ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂಡಣದಲ್ಲಿ ಹುಟ್ಟುವ ರವಿಯು
ಪಡುವಣದಲ್ಲಿ ಮುಳುಗುವನು
ನಿತ್ಯವು ಜನನ ನಿತ್ಯವು ಮರಣದ
ವರವನು ಅವನು ಪಡೆದಿಹನು

ನೇಸರ ದಿನಕರ ಭಾಸ್ಕರನೆಂಬ
ಹಲವು ಹೆಸರು ಹೊಂದಿಹನು
ಹಲವು ಬಣ್ಣದ ಮಿಶ್ರಣದಿಂದ
ಬಿಳಿಯ ಬಣ್ಣಕೆ ಬಂದಿಹನು

ಬಿಸಿಲಿಗೂ ನೆರಳಿಗೂ
ಕಾರಣನಿವನು
ಮೋಡದ ಮರೆಯಲಿ
ಚಲಿಸುವನು

ಎಲ್ಲಾ ಊರಲಿ ಇದ್ದೆ
ಇರುವನು
ನಿಮ್ಮಯ ಬೆನ್ನು ಬಿಡದೆ
ಬರುವನು

ನೆತ್ತಿಯ ಮೇಲೆ ಬಂದರೆ ರವಿಯು
ನೆಲವೇ ಸುಡುವುದು ಎಂದು ಜರಿವರು
ಮೋಡದ ಮರೆಯಲಿ ಅವಿತು ಕುಳಿತರೆ
ಬಿಸಿಲೆ ಇಲ್ಲ ಎಂದು ಕೊರಗುವರು

ರವಿಯು ಇಲ್ಲದೆ ಬೆಳಕಿಲ್ಲ
ರವಿಯು ಇಲ್ಲದೆ ಬದುಕಿಲ್ಲ


About The Author

Leave a Reply

You cannot copy content of this page

Scroll to Top