ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದಲಿನ ನೂರು ಮಾತು  ಹೇಳಲಿ ಹೇಗೆ ಗೆಳತಿ
ನಗು ಚೂರು ಕಣ್ಣಲ್ಲೇ ನಾನಷ್ಟೇ ನಾಚುವಂತೆ
ಎಲ್ಲಿಯೂ ಹೇಳದ ಸಾಲು ನನ್ನಲ್ಲೇ ಹೇಳು ಮೊದಲು
ಪಿಸುನುಡಿದು ನೋಡು ನನ್ನ ಮತ್ಯಾರು ಕೇಳದಂತೆ ll

ಮುದ್ದಾದ ಮಾಯೆ ನೀನು ಸದ್ದಿಲ್ಲದಂತೆ ಬಂದೆ
ನಿಂತ ಈ ನೀರಿನಲ್ಲಿ ಸುಳಿಯಾಗಿ ಕಾಡಿದೆ
ಚೆಲುವಾದ ಛಾಯೆ ನೀನು ಈ ಬಲಶಾಲಿಯನ್ನು ಕೊಂದೆ
ಕುಂತ ಈ ಜಾಗದಲ್ಲಿ ಒಲವನ್ನು ಹಂಚಿದೆ

ಗೀಚಲು ಹೋದೆ ಬರಹ ಕಂಡಿತು ನಿನ್ನಯ ಹೆಸರು
ಮಸಿಕಾಲಿಯಾದರೂ ನಿಲ್ಲದು ಬಣ್ಣನೆ
ಹಗಲಿರುಳು ಇದ್ದರೂ ನೀನಂತೂ ನನ್ನ ಉಸಿರು
ರವಿ ಶಶಿಯೂ ಹೋದರು ನಾನಿರುವೆ ತಣ್ಣಗೆ ll

ಜಗವನ್ನು ಬಿಟ್ಟು ಬಿಡಲು ತುದಿಗಾಲಿನಲ್ಲಿ ಇರುವೆ
ನೀ ಸಿಕ್ಕರೆ ಸಾಕು ಈ ಜನ್ಮ ಪಾವನ
ನನ್ನೆಲ್ಲ ಸುಖದ ಪಾಲು ನಿನಗೆಂದೆ ಮೀಸಲಿಡುವೆ
ಕೈ ಹಿಡಿದು ಸಾಗು ನೀನು ಶುರುವಾಗ್ಲಿ ಜೀವನ ll        


About The Author

2 thoughts on “ಇರಾಜ ವೃಷಭ ಎ. ಅವರಕವಿತೆ-ಒಲವಲಿ ಗೀಚಿದ ಸಾಲುಗಳು”

Leave a Reply

You cannot copy content of this page

Scroll to Top