ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪ ಮಾಡಿಟ್ಟ ಆಸ್ತಿಗೆ ದಾಯಾದಿಗಳು ಕಾದಾಡಿದಂತೆ ನನ್ನ ದೇಶ ನಿನ್ನ ದೇಶ ಎನ್ನುವ ಕಾಳಗ
ಕತ್ತಿ ಗುರಾಣಿ ಹಿಡಿದು ಕದನಕೆ
ನಿಂತವರ ಮದ್ಯೆ ನೀನಿರಬೇಕಿತ್ತು

ರಕ್ತ ಬೀಜ ಮಹಿಷಾಸುರನಂತಹ
ಬ್ರಿಟಿಷರ ಸಂಹಾರಕ್ಕೆ
ಅಹಿಂಸಯೇ ಅಸ್ತ್ರ ಶಸ್ತ್ರವಾಗಿ
ಸತ್ಯವೇ ರಣರಂಗವಾಯಿತು ಸ್ವಾತಂತ್ರ್ಯ ಹೋರಾಟಕ್ಕೆ

ಬ್ರಿಟಿಷರ ಬಂದೂಕಿನ ಗುಂಡಿಗೆ
ಗುಂಡಿಗೆ ಒಡ್ಡಿದ ನೀನು
ಬಡಕಲು ದೇಹದಲ್ಲೂ ಬಲಾಡ್ಯತನ
ನಿಶಸ್ತ್ರಧಾರಿ ಶಾಂತಿ ದೂತ ನೀನು

ಸ್ವಾತಂತ್ರ್ಯ ಬಂದಾಯಿತು
ಮತ್ತೇಕೆ ನೋವು ಸಂಕಟ
ಭಾರತಮಾತೆಯ ಸಂಜಾತರಿಗೆ
ವಿಜಯೋತ್ಸವದ ಸಂಭ್ರಮ

ಹೌದು ರಕ್ತಪಾತವಿಲ್ಲದ ಹೋರಾಟಕ್ಕೆ ಜಯ
ಆದರೆ ಭಾರತ ಮಾತೆಯ ಮಕ್ಕಳಲ್ಲಿ
ಕೋಮು ದಳ್ಳುರಿ ಬ್ರಿಟಿಷರೇ ವಾಸಿ ಎನಿಸಿರಬೇಕು ನಿನ್ನ ಬೆಂದ ಹೃದಯಕ್ಕೆ

ಹಾಗೆಂದು ಅವರ ಸೇಡು
ಭಾರತದ ಮೇಲಲ್ಲ
ಶಾಂತಿ ಅಹಿಂಸೆಯ ಮೂಲ ಮಂತ್ರದ ಮೇಲೆ
ಅವರ ಬಲಿಷ್ಠ ರಟ್ಟೆಗಳನ್ನು ದುರ್ಬಲಗೊಳಿಸಿದೆ ನೀನು

ಜನತೆಗೆ ತಟ್ಟಿತು ಬ್ರಿಟಿಷರ ಪ್ರತಿಕಾರ
ಅಹಿಂಸೆಗೆ ಉತ್ತರವಾಗಿ ಹಿಂಸೆ
ಮನೆಯೊಳಗಿನ ಬೆಂಕಿ ಮನೆಯನ್ನೇ ಸುಟ್ಟಿತು
ಹಿಂದೂ ಮುಸ್ಲಿಂ ದಳ್ಳೂರಿ

ಮಹಾತ್ಮನ ಸಂಪೂರ್ಣ ಸ್ವರಾಜ್ಯಕ್ಕೆ
ಕೊಡಲಿ ಏಟು ಕೈಕಾಲು ತುಂಡರಿಸಿದಂತೆ
ಭಾರತ ಇಬ್ಬಾಗ
ಭಾರತ ಮಾತೆ ಅಂಗವಿಕಲೆ

ಕೋಮು ದಳ್ಳುರಿ ಬೆಂಕಿಯನು
ಮಹಾತ್ಮನ ಬೊಗಸೆಯಲ್ಲಿಟ್ಟು
ಅಟ್ಟಹಾಸ ಮೆರೆದರಿವರು
ಭಾರತಮಾತೆಯ ಒಡಲಿನ ಬೆಂಕಿಗೆ ತುಪ್ಪ ಸುರಿದರು

ಮಹಾತ್ಮನ ಹೃದಯಕ್ಕೆ ಕೋಮು ಬರೆ ಸ್ವಾತಂತ್ರೋತ್ಸವಕ್ಕೆ ಬಹಿಷ್ಕಾರ ಎಂದ ಮಹಾತ್ಮ
ನಂದಾದೀಪದಂತೆ ದೇಹ ಉರಿಸಿ
ಕೋಮು ದಳ್ಳುರಿಯ ಬೆಂಕಿಯ ಶಮನ

ಅಂದು ಬ್ರಿಟಿಷರು ಹೊತ್ತಿಸಿದ ಕೋಮು ದಳ್ಳೂರಿ ಇಂದಿಗೂ ಉರಿಯುತ್ತಿದೆ
ನಮ್ಮ ನಮ್ಮ ಮನೆಗಳಲ್ಲಿ
ಎಲ್ಲರೂ ನಮ್ಮವರೇ ಎಂದ ಮನಗಳಲ್ಲಿ

ಗಾಂಧಿ ನೀನಿದ್ದಿದ್ದರೆ
ಖಂಡಿತವಾಗಿ ಒಂದುಗೂಡಿಸುತ್ತಿದ್ದೆ ಎಲ್ಲರನೂ
ಕೂಡಿ ಬಾಳಿದವರ ಭಾವೈಕ್ಯ
ಸ್ವರ್ಗ ತೋರಿಸುತ್ತಿದ್ದೆ


About The Author

Leave a Reply

You cannot copy content of this page

Scroll to Top