ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗದ ಹೂದೋಟಕೆ ಶಾಂತಿ ಸಹನೆಯ ಬೀಜ ಬಿತ್ತಿದೆ
ಹೆತ್ತವರ ಪೂಜಾ ಫಲವು ನೀ ಎನಿಸಿದೆ

ಎಲ್ಲರಂತೆ ನೀ ಲೌಕಿಕ ಸುಖದ ಹೊಸ್ತಿಲಿನಲ್ಲಿದ್ದೆ
ಸತಿಸುತರ ಪ್ರೇಮದ ಅಮೃತವನುಂಡಿದ್ದೆ

ಅದಾವ ಮಾಯೆಗೆ ಮನಸೋತು ಶರಣಾಯಿತು
ಅದಾವ ಕೋಲ್ಮಿಂಚು ಭವ ಬಂಧನವ ಕಳಚಿತು

ಒಂಟಿಯಾಗಿ ನಡೆದೆ ದೈವತ್ವದ ಶಿಖರಕೇರಿದೆ
ಸರಳ ಜೀವನ ತತ್ವವ ಜಗಕೆ ಸಾರಿದೆ

ಆಸೆಯೇ ದುಃಖಕ್ಕೆ ಮೂಲವೆಂದರುಹಿದೆ ನೀನಂದು
ದುರಾಸೆಯ ಕೂಪದಲಿ ಬಸವಳಿಯುತಿದೆ ಜಗ ತಾನಿಂದು

ಪ್ರತಿ ಜೀವಿಯಲೂ ಭಗವಂತನನ್ನೇ ಕಂಡೆ
ಅಖಂಡ ಧರ್ಮಪ್ರಚಾರವನೇ ಕೈಗೊಂಡೆ

ಅಂಗೂಲಿಮಾಲ ಆಮ್ರಪಾಲಿಯರ ಮನಗೆದ್ದು ಬುದ್ಧನಾದೆ
ಪ್ರೀತಿ ಶಾಂತಿ ದಯೆ ಕರುಣೆಗಳಿಗೆ ನೀ ಬದ್ಧನಾದೆ

ಯುಗ ಹೊಗಳಿದ ತೇಜವು ನೀ ಶಾಂತಿಯ ಬಂಧು
ಜಗ ಬೆಳಗಿದ ದೀಪವು ನೀ ಕಾರುಣ್ಯ ಸಿಂಧು

ಶಬರಿ ತಾನಾಗಿಹಳಿಂದು ಧರಣಿ ನಿನ್ನಾಗಮನಕೆ
ಬಾ ಇಲ್ಲಿ ಸಂಭವಿಸು ಬೆಳಕ ಬೀರಲು ಜಗಕೆ

ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ


About The Author

1 thought on “ಮಧುಮಾಲತಿ ರುದ್ರೇಶ್ ಬೇಲೂರು ಕವಿತೆ-ಶಾಂತಿಧೂತ”

  1. ಹೊಸಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ತಮಗೆ ತುಂಬು ಧನ್ಯವಾದಗಳು

Leave a Reply

You cannot copy content of this page

Scroll to Top