ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ

ಸಾಧನೆಯ ಹಾದಿಯಲಿ ಎಡವಿದವರು ಎಷ್ಟೋ ಜನ
ಕಲ್ಲು ಮುಳ್ಳಿನ ದಾರಿಯನು ತುಳಿದವರು ಎಷ್ಟೋ ಜನ

ಲಂಚಕ್ಕೆ ಕೈ ಒಡ್ಡಿದ ಭ್ರಷ್ಟ ಪ್ರಾಮಾಣಿಕನಾಗಲು ಸಾಧ್ಯವೇ
ಕಷ್ಟ ಸುಖದ ಪಯಣದಲಿ ನಡೆದವರು ಎಷ್ಟೋ ಜನ

ಏಳು ಬೀಳು ಎಲ್ಲರ ಜೀವನದಲ್ಲಿ ಸರ್ವೇಸಾಮಾನ್ಯ
ನರನ ನಂಬಿಕೆಯ ಪಥದಲಿ ಸೋತವರು ಎಷ್ಟೋ ಜನ

ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಕಾಲ ಬದಲಾಗಿದೆಅನ್ಯರಿಗೆ ಅಂಜಿ ಅವನತಿ ಹೊಂದಿದವರು ಎಷ್ಟೋ ಜನ

ಕಾಯಕವೇ ಕೊನೆಯ ಅಸ್ತ್ರ ಎಂದು ನಂಬಿದವನು ಕಂಸ
ಕಪಟ ನಾಟಕ ಮಾಡುತ್ತಲೇ ಬೀಗಿದವರು ಎಷ್ಟೋ ಜನ

——————————–

ಕಂಚುಗಾರನಹಳ್ಳಿ ಸತೀಶ್

About The Author

Leave a Reply

You cannot copy content of this page

Scroll to Top