ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಸಿದ್ರೆ ಕೈಲಾಸ ಅಂತಾರಲ್ಲಾ
ಇಲ್ಲದಿದ್ರೆ ಪರಲೋಕ ತೋರಸ್ತಾರಲ್ಲಾ
ಬದುಕಿ ಬಾಳುವ ಜೀವಕೆ
ಕವಡೆ ಬೆಲೆನೂ ಇಲ್ವಲ್ಲಾ

ಕಾಸಿದ್ರೆ ಶಿವಾ ಇಲ್ದಿದ್ರೆ ಶವಾ
ಇದ್ದವರ ಬಲಿ ಬಂದು ನಿಲ್ಲಲು
ಹೆದರ್ತಾನೆ ಜವಾ

ಕಾಸಿಗಾಗಿ ಹೋರಾಟ ಕಾಸಿಗಾಗಿ ಕೂಗಾಟ
ಇದರ ಮುಂದೆ ನಡೆಯುವುದೇ
ಮಾನವರ ಆಟ

ಕಾಸಿನ ಬೆನ್ಹತ್ತಿ ನಡೆದರೆ
ನಾವದರ ಆಳು
ನಮ್ಮ ಹಿಂದೆ ಕಾಸು ಬಂದ್ರೆ
ಅದು ನಮ್ಮ ಶ್ರಮದ ಕಾಳು

ಕಾಸಿದ್ರೆ ಸಿರಿತನ ಇಲ್ದಿದ್ರೆ ಬಡತನ
ಏನು ಇಲ್ಲದವರು ಮಾಡುವರು
ತತ್ವಜ್ಞಾನದ ಕಥನ

ಕೊಡಲಿ ಕಾವು ಕುಲಕ್ಕೆ ಮೂಲ
ಈ ಸಿದ್ಧಾಂತ ಧೃಡವಾಯಿತಲ್ಲಾ
ಹುಟ್ಟು ಹಾಕಿದ ಮನುಷ್ಯನನ್ನೆ
ಅಣು ಅಣುವಾಗಿ ಕೊಲ್ಲುತಿದೆಯಲ್ಲ

ಕಾಸಿನಿಂದ ಮನುಜನಲ್ಲಾ
ಮನುಜನಿಂದ ಕಾಸು
ಈ ನಿಜ ಅರಿತು ನಡೆದರೆ
ಕಾಸಾಗುವುದು ನಮ್ಮ ಕೂಸು

ಶ್ರಮ ಗೌರವದಿ ಗಳಿಸಿದ ಕಾಸು
ಅದು ನಮ್ಮ ಮಾನದ ದಿರಿಸು
ಜಗದಿ ಜನ ಅರಿತು ನಡೆದರೆ
ಈ ಜಗವೇ ಎಷ್ಟೊಂದು ಸೊಗಸು

About The Author

3 thoughts on “ಪ್ರಮೋದ ಜೋಶಿ ಧಾರವಾಡ ಅವರ ಕವಿತೆಕಾಸು”

  1. ಗೌರವದಿಂದ ಗಳಿಸಿದ *ಕಸುವಿನ ಕಾಸು* ನಮ್ಮ ಆತ್ಮ ಗೌರವವನ್ನ ಸದಾ ಕಾಪಾಡುತ್ತದೆ ಸರ್ ಒಳ್ಳೆಯ ಕವನ ಸರ್

    ಶುಭೋದಯ ಸರ್

  2. ಕವಿತೆಕಾಸು….ಸುಂದರ ಶೀರ್ಷಿಕೆ
    ಹದವಾಗಿ ಕವಿತೆಯನ್ನು ಕಾಸಿದ್ದೀರಿ…ಪದಗಳನ್ನು ಬೇಯಿಸಿದ್ದೀರಿ….ಮಾನವ ಕಾಸಿನ ಕೂಸಾಗಬಾರದು…ಎಂಬ ಸಂದೇಶ ನೀಡಿದ್ದೀರಿ…ಅಭಿನಂದನೆಗಳು ಸರ್

Leave a Reply

You cannot copy content of this page

Scroll to Top