ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಲವ ಅಭಿಯಾನಕೆ‌ ಮುನ್ನುಡಿ ಬರೆಯಲು
ಬಂದುಬಿಡು
ಚೆಲುವಿನ ಮಹಲಿನ ಬಾಗಿಲು ತೆರೆಯಲು
ಬಂದುಬಿಡು

ಪ್ರತಿ ಪುಟದಲ್ಲೂ ಅಚ್ಚಳಿಯದ ಕುರುಹು
ಮೂಡಿಸಿದೆಯೇಕೆ
ಮತಿಗೆ ಪ್ರೇಮದ ತೈಲವನು ಎರೆಯಲು
ಬಂದುಬಿಡು

ಭೋಗದಿ ಮುಳುಗಿಸಿ ತನುವನು ವಿಲಾಸದಲಿ
ತೇಲಿಸಿದೆ
ತೂಗು ಉಯ್ಯಾಲೆಯಲಿ ಕೂತು ಮೆರೆಯಲು
ಬಂದುಬಿಡು

ಕಾಲ್ಗೆಜ್ಜೆಯ ನಾದದಲಿ ಪರವಶತೆ ತರಿಸಲು
ವರಿಸುವೆನು
ಹಾಲ್ಜೇನಿನ ಬಾಳಿನಲಿ‌ ಕಷ್ಟಗಳನು ಮರೆಯಲು
ಬಂದುಬಿಡು

ಮನಗಳು ಒಂದಾಗಲು ಪ್ರಣಯದ ತಲ್ಪವಿದು
ಕರೆಯಿತಲ್ಲ
ಮೀನಮೇಷ ಎಣಿಸದೆ ಅಭಿನವನ ಬೆರೆಯಲು
ಬಂದುಬಿಡು


About The Author

2 thoughts on “ಶಂಕರಾನಂದ ಹೆಬ್ಬಾಳ ಅವರ ಗಜಲ್”

Leave a Reply

You cannot copy content of this page

Scroll to Top