ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಪ್ರತಿಭಟಿಸುವ ಹಾಗಿಲ್ಲ

ಧರಣಿ ಮುಷ್ಕರ ಸಂಪು
ಸರಕಾರ ವ್ಯವಸ್ಥೆ ವಿರುದ್ಧ
ಪ್ರತಿಭಟಿಸುವ ಹಾಗಿಲ್ಲ
ಇದು ಸರಕಾರದ ಅಧಿಸೂಚನೆ

ರೈತರ ಕಬ್ಬು ಒಣಗಿದೆ
ಹಳೆಯ ಪಿಂಚಣಿ ಯೋಜನೆ
ಮಹದಾಯಿ ಕಳಸಾಗೆ ಒತ್ತಡ
ಖಾಯಂ ನೇಮಕಾತಿಗೆ ಆಗ್ರಹ

ಸುವರ್ಣ ವಿಧಾನಸೌಧದ ಸುತ್ತ
ಎಳುತ್ತಿವೆ ಗುಡಿಸಲು ಟೆಂಟು
ಸಹಕಾರಿ ಸಂಸ್ಥೆ ಮುಳುಗಿಸಿದ
ಡೆಪಾಸಿಟ್ ಠೇವಣಿ ಗಂಟು

ಸರಕಾರದ ಅಬ್ಬರದ ಘೋಷಣೆ
ಹಲವು ಹುಸಿ ಯೋಜನೆ ಭರವಸೆ
ಈಡೆರಿಸದೆ ನಿತ್ಯ ಜನರ ಶೋಷಣೆ
ಕೇಳುವ ಹಾಗಿಲ್ಲ ಹಕ್ಕು ನ್ಯಾಯ

ಚಳಿಗಾಲದ ಅಧಿವೇಶನ
ಬಿಸಿ ಬಿಸಿ ಚರ್ಚೆ ಘರ್ಷಣೆ
ಬೇಕಿಲ್ಲ ಆಡಳಿತ ವಿರೋಧದವರಿಗೆ
ಪ್ರಶ್ನೆ ಮಾಡುವ ಹಾಗಿಲ್ಲ ಸೂಚನೆ
ಉತ್ತರ ಪರಿಶೀಲಿಸುತ್ತೇವೆ

ಬಡವರ ಕಾರ್ಮಿಕರ ಕಣ್ಣೀರು
ಬುಗಿಲೆದ್ದರೆ ಕ್ರಾಂತಿ ಭೀತಿ
ಅಸಹಾಯಕರ ಕೊಲ್ಲುವ
ಖಾದಿ ಕಾಕಿಗಳ ರೀತಿ

ಸತ್ತು ಹೋಗಿದೆ ಪ್ರಜಾಪ್ರಭುತ್ವ
ಸರಕಾರ ಅಧಿವೇಶನ ಸಿರಿವಂತರ ಆಟ
ಬೇಡವಾಯಿತು ಸತ್ಯ ಸಮತೆ
ಬಿತ್ತು ಗಾಂಧಿಗೆ ಎಂದೋ ಗುಂಡು

ಪ್ರತಿಭಟಿಸುವ ಹಾಗಿಲ್ಲ
ಎಚ್ಚರ ಎಚ್ಚರ ಯಾರೂ
ಸುಳಿಯುವ ಹಾಗಿಲ್ಲ ಸುವರ್ಣ ಸೌಧ

ಬಡವರ ಪ್ರಜೆಗಳ ಸ್ಮಶಾನ ಮೌನ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

10 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ಪ್ರತಿಭಟಿಸುವ ಹಾಗಿಲ್ಲ”

  1. ವಾಸ್ತವದ ಕಟುಸತ್ಯವನ್ನು ಎಳೆಎಳೆಯಾಗಿ ಬಿಂಬಿಸಿ… ಪ್ರಜಾಪ್ರಭುತ್ವವನ್ನು ಪ್ರಶ್ನಿಸುವ ಕವನ ಎಲ್ಲರನ್ನೂ ಎಚ್ಚರಗೊಳಿಸುವಂತಿದೆ.. ಸರ್

    ಸುಶಿ

  2. ಇಂತಹ ಸಂದರ್ಭದಲ್ಲಿ ತಮ್ಮ ಕವನ ಇನ್ನೂ ಹರಿತ ಮತ್ತು ತೀವ್ರವಾಗಿ ಸರ್

    ಶ್ರೀಕಾಂತ ಹೆಗಡೆ

  3. ವಾಸ್ತವಿಕ ನೆಲೆಗಟ್ಟಿನಲ್ಲಿ ರಚಿಸಿದ್ದು ಸುಂದರ ಮತ್ತು ವೈಚಾರಿಕ

  4. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅಸಹಾಯಕತನದ ನೋವು ಸಂಕಟ ಪರಿಸ್ಥಿತಿಯ ಅನಿವಾರ್ಯತೆಯನ್ನು ಕವನದಲ್ಲಿ ಚಿತ್ರಿಸಿದ್ದೀರಿ ಧನ್ಯವಾದಗಳು ಸರ್

Leave a Reply

You cannot copy content of this page

Scroll to Top