ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

“ಇರುಳು ಕಳೆದು ಹಗಲು ಮೂಡಲಿ”

ಬದುಕಲ್ಲಿ ಆತಂಕ ಹತಾಶೆ ತುಂಬಿದೆ
ಕನಸು ಮುರಿದು ನಿರಾಸೆ ಮೂಡಿದೆ
ಅಸೂಯೆ ಅವಮಾನ ಸಹಿಸಲಾಗದೆ
ನೆಮ್ಮದಿಗಾಗಿ ಮನ ಹುಡುಕಾಡಿದೆ

ಒತ್ತಡದ ಬದುಕಲ್ಲಿ ಆಯಾಸವಿದೆ
ನಿತ್ಯ ಚಿಂತೆಯಲ್ಲಿ ಬೆಂದು ಬಳಲಿದೆ
ಸೂರಿದ್ದರೂ ಸೋರುತಿದೆ ಮಾಳಿಗೆ
ದೇವರ ಮೊರೆ ಹೋದೆ ಮನಶ್ಯಾಂತಿಗೆ

ಚಳಿ ಮಳೆ ಬಿರುಗಾಳಿ ಬೀಸಿದರೂ
ದುಃಖ ದುಮ್ಮಾನಗಳು ಏನೇ ಇದ್ದರೂ
ಸಹಿಸುತ ನಿಂತೆನು ಅಲುಗಾಡದಂತೆ
ಗಟ್ಟಿಮುಟ್ಟಾದ ಮರದ ಬೇರಿನಂತೆ

ಭಗವಂತ ಸ್ಪಂದಿಸಿ ದಯೆ ತೋರಲಿ
ಇರುಳು ಕಳೆದು ಹಗಲು ಮೂಡಲಿ
ಕತ್ತಲೆಯ ಬಾಳಲ್ಲಿ ಬೆಳಕು ಹರಿಯಲಿ
ಸುಂದರ ನೆಮ್ಮದಿಯ ಬದುಕಾಗಲಿ

ಸಿಹಿ ಕಹಿ ಘಟನೆಗಳ ಅನುಭವಿಸಿ
ಸೋಲು ಗೆಲುವುಗಳನು ಸ್ವೀಕರಿಸಿ
ಜೀವನದ ಜೋಕಾಲಿಯ ತೂಗಿಸಿ
ನಲಿಯಬೇಕು ಕಷ್ಟಗಳನು ಕರಗಿಸಿ


ಜಯಶ್ರೀ ಎಸ್ ಪಾಟೀಲ

About The Author

2 thoughts on “ಜಯಶ್ರೀ ಎಸ್ ಪಾಟೀಲ ಕವಿತೆ “ಇರುಳು ಕಳೆದು ಹಗಲು ಮೂಡಲಿ””

Leave a Reply

You cannot copy content of this page

Scroll to Top