ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಳಿ ವಯಸ್ಸಿನಲ್ಲಿ ಬಂದ ನೆಲೆಗೆ
ಮುಗಿಬಿದ್ದ ಕರಿ ನೆನಪುಗಳು

ಬಂಧು ಗಳಿರಲಿ ಬಾಂಧವರೂ
ಸುಳಿಯಲಿಲ್ಲ ಸನಿಹಕೆ.
ಜೀವನಾಮೃತಗಳು ಎಲ್ಲೂ
ಕೈಮರಗಳಾಗಲಿಲ್ಲ!

ಕೃಷ್ಣ ಹೇಳಿದ್ದು ಶಿಷ್ಯಾ ಮಾಡು
ನಿನ್ನ ಕೆಲಸ ನೀನೇ
ಆಗುವುದು ಆಗಿಯೇ ತೀರುವುದು
ನಾ ಹೇಳಿದ ಹಾಗೇ!

ಸಿದ್ಧಾರ್ಥ ಬುದ್ಧನಾಗಿದ್ದು ಹೇಗೆ
ರಾಜನಾಗದೇ ಸಂಸಾರ ಬಿಟ್ಟಿದ್ದು ಹೇಗೆ
ತಲೆ ಬೋಳಿಸಿ ಆಸೆ ಬೀಳಿಸಿದ್ದು ಹೇಗೆ

ಕಾಯಕವೇ ಕೈಲಾಸ
ವಚನಗಳೇ ದಿಕ್ಸೂಚಿ
ಜೀವನ ಪಾತ್ರ
ಮಹಾ ನವಮಿ!

ಮಗ ಮಗಳು ನನ್ನ ತನ್ನವರು ಅವರವರ ಜೀವನ ಅವರವರಿಗೆ.
ದಾರಿ ಮುಗಿದ ನಂತರ ಬುತ್ತಿ ಗಂಟಿನ
ನಂಟೇಕೆ !

ನಗುನಗುತ್ತ ಹೊರಡು
ಬೀಗುತ್ತ ಹೊರಡು
ಇಲ್ಲಿದ್ದವರಿಗೆ ಪರದೇಶಿಗಳಿಗೆ ಪರವೂರವರಿಗೆ ಹೇಳುತ್ತ

ಕೃತಜ್ಞ ನಾ ನಿಮಗೆ ಇಷ್ಟುದ್ದ
ನಿಂತ ನೆರಳಿಗೆ,
ಆಸರೆಗೆ ಅರವಟ್ಟಿಗೆ ಕೊಟ್ಟವರಿಗೆ
ಕರ್ತವ್ಯ ನೆನಪಿಸಿದವರಿಗೆ
ಆಸೆಯನ್ನೇ ತ್ಯಜಿಸ ಹೇಳಿದವರಿಗೆ!

ದೀಪವೇ ಇರದ ರಾತ್ರಿಯ
ಕರಿ ನೆರಳು
ಇಳಿ ವಯಸ್ಸಿನಲ್ಲಿ ಇತಿಹಾಸವಾಗಲೇ ಇಲ್ಲ!

ನೆನಪುಗಳು ಮುಗಿ ಬೀಳುವ ಕಾಲ
ಮುಗಿದಿತ್ತಲ್ಲ!


About The Author

9 thoughts on “ಡಾ ಡೋ.ನಾ.ವೆಂಕಟೇಶ-ನೆನಪುಗಳು ಮುಗಿ ಬಿದ್ದಾಗ”

  1. ಚೆನ್ನಾಗಿದೆ ಮುಪ್ಪಿನ ಬವಣೆ
    .. ಡಾ. ಸೂರ್ಯ ಕುಮಾರ್ ಮಡಿಕೇರಿ

  2. ನಿಮ್ಮ ಆಂತರಿಕ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ಪ್ರಯತ್ನವನ್ನು ಮಾಡಿದ್ದೀರಿ. ಕವಿತೆ ಚೆನ್ನಾಗಿದೆ.

Leave a Reply

You cannot copy content of this page

Scroll to Top