ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಸಾರ ಸಾಗರದ ಆಸೆಗಳ ತ್ಯಜಿಸಿದನು
ರಾಜಭೋಗ ಐಶ್ವರ್ಯ ತೊರೆದ ಸಿದ್ಧಾರ್ಥನು
ಜ್ಞಾನದ ಜ್ಯೋತಿಯ ತನ್ನೆಡೆಗೆ ಪವಡಿಸಿದನು
ಬೌದ್ಧ ಧರ್ಮದ ಸ್ಥಾಪನೆಗೆ ನಾಂದಿಯಾದನು

ಶಾಂತಿ ಸಹನೆ ತಾಳ್ಮೆಯ ಪರಿಪಾಲಕನು
ತ್ಯಾಗದ ಮನೋಭಾವ ಗೌತಮ ಬುದ್ಧನು
ಅಹಂಕಾರ ಗರ್ವ ಕೋಪತಾಪ ತೊರೆದವನು
ಅಜ್ಞಾನದ ಅಂಧಕಾರದ ಕತ್ತಲನು ಓಡಿಸಿದನು

ಜ್ಞಾನದ ಬೆಳಕನು ಲೋಕಕೆ ಸಾರಿದನು
ಜೀವನದ ತತ್ವಗಳ ಸತ್ವಗಳ ಅರಿತವನು
ಬೋಧಿವೃಕ್ಷದ ಅಡಿಯಲ್ಲಿ ತಪೋಗೈದನು
ಬದುಕಿನ ಪರಿಪೂರ್ಣತೆ ಬೋಧಿಸಿದನು

ಬುದ್ಧಂ ಶರಣಂ ಗಚ್ಛಾಮಿಯ ಮಾಂತ್ರಿಕನು
ಪ್ರಸನ್ನತೆ ಶಾಂತತೆ ಮುಖದಲಿ ಬೀರುವನು
ಅಹಿಂಸೆ ಸತ್ಯನಿಷ್ಠೆ ಸೌಹಾರ್ದತೆ ತಿಳಿಸಿದವನು
ನಿಷ್ಕಲ್ಮಶ ಮನಸು ಹೃದಯದ ಗುಣದವನು


About The Author

1 thought on “ಶ್ರೀಪಾದ ಆಲಗೂಡಕರ ಕವಿತೆ-ಗೌತಮ ಬುದ್ಧ”

Leave a Reply

You cannot copy content of this page

Scroll to Top