ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆರಿಸುತ್ತೇನೆಂದು
ಮಾನವತೆಯ ಮೀರಿ ಮೈ ಮೇಲೆ ಬರದಿರು
ಸುಟ್ಟು ಕರಕಲಾಗುವೆ
ಗಾಳಿಗೆದೆಗೊಡ್ಡಿ ಹೋರಾಡುವುದಷ್ಟೆ ನನ್ನ ಛಲ
ಅರಿತು ಅಳಿಯುವುದು ಉಳಿಯುವುದು
ನಿನ್ನ ಅಂತ:ಸತ್ವದ ಬಲ

ಮೀರಿಸುತ್ತೇನೆಂದು
ಕಾಡ್ಗಿಚ್ಚಾಗಿ ಹಬ್ಬುತ್ತ ಹೋಗದಿರು
ಹಿಡಿ ಶಾಪಕೆ ಗುರಿಯಾಗುವೆ
ನಿಶ್ಚಲವಾಗಿರುವುದಷ್ಟೆ ನನ್ನ ಗುರಿ
ಅನುಸರಿಸುತ್ತ ದಾರಿಕಂಡುಕೊಳ್ಳುವುದು
ನಿನ್ನ ವಿವೇಚನೆಯೆ ಸರಿ

ಧರಿಸುತ್ತೇನೆಂದು
ಹಲವಾರು ಮುಖವಾಡಗಳ ತೊಡದಿರು
ನಕಲಿಯಾಗುವೆ
ಸುಜ್ಞಾನ ವೃಕ್ಷವಾಗುವುದಷ್ಟೆ ನನ್ನ ಧ್ಯೇಯ
ಅರ್ಜಿಸುವುದು ವರ್ಜಿಸುವುದು
ನಿನಗೊಪ್ಪಿತ ನ್ಯಾಯ

ಉರಿಯುತ್ತಲೇ ಇರುತ್ತದೆಂದು
ಅಪಹಾಸ್ಯದ ವಿನೋದ ಬೇಡ
ಬೆಂಕಿ ಬಿರುಗಾಳಿಯೂ ನನ್ನ ರೂಪಗಳೆ
ತಲೆ ಬಾಗಿದವರ …ನೇವರಿಸಿ
ಬಳಿ ಬಂದವರ…ಹರಸಿ
ಬಳಲಿದವರ…ಸಂತೈಸಿ
ಕತ್ತಲ ತಬ್ಬಿದವರ ಒಳಹೊಕ್ಕು
ಬೆಳಕಿನ ಬೀಜ ನೆಡುವೆ
ಬೇಕೆಂದರೂ ಬೇಡವೆಂದರೂ
ಬೆಳಕ ದಾಸೋಹಿಯಾಗಿರುವೆ
ದೀಪವಾಗಿ ಸದಾ ಜಗ ಬೆಳಗುತಿರುವೆ


About The Author

1 thought on “ಕಿರಣ ಗಣಾಚಾರಿ ಅವರ ಕವಿತೆ’ಬೆಳಕು ಮಾತನಾಡಿತು’”

Leave a Reply

You cannot copy content of this page

Scroll to Top