ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೊಂದ
ಜನರ ನೋವುಗಳಿಗೆ
ಸ್ಪಂದಿಸುವ
ಹೃದಯವಾಗಬೇಕು;

ಕಷ್ಟದ ಸಮಯಕ್ಕೆ
ಸಹಾಯ ಹಸ್ತವ ಚಾಚುವ
ಕರವಾಗಬೇಕು;

ಹಸಿವಿನಿಂದ ನರಳುವ
ಒಡಲುಗಳಿಗೆ
ಅನ್ನ ನೀಡುವ
ಕಾಮಧೇನುವಾಗಬೇಕು;

ರೋಗದಿಂದ ಬಳಲುವ
 ಕಾಯಗಳಿಗ
ಅನ್ನ ಔಷಧಿ ನೀಡಿ
ಸಂತೈಸುವ
ಶಕ್ತಿಕೇಂದ್ರವಾಗಬೇಕು;

ಬಡತನದಿ ಬಸವಳಿದ
ಸೂರಿಲ್ಲದ
ನಿರ್ಗತಿಕರಿಗೆ
ಆಶ್ರಯ ನೀಡುವ
ತಾಣವಾಗಬೇಕು;

ಮುಗ್ದ ಜನರಿಗೆ
ಯೋಜನೆಗಳ
ಹೆಸರಲಿ
ಕರಭಾರವ ಹೊರಿಸಿ
ಹಿಂಸಿಸದ
ಮನವಾಗಬೇಕು;

ಪ್ರಜೆಗಳ ಅಶೋತ್ತರಗಳಿಗೆ
ಬರೀ ಕಿವಿಯಾಗದೇ
 ಸಂಕಟಗಳ
ಪರಿಹರಿಸೋ
ಹೃನ್ಮನವಾಗಬೇಕು;

———————————————————————————————

About The Author

1 thought on “ಕಾಡಜ್ಜಿ ಮಂಜುನಾಥ ಅವರ ಕವಿತೆ-ಅಧಿಕಾರ”

Leave a Reply

You cannot copy content of this page

Scroll to Top