ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಳೆಯ ಹಸಿರು
ಜೀವದುಸಿರು
ಕಣ ಕಣದಿ
ಮಣ್ಣ ಹೆಸರು

ಹನಿಹನಿಯಲೂ
ಒಲವ ಭಾವ
ಝರಿ ಸಿರಿಯಲೂ
ಕುಣಿವ ಜೀವ

ಎಳೆಎಳೆಯೂ
ಬುವಿಗೆ ಪರಿಚಿತ
ಬದುಕ ಭರವಸೆ
ನಗುವ ಕುಣಿತ

ಬಿರು ಬಿಸಿಲಿನ ಝಳ
ತುಂಬಿ ಬಂದಂತೆ
ಕಾಯುತಿಹುದು ನೆಲ
ಬಿಸಿಯಾದಂತೆ

ಸೋತು ಹೋಗಿದೆ
ಪಕ್ಷಿ ಬಳಗ
ಕಾದು ನಿಂತಿದೆ
ಮಾತಿನೊಳಗ

ಜಗವ ತುಂಬುವ
ನಗುವ ಹುಡುಕಿದೆ
ಹನಿ ನೀರ ಒಡಲೊಳಗೆ
ಜೀವಜಾಲ ಬದುಕಿದೆ

About The Author

6 thoughts on “ನಾಗರಾಜ ಬಿ.ನಾಯ್ಕ ಕವಿತೆ-ಜೀವಜಲ”

  1. ಮಾನವೀಯ ಸೆಲೆ ಹರಿದಿದೆ ಕವನವಾಗಿ.
    ರಾಮಮೂರ್ತಿ.

  2. ಹಸಿರು ನಮ್ಮೆಲ್ಲರ ಉಸಿರು.. ಹಸಿರ ಉಸಿರು ಕಾಯಲು ಬೇಕು ಜೀವ ಜಲ..
    ಜೀವಜಾಲವ ಕಾಯುವುದು ಹನಿ ಹನಿ ನೀರು.. ಈ ಹನಿ ನೀರನ್ನು ಉಳಿಸುವ ಕಾಯಕ ನಮ್ಮದಾಗ ಬೇಕು… ಕವಿತೆ ಚೆನ್ನಾಗಿದೆ…

    ನಾನಾ

Leave a Reply

You cannot copy content of this page

Scroll to Top