ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಭಾರತಿ ಅಶೋಕ್ ಕವಿತೆ-ಹಣತೆ ಬೆಳಗಲು ಒಡಲ ಬೆವರೆ ಸಾಕು….

ವೈರಿ ಎದೆಯಲಿ
ಗುಲಾಬಿ ಅರಳಿದರೆ ಸಾಕು
ಬಂದೂಕಿನ ನಳಿಕೆಯಲಿ
ಕಾವ್ಯ ಸಂಗಾತಿ

ಭಾರತಿ ಅಶೋಕ್

ಹಣತೆ ಬೆಳಗಲು……ಒಡಲ ಬೆವರೆ ಸಾಕು..

ಭಾರತಿ ಅಶೋಕ್ ಕವಿತೆ-ಹಣತೆ ಬೆಳಗಲು ಒಡಲ ಬೆವರೆ ಸಾಕು…. Read Post »

ಕಾವ್ಯಯಾನ

ಮೀನಾಕ್ಷಿ, ಸೂಡಿ-ಕನ್ನಡಾಂಬೆಯ ಅಂತರಾಳ

ಕಾವ್ಯ ಸಂಗಾತಿ ಮೀನಾಕ್ಷಿ, ಸೂಡಿ- ಕನ್ನಡಾಂಬೆಯ ಅಂತರಾಳ ನಾನು ಕನ್ನಡದ ಅವ್ವ ಮಾತಾಡಕತ್ತೀನಿ ನನ್ನ ಮಡಿಲ ಕೂಸುಗಳಿರಾ,ಎತ್ತ ಹೊಂಟೀರಿ ಸ್ವಲ್ಪ ನಿಲ್ರಿ ನಿಂತ ಕೇಳ್ರಿನಿಮ್ಮವ್ವನ ಒಡಲಾಳದ ಸಂಕಟಾನಶತ ಶತಮಾನಗಳಿಂದಲೂಬಂಗಾರದ ಬಿಂದಿಗೆ ಹಿಡಿದುಬಿಂಕದಲಿ ಬದುಕಿದಾಕಿ ನಾನನ್ನ ನೆಲ, ನನ್ನ ಜಲ,ನನ್ನ ಜನ ,ನನ್ನ ಮನ ಅಂತಬಂಗಾರದಂತ ಬದುಕನ್ನ ಕಟಗೊಂಡಾಕಿನಾ ಜ್ಞಾನಪೀಠಗಳೆಂಬ ಅಷ್ಟ ವಜ್ರಗಳಮೂಗಬಟ್ಟ ಇಟಗೊಂಡ ಮೆರದಾಕಿ ನಾಹಂಚಿ ಹರಿದ ಸೀರೆ ಬಿಡಿಸಿಏಕೀಕರಣದ ರೇಷ್ಮಿ ಉಡಿಸಿಶ್ರೀಗಂಧದ ಬಟ್ಟ ಇಟ್ಟಂತಾಶ್ಯಾನ್ಯಾ ಮಕ್ಕಳನ ಪಡೆದಾಕಿ ನಾ ಎಲ್ಲಿ ಹ್ವಾದವು ಆ ಬಂಗಾರದಂತದಿನಗೊಳು???ಕೇಳ್ರಿ ಮಕ್ಕಳಿರಾ ಒಂತಟಗ ನನ್ನ ಸಂಕಟಾನ ನಾನು ನಿಮ್ಮವ್ವ ಕನ್ನಡದ ಅವ್ವಮೌನವಾಗಿ ಬಿಕ್ಕಾಕತ್ತಿನಿತಮಿಳು ತೆಲುಗು ಮರಾಠಿ ಆಂಗ್ಲಈ ಸವತ್ಯಾರು ಸದ್ದಿಲ್ಲದನನಗ ಗೋರಿ ಕಟ್ಯಾರುಇನ್ನೂ ಕಟ್ಟಾಕತ್ಯಾರು!!! ಇವರ ದರ್ಪದ ಬೆಂಕಿಉಡ್ಯಾಗ ಕಟಗೊಂಡದಿನಕ್ಕ ದಿನಾ ನಾಸಾಯಾಕತ್ತೆನು ! ನನ್ನ ಕರುಳಿನ ಕುಡಿಗಳಿರಾಒಂದ ನೆಪ್ಪ ಇಡ್ರಿನೂರ ನದಿ ಕೂಡಿ ಹರದರೂಅದಕ್ಕ ಸಮುದ್ರ ಅನ್ನುದಿಲ್ಲಸಾವಿರ ಸವತ್ಯಾರ ಕೂಡಿ ನಿಂತ್ರುಹಡೆದವ್ವನ ಸಮ ಯಾರಿಲ್ಲ ! ನನ್ನ ಮಡಿಲ ಮಕ್ಕಳಿರಾಆಂಗ್ಲ ಆಂಟಿ ಅಬ್ಬರದಾಗನನ್ನ ಮರತರ ಹ್ಯಾಂಗ???ಇಂಗ್ಲೀಷ್ ಎಂಬ ಬಿಸಿಲ್ಗುದರಿ ಬೆನ್ನೇರಿನನ್ನ ಮೂಲಿ ಸೇರಿಸಿ ಮೆರದರ ಹೆಂಗಬರ್ರಿ ಎಲ್ಲಾರೂನನ್ನ ಒಡಲ ಅಗ್ನಿಗೆ ನಿಮ್ಮರುವಿನಎಣ್ಣೆ ಏರಿಯುತಸ್ವಾಭಿಮಾನದ ದೀಪ ಹಚ್ಚೋನುಜಗಕೆಲ್ಲ ಕನ್ನಡದ ಹಿರಿಮೆ ಸಾರುತಾ ಬರ್ರಿಬರ್ರೀ ಎಲ್ಲಾರೂಸೊಕ್ಕಿನ ಸವತ್ಯಾರ ಹೆಡಮುರಗಿ ಕಟ್ಟಿ ನಿಮ್ಮವ್ವನ ಬಂಗಾರದ ತೆರ ಏರಸಾಕಮುಗಿಲು ಮುಟ್ಟೋ ಕೂಗಿನ್ಯಾಗಕನ್ನಡದ ದೀಪ ತೇಲಿ ಬಿಡಾಕ ಒಂದಾಗಿ ಚಂದಾಗಿ ಮುಂದಾಗಿ ಬರ್ರಿನಾ ನಿಮ್ಮವ್ವ ಕನ್ನಡದಅವ್ವ ಕರಿಯಾಕತ್ತೀನಿನೀವು ಒಟ್ಟಾಗಿ ಬರೋದಾರಿನ ಕಾಯಾಕತ್ತೇನೆ.. ಮೀನಾಕ್ಷಿ ಸೂಡಿ

ಮೀನಾಕ್ಷಿ, ಸೂಡಿ-ಕನ್ನಡಾಂಬೆಯ ಅಂತರಾಳ Read Post »

ಕಾವ್ಯಯಾನ

ಡಾ ಅನ್ನಪೂರ್ಣಾ ಹಿರೇಮಠ-ಹಚ್ಚಿರಿ ದೀಪ

ಕಾವ್ಯಯಾನ
November 12, 2023admin
ಡಾ ಅನ್ನಪೂರ್ಣಾ ಹಿರೇಮಠ-ಹಚ್ಚಿರಿ ದೀಪ
ಕಾವ್ಯಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ-

ಹಚ್ಚಿರಿ ದೀಪ

ಡಾ ಅನ್ನಪೂರ್ಣಾ ಹಿರೇಮಠ-ಹಚ್ಚಿರಿ ದೀಪ Read Post »

ಇತರೆ

ನುಗ್ಗೇಹಳ್ಳಿ ಪಂಕಜ —-‘ಒಂದು ಕಾಲದ ಶ್ರೇಷ್ಠ ಲೇಖಕಿ ಈಗ ಅಜ್ಞಾತ ವಾಸಿ’ ದೀಕ್ಷಿತ್ ನಾಯರ್

ನುಗ್ಗೇಹಳ್ಳಿ ಪಂಕಜ —-‘ಒಂದು ಕಾಲದ ಶ್ರೇಷ್ಠ ಲೇಖಕಿ ಈಗ ಅಜ್ಞಾತ ವಾಸಿ’ ದೀಕ್ಷಿತ್ ನಾಯರ್

ನುಗ್ಗೇಹಳ್ಳಿ ಪಂಕಜ —-‘ಒಂದು ಕಾಲದ ಶ್ರೇಷ್ಠ ಲೇಖಕಿ ಈಗ ಅಜ್ಞಾತ ವಾಸಿ’ ದೀಕ್ಷಿತ್ ನಾಯರ್ Read Post »

ಇತರೆ

ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್

ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್ ಈಗ ಈ ಆಂಡ್ರಾಯ್ಡ್ ಬಂದ ಮೇಲೆ ಅಕ್ಷರಗಳೇ ಹಾಳಾಗಿ ಹೋದ್ವು !ಜನರ ಕಣ್ಣಲ್ಲಿ ನನ್ನಕ್ಷರಗಳು ಹಾಳಾದಂತೆ ನಾ ನಿಜ್ವಾದ ಡಾಕ್ಟ್ರಾದೆ, ಬಹಳ ತಿಳಿದವನಾದೆ,ಮತ್ತುಬಹಳಸೋಮಾರಿಯಾದೆ! ಈ ಆಂಡ್ರಾಯ್ಡ್ಬಂದ ಮೇಲೆನನ್ನ ಜೀವನದಲ್ಲಿ ಪ್ರಪಂಚವೇ ಸಂಕೀರ್ಣವಾಯಿತು. ವೈದ್ಯಕೀಯ ಸಾಹಿತ್ಯದ ಜೊತೆ ಜೊತೆ ವೈದ್ಯಕೀಯ ವಿಜ್ಞಾನ, ಮತ್ತು ಇತರೇ ವಿಜ್ಞಾನಗಳ ಪ್ರಾಕಾರ ಕೈಬೆರಳಲ್ಲೆ ಅರಳ ತೊಡಗಿದುವು! ಮರೆತು ಹೋಗಿದ್ದ ಸಾಹಿತ್ಯ ದಿಗ್ಗಜಗಳು ಹೊಳೆಯ ತೊಡಗಿದರು .ಆಗಿ ಹೋದ ಕಲೆಗಳು ಪುನಃ ಪುನಃ ಮನಸಲ್ಲಿ ಮೊಳೆಯ ತೊಡಗಿದುವು .ಕನಸಲ್ಲಿ ದಷ್ಟ ಪುಷ್ಟವೂ ಆಗ ತೊಡಗಿದುವು. ನನ್ನ ಮೊಮ್ಮಕ್ಕಳು ಹೊಸ ಹೊಸ ಆಟಗಳಲ್ಲಿ ನಿಷ್ಣಾತರಾದರು. ನನ್ನ ಬಾಲ್ಯದ ಎಲ್ಲಾ ಆಟಗಳಿಗೂ ತಿಲಾಂಜಲಿ ಯಿಟ್ಟರು. ಮತ್ತೆ ಈ ಆಂಡ್ರಾಯ್ಡ್ ಬಂದಂದಿನಿಂದ ಇಂದಿನ ತನಕದ ಘಟನೆಗಳ ಚಿತ್ರ ಅಂತ ರ್ಜಾಲದಲ್ಲಿ ದಾಖಲಾದವು .ಆಂಡ್ರಾಯ್ಡ್ ಬಂದಮೇಲೆ ನನ್ನ ರೋಗಿಗಳು ನಿರರ್ಗಳವಾಗಿ ನನ್ನ (ನಿದ್ರೆ ಕೆಡಿಸಿದರು.) ಸಂಪರ್ಕಕ್ಕೆ ಬಂದರು. ಈ ಫೋನ್ ಬಂದ ಮೇಲೆ ಕೈಲೆಕಾಸಿದ್ರೆ ಸಾಕು.ಕೊಳ್ಳುವ ಕ್ರಿಯೆ ಚಿಟಿಕೆ ಹೊಡಿದಷ್ಟೆ ಸಕ್ರಿಯವಾಯಿತು(ಬ್ಯಾಂಕ್ ಬ್ಯಾಲೆನ್ಸ್ ಸಪೂರವಾಯಿತು) ಪಟ್ಟಿ ಉದ್ದ. ದುರ್ಗಣಗಳೂ ಮೊಳೆತಿವೆ. ಇರಲಿ ನಿಗಾ ನಿನಗಿಂತ ಕಿರಿಯ ಇದ ಉಪಯೋಗಿಸುವಲ್ಲಿ.ಇರಲಿ ನಿಗಾ ಪ್ರಪಂಚದವ್ಯವಹಾರಗಳಲ್ಲಿ .ತಿಳಿದಷ್ಟೂ ತಿಳಿಯ ಬೇಕಾದ್ದು ಬಹಳಿರುವ ,ಬದುಕಿದಷ್ಟೂ ಸಾವಿಗೆ ಹತ್ತಿರವಾಗುವ ಬದುಕಿನ ಬವಣೆಯ ತಿಳಿದಷ್ಟೂ ಅಸಹಾಯಕನಾಗುವ ಪರಿಯಲ್ಲಿ! ಡಾ.ಡೋ.ನಾ.ವೆಂಕಟೇಶ

ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್ Read Post »

You cannot copy content of this page

Scroll to Top