ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಿದುವಾಯಿತು ಮುಂಗಾರಿಗೆ ನೆಲ
ಮುದ ತಂದಿತು ಅಭಿಷೇಕದ ಜಲ
ಸುಡುವ ಧರೆಗೆಲ್ಲಾ ತಂಪೆರೆಯಿತು
ಧಗೆ ಆರಿದ ಎದೆಯೆಲ್ಲ ಇಂಪಾಯಿತು

ಕೊಂಬೆಗಳ ಮೈ ಮನದಲಿ
ಚಿಗುರಿತು ಹುಮ್ಮಸ್ಸಿನ ಚಿಗುರು
ನಾಳೆಯ ಕನಸನು ಕಂಡಿತು
ಮೊಗ್ಗಾಗಿ ಅರಳುವ ಸುಮವು

ಬಯಕೆಯ ಬೇಗುದಿಗೆ ಬಾಯಾರಿದ
ಬಾಯಿಗಳಿಗೆಲ್ಲ ಚುಮುಕಿತು ಪನ್ನೀರು
ಕಂಗಳಿಗೆಲ್ಲ ತಣ್ಣನೆಯ ತಂಗಾಳಿ
ಮುದ್ಧಿಸುತಿದೆ ಪ್ರೀತಿಯಲಿ ಹಸಿರು

ಬ್ರಹ್ಮಾಂಡ ಭರವಸೆಗಳಲಿ
ನೇಗಿಲ ಗೆರೆಗಳು ಹೊಲದಲಿ
ಧರೇಯ ರತ್ನ ರೈತನ ಬೆವರಲಿ
ಮುಂಗಾರಿನ ಗಾನ ಜೀವೋತ್ಸವದಲಿ

About The Author

3 thoughts on “ಡಾ.ರೇಣುಕಾತಾಯಿ.ಸಂತಬಾ ಅವರ ಕವಿತೆ-ಮುಂಗಾರಿನ ಜೀವೋತ್ಸವ”

Leave a Reply

You cannot copy content of this page

Scroll to Top