ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ಯಾಬ್ಲೋ ಪುಷ್ಕಿನ್ ಪಂಪ
ಶೆಲ್ಲಿ  ಕೀಟ್ಸ್ ಕಾವ್ಯ ಕಂಪ
ಅಭಿನಂದನೆ ತಮಗೆಲ್ಲ
ಹರಿದ ಭಾವದ ಕಂಪು
ಕನ್ನಡಕೆ ಒಬ್ಬರೇ
ರಸ ಋಷಿ ಕುವೆಂಪು
ಅಂದು ಮುಂಜಾವಿನ ರವಿಕಿರಣ
ಪಕ್ಷಿ ಇಂಚರದ ಮಾಧುರ್ಯ
ಮಳೆಯಲ್ಲಿ ತಪ್ಪನಷ್ಟೇ ತೋಯ್ದು
ಮರ ಬುಡದಲ್ಲಿ ನಿಂತದ್ದು
ಗಾಳಿಯ ಎದುರಿಗೆ
ಮುಗಿಲ ಮುಟ್ಟಿದ ಪಟ
ಓಣಿಕೇರಿಯಲಿ ಲಗೋರಿ
ಹಬ್ಬಕೆ ಪಟಾಕಿ   ಸದ್ಧು
ಸಾವಿರ ಮರಗಳನ್ನು ಕಡೆದು
ಹತ್ತು ಸಸಿಗಳನ್ನು ನೆಡುತ್ತೇವೆ  .
ಭೂಮಿ ಬಿರಿತಿದೆ
ಬರದ ಅಟ್ಟಹಾಸ ಕುಹುಕುತನ
ಕವಿ ಮಾರುವ ಹಾಗಿಲ್ಲ
ಪ್ರಶಸ್ತಿ ಪುರಸ್ಕಾರ  ವಸ್ತುಗಳನ್ನು
ಮನೆಯಲ್ಲಿ ಮಕ್ಕಳು ಬಿಕ್ಕುತ್ತಿವೆ
ಹಸಿವು  ಅನಕ್ಷರತೆ ಬಡತನ
ಇಲ್ಲ ಅಕ್ಕಿ ಗಂಜಿ
ನಿಂತಿಲ್ಲ ಕಾರ್ಮಿಕರ  ಶೋಷಣೆ.
ಗುಡಿ ಮಸೀದೆ ಚರ್ಚು  ವ್ಯವಹಾರ .
ಮುಖವಾಡ ಉದರ ಪೋಷಣೆ .
ಮುಸಂಜೆ ಸಮಯದಲ್ಲಿ
ಕವಿಗೆ ನಮನ ಹೊರಗೆಲ್ಲ ನಗಿಸಿ
ಒಳಗೊಳಗೇ ಅತ್ತ ನಿರಲಾ
ಬಾನಲ್ಲಿ ಹಾರಿದವು ಹಕ್ಕಿ ಬಿಚ್ಚಿ ರೆಕ್ಕಿ
ಹೀಗೊಂದು ಮುಂಜಾವು
ಯಾರಿರದ ಹಾದಿಯಲಿ
ಸದ್ದಿಲ್ಲದೇ ಹೊರಟಿತು
ಕವಿಯ ಹೆಣದ ಪಲ್ಲಕ್ಕಿ .
ಸತ್ಯ ಶೋಧಕ ನಿತ್ಯ ಭಾಷಿಕ
ಸತ್ತು ಹೋದನು
ಮುಖ ಮುಚ್ಚಿ ಮಣ್ಣಿನ ಹೆಂಟೆಯಲಿ
ಇಂದು ವಿಶ್ವ ಕವಿದಿನ
ನೆನೆಯಬೇಕು ಭಾವನೆಗಳ ಯಜಮಾನನನ್ನು

———————————————————————————————–

About The Author

8 thoughts on “ಕಾವ್ಯ ದಿನಕ್ಕೊಂದು ಕವಿತೆ-ಶಶಿಕಾಂತ ಪಟ್ಟಣ ರಾಮದುರ್ಗ”

  1. ನೆನೆಯಬೇಕು ಭಾವನೆಗಳ ಯಜಮಾನನನ್ನು…
    ಎಷ್ಟು ಅದ್ಭುತ ಸಾಲುಗಳು ಸರ್
    ಕವಿಯ ನಿಜ ಜೀವನದ ವಾಸ್ತವ ಸತ್ಯ ಗಳನ್ನು ಅರಹುವ ಕವನ
    ವಿಶಿಷ್ಟ ವಾದದ್ದು

    ಸುತೇಜ

  2. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ವಾಸ್ತವದ ಸಂಗತಿಗಳು ಕವಿ ಭಾವದಲ್ಲಿ ಅಕ್ಕರದ ಲೇಪನದಲ್ಲಿ ಸಿಂಗಾರಗೊಂಡ ಕಾವ್ಯ ಮಾಲೆ ಸುಂದರ ಭಾವಾಭಿವ್ಯಕ್ತಿ ಸರ್ ಧನ್ಯವಾದಗಳು

  3. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಕವಿಯ ಮನದೊಳಗಿನ ಸುಂದರ ಅಭಿವ್ಯಕ್ತಿ

Leave a Reply

You cannot copy content of this page

Scroll to Top