ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹನಿಬಿಂದು

ತೇರ ಎಳೆಯೋಣ

ತೇರನು ಎಳೆಯೋಣ ಕನ್ನಡ ತೇರನು ಎಳೆಯೋಣ
ಹಾಡನು ಹಾಡೋಣ ನಾಡಿನ ಹೆಮ್ಮೆಯ ಮರೆಯೋಣ//
ಪದವನು ಕಟ್ಟೋಣ ಕನ್ನಡ ನುಡಿಯನು ಆಡೋಣ
ಭಾಷೆಯ ಅರಿಯೋಣ ಕನ್ನಡ ಚಿನ್ನವ ಉಳಿಸೋಣ…

ಅಕ್ಕಿ ರಾಗಿ ಜೋಳಗಳ ರುಚಿಯನು ಮೆಲ್ಲೋಣ ಇಲ್ಲಿ ರುಚಿಯನು ಮೆಲ್ಲೋಣ
ಕಂಚಿನ ಮೂರ್ತಿಯ ಪ್ರತಿಮೆಯಲಿ ಶಬ್ದವ ಕೇಳೋಣ ಕನ್ನಡ ಶಬ್ದವ ಕೇಳೋಣ..

ಕಾವೇರಿ ನೀರಿನ ರುಚಿಯಲ್ಲಿ ಕನ್ನಡ ಪದಗಳನಾಡೋಣ
ಭಾರತಿ ತಾಯಿಯ ಪಾದದಲಿ ಕನ್ನಡ ಅಂಗಡಿ ತೆರೆಯೋಣ
ಲೋಕದ ಭೂಪಟ ಬುಡದಲ್ಲಿ ಕರ್ನಾಟಕವ ಹುಡುಕೋಣ

ರಾಜ್ಯ ದೇಶಗಳ ಗಡಿಗಳ ಕಾಯುವ ವೀರರ ನೆನೆಯೋಣ ಅವರ ಒಳಿತನು ಬಯಸೋಣ
ಕನ್ನಡ ಉಳಿಸಲು ಪಣ ತೊಟ್ಟಿರುವ
ಮನಗಳ ನೆನೆಯೋಣ ಅವರ ಬೆನ್ನಿಗೆ ನಿಲ್ಲೋಣ
ಕರ್ನಾಟಕದ ಬಾವುಟವ ಪದ ಪದದಲ್ಲೂ ಹಾರಿಸೋಣ
ಎಲ್ಲರೂ ಚೆನ್ನಾಗಿ ಇರಲೆಂದು ಕ್ಷಣ ಕ್ಷಣ ಹಾರೈಸೋಣ ನಾವೆಲ್ಲ…
ಕ್ಷಣ ಕ್ಷಣ ಹಾರೈಸೋಣ..
ಭಾಷೆಯ ಉಳಿಸೋಣ..ಕನ್ನಡ ಭಾಷೆಯ ನುಡಿಯೋಣ

———————

ಹನಿಬಿಂದು

About The Author

Leave a Reply

You cannot copy content of this page

Scroll to Top