರವಣಿಗೆ

ಆಗುವುದೆಲ್ಲವೂ ಒಳಿತಿಗೆ ತಿಳಿದ ಮೇಲೆಯೂ ಆತಂಕವದಾವುದು
ಅರಿವುಗೇಡಿಯ ಮನಕೆ
ವಿಸ್ಮೃತಿಗೆ ಬಲಿಯಾದವಗೆ
ವಿಭ್ರಮೆಯಿದು
ಮರೆತು
ಮಮಕಾರದಲಿ ನರಳುವ
ವಾಂಛೆ
ಮೋಹದ ತೆಕ್ಕೆ ಸೇರಿ
ನಿಂತ ನೆಲ ಮರೆತವರ
ಸಾಲಿನಲಿ ಒಂದಾಗದಂತೆ
ಅರಿವ ದಯಪಾಲಿಸು
ಕರುಣಾಕರ


About The Author

6 thoughts on “ಜಯಂತಿ ಕೆ ವೈ ಅವರ ಕವಿತೆ-ʼಸಮರ್ಪಣೆʼ”

  1. ಕವಿತೆ ತುಂಬಾ ಚೆನ್ನಾಗಿದೆ ಜಯಂತಿ
    ಶುಭಾಶಯಗಳು

Leave a Reply

You cannot copy content of this page

Scroll to Top