ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಯಲಿನಲ್ಲಿ ನಲಿದ ಗರಿಕೆ
ಮುದುರಿ ನೆಲವ ಕಚ್ಚಿತು
ಬೀದಿಯಲ್ಲಿ ಬೀಸೋ ಗಾಳಿ
ಬಿಸಿಯ ಉಸಿರ ಕಕ್ಕಿತು

ಬರದ ಛಾಯೆ ಬಡಿದು ರೈತ
ಬದುಕಿಗಂಜಿ ನರಳಿದ
ಎದಿರುಗಾಣ್ವ ಬವಣೆ ಅರಿತು
ವರುಣನನ್ನೇ ಶಪಿಸಿದ

ಕಾಡಗಿಚ್ಚು ವನಕೆಲ್ಲ ಹರಡಿ
ಸರ್ವ ಭಕ್ಷ್ಯ ಮಾಡಿತು
ಖಗ ಮೃಗವು ವನವ ಬಿಟ್ಟು ಚೀರಿ
ದೂರ ದೂರ ಓಡಿತು

ಬೆವರ ಸೆಲೆಗೆ ಸೋತು ಕಾಯ
ಬಳಲಿ ನರಳಿ ನಲುಗಿತು
ಬೇಗೆಯಿಂದ ಸೊರಗಿ ತರುವು
ಜಲದ ತಾಣ ಅರಸಿತು

ಮುಗಿಲಿಗಾತ ಹೊಗೆಯ ಸ್ಪರ್ಶ
ಹಗೆಯ ರೂಪ ತಾಳಿತು
ಮೋಡ ತಾನು ತಡೆದು ವರ್ಷ
ಕುಹಕ ಮಾಡಿ ನಕ್ಕಿತು

About The Author

5 thoughts on “ಮಾಲಾ ಚೆಲುವನಹಳ್ಳಿ ಕವಿತೆ- ಬರ”

    1. ವಾಸ್ತವ ಚಿತ್ರಣ ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಿಸಿರುವಿರಿ ಅಕ್ಕ

  1. ಬರದ ಛಾಯೆ ಯ ಕವಿತೆ ಚೆನ್ನಾಗಿದೆ ಮಾಲಾ ಮೇಡಂ..

Leave a Reply

You cannot copy content of this page

Scroll to Top