ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೈಸೂರಿನ ರೋಟರಿ ಸಭಾಂಗಣದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಲೇಖಕಿ ಎನ್ .ಆರ್ .ರೂಪಶ್ರೀ ಅವರಿಗೆ 2025 ನೇ ಸಾಲಿನ “ಸಾಹಿತ್ಯ ಸುಗಂಧ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸೌಗಂಧಿಕಾ ಪ್ರಕಾಶನ ಮತ್ತು ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು . ಕಲ್ಬುರ್ಗಿ ಕಾಲೇಜಿನ ಪ್ರಾಧ್ಯಾಪಕರು ಖ್ಯಾತ ಗಜಲ್ ಕವಿಗಳಾದ ಮಲ್ಲಿನಾಥ್ ಎಸ್ ತಳವಾರ್ ಗಜಲ್ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕವಯತ್ರಿ ಹೇಮಗಂಗಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬರಹಗಾರರಾದ ಎಂ.ಬಿ .ಸಂತೋಷ್ ಮಾಡಿದರು. ಮಂಗಳೂರಿನ ಗಣೇಶ್ ಪ್ರಸಾದ್ ಪಾಂಡೇಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕವಯತ್ರಿ ಸೌಗಂಧಿಕಾ ಜೋಯಿಸ್ ಅವರ ಗಜಲ್ ಸಂಕಲನ ಲೋಕಾರ್ಪಣೆಗೊಂಡಿತು.


About The Author

Leave a Reply

You cannot copy content of this page

Scroll to Top