ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊತ್ತಲ್ಲದ ಹೊತ್ತಿನಲ್ಲಿ ಬೆಂಬಿಡದೆ
ಸುರಿವ ಹುಚ್ಚು ಮಳೆಗೆ
ಕೊಚ್ಚಿ ಹೋದವು ಹೊಲಗಳು
ತುಂಬಿ ಹರಿದವು ಹಳ್ಳಕೊಳ್ಳಗಳು

ಮೃಗಶಿರ ಮಳೆ ಮುಗಿದು
ಆರಿದ್ರಾ ಮಳೆ ಶುರುವಾದರೂ
ಬಿಡದ ಜಡಿ ಮಳೆಗೆ
ರಾಡಿಯಾದವು ಹೊಲ ಗದ್ದೆಗಳು..

ರೈತನ ಮೊಗದಲ್ಲಿ ಆತಂಕದ ಛಾಯೆ
ತಿಂಗಳೊಪ್ಪತ್ತು ಕಳೆದರೂ
ಬಿತ್ತನೆ ಕಾಣದ ಇಳೆ
ಅತಿವೃಷ್ಟಿಗೆ ಹೆದರಿ ಮೊಗದಲ್ಲಿ ಇಲ್ಲ ಕಳೆ.

ವಸುಂಧರೆಯ ಒಡಲು ತುಂಬಿದೆ
ಪ್ರಕೃತಿಯೆಲ್ಲಾ ಹಸಿರು ಹೊದ್ದಿದೆ
ರೈತರ ಮೊಗದಲ್ಲಿ ಸಂತಸ ಉಕ್ಕಿದೆ
ಹೊಟ್ಟೆ ತುಂಬಲು ಬೆಳೆ ಬೆಳೆಯಬೇಕಿದೆ..

ವರುಣದೇವಾ ಕೃಪೆದೋರು
ಜಗಕ್ಕೆಲ್ಲಾ ಅನ್ನ ಬೆಳೆಯುವ ರೈತರಿಗೆ
ಬಿಡುವು ಮಾಡಿ ದಾರಿ ಬಿಡು
ಭೂಮಿಯ ಹಸನಾಗಿಸಿ
ಬಂಗಾರದ ಬೆಳೆ ಬೆಳೆಯೋಣ..


About The Author

3 thoughts on “ಗೀತಾ.ಜಿ.ಎಸ್ ಅವರ ಕವಿತೆ-ತುಂಬಿ ಹರಿದಾವ ಹೊಳೆಹಳ್ಳ”

  1. ಡಾ ಶಶಿಕಾಂತ ಪಟ್ಟಣ ರಾಮದುರ್ಗ

    ಅತ್ಯುತ್ತಮ ಕವನ ಗೀತಾ

Leave a Reply

You cannot copy content of this page

Scroll to Top