ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎದೆಯ ಹೊಲದಿ ಬೆಳೆದ ಕಳೆಯ ಕೀಳೋಣ
ಮನದ ಬಯಲನು ಹರವಿ ಹಸನುಗೊಳಿಸೋಣ

ಪ್ರೀತಿ ಸ್ನೇಹ ವಿಶ್ವಾಸದ ಬೀಜ ಬಿತ್ತೋಣ
ಮಮತೆ ವಾತ್ಸಲ್ಯದ ಹನಿಯ ಸಿಂಪಡಿಸೋಣ

ಹೃದಯ ತೋಟದಿ ಪ್ರೀತಿ ಸುಮವರಳಿಸೋಣ
ಮಧುರ ಬಾಂಧವ್ಯದ ಸೌಗಂಧ ಪಸರಿಸೋಣ

ಬಾಳಲಿ ಬಂದೆರಗಿದ ಕಹಿ ನೆನಪ ಮರೆಯೋಣ
ಎಲ್ಲರೊಳಗೊಂದಾಗಿ ಸಂತಸದಿ ಮೆರೆಯೋಣ

ತೇಲಿತೇಲಿ ಬರುವ ತಂಗಾಳಿಗೆ ಕಿವಿಯಾಗೋಣ
ಹೊಸ ನಾಳಿನ ಮೂಡಣಕೆ ಮನವ ತೆರೆಯೋಣ

ಕಹಿನೆನಪು ಮರೆತು ಸಿಹಿ ಘಳಿಗೆಯ ಸ್ವಾಗತಿಸೋಣ
ಬಾಳ ಹಾದಿಯಲ್ಲಿ ಮಾಸದ ಹೆಜ್ಜೆ ಗುರುತು ಉಳಿಸೋಣ

ನಾಲ್ಕು ದಿನದ ಪಯಣದಿ ನಗುನಗುತ ಸಾಗೋಣ
ದೇವನಿತ್ತ ಬದುಕಲಿ ಹಮ್ಮುಬಿಮ್ಮು ತೊರೆಯೋಣ

ಕಹಿನೆನಪ ನೆನೆನೆನೆದು ಮನವ ರಾಡಿಯಾಗಿಸದಿರೋಣ
ಸಿಹಿನಾಳೆಗಳಿಗೆ ಶುಭ ಕೋರುತ್ತಾ ಮನಕೆ ತೋರಣ ಕಟ್ಟೋಣ

About The Author

1 thought on “ಮಧುಮಾಲತಿ ರುದ್ರೇಶ್ ಕವಿತೆ-ಕಹಿ ನೆನಪು ಮರೆಯೋಣ”

  1. ತುಂಬು ಧನ್ಯವಾದಗಳು ಸರ್ ತಮ್ಮ ಪ್ರೋತ್ಸಾಹಕ್ಕೆ

Leave a Reply

You cannot copy content of this page

Scroll to Top