ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅಂದುಕೊಂಡುದ ಮಾಡೆ
ದೈವ ನೀಡಿದ ವೇಳೆ
ಮತ್ತೊಂದು‌ ಮುಂಜಾನೆಯು
ದುಡಿಯೆ ಸಾರ್ಥಕವು


ಮನದಲಿ ನಿಂತಿಹ
ಚಿತ್ರವನು ನೆನೆಯೆ
ಮೂಡುವದು ನವೀನ
ಭಾವನೆಯ ಗೊನೆಯೆ


ಪ್ರೀತಿಗೆ ಸೋತ ಮೇಲೆ
ಗೆಲ್ಲುವ ಮಾತೆಲ್ಲಿದೆ
ಸುಂದರ ಬಾಳಿಗದು
ಮುನ್ನುಡಿಯೆ ಆಗಿದೆ

ಹಟಕ್ಕೆ ಬಿದ್ದರಲ್ಲಿ
ಪ್ರೀತಿಯ ಸೋಲಹುದು
ಅನುಸರಿಸಿ ನಡೆ
ಬದುಕೇ ಗೆಲ್ಲುವದು


ನನ್ನೊಳಗಿನೊಳಗು
ಅವಳೇ ಆಗಿಹುದು
ಬಿಟ್ಟು ಇರುವೆನೆನೆ
ಜೀವವೆ ಹೋಗುವುದು

 ಕುದಿಯುವ ಹಾಲಿಗೆ
ನೀರು ಹಾಕಲು ಶಾಂತ
ಕುದಿವ ಮನಸಿಗೆ
ಸಮಾಧಾನ ಸುಖಾಂತ

ಇತರರ ಒಳಿತ
ಹುಡುಕೊದಾಗದಿರೆ
ನಿನ್ನೊಳಗೆಲ್ಲೊ ತಪ್ಪು
ಇರಬೇಕು ಅರಸು

ಮಾತುಗಳ ಸವಿಯು
ಏನೆಂದು ಅರಿತದ್ದು
ಅವಳು‌ ಮಾತಾದಾಗ
ಮುತ್ತಿಗೂ ಮಿಗಿಲವು

ದಿನದ ಕಾರ್ಯಗಳ
ಎದ್ದೊಡನೆ ಯೋಜಿಸು
ದಿನಗಳೆದ ಹಾಗೆ
ಕಾರ್ಯವನು ಹೂಣಿಸು

೧೦

ಬೆಲ್ಲವೇ ಸಿಗೊದಿಲ್ಲ
ಬೇವೆಲ್ಲಿಂದ ಸಿಕ್ಕೀತು
ಬೇವು ಬೆಲ್ಲದ ಮಾತು
ಕಾವ್ಯೋಪಮೆ ಆದೀತು

೧೧
ಯುಗಾದಿಯು ಬಂದಿದೆ
ಬೇವು ಬೆಲ್ಲ ಕೊಡೆಂದೆ
ನೀನೇ ಬೇವಂಥವನು
ನಾನು ಬೆಲ್ಲವೆಂದಳು

—————————————————————————————————————-

About The Author

Leave a Reply

You cannot copy content of this page

Scroll to Top