ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಪಾಟೀಲ್ ಕವಿತೆ

ಪಾವನವಾಯಿತು

ಬಸವಣ್ಣನ  ನಾ
ಅರಿತಾಗ
ಮಹಾದೇವಿಯಕ್ಕನ
ತಿಳಿದಾಗ
ಮಡಿವಾಳ  ಮಾಚಯ್ಯನ
ಭಕ್ತಿ ರಸ  ಪ್ರವಾಹದಲಿ
ಪಾವನವಾಯಿತು
ನನ್ನೀ  ಜೀವನ

ಮಹಾಜ್ಞಾನಿ  ಚೆನ್ನಬಸವಣ್ಣನವರ
ಚಿತ್ತ ಮನ  ಭಾವಗಳ
ಅಳವಡಿಸಿಕೊಂಡು
ಸಿದ್ಧರಾಮೇಶ್ವರರ
ಕರ್ಮಯೋಗವನ್ನು
ಪರಿಪಾಲಿಸಿ
ಪಾವನವಾಯ್ತು
ನನ್ನೀ  ಜೀವನ

ಅಲ್ಲಮರ  ವೈರಾಗ್ಯಕ್ಕೆ
ನಾ  ಮಣಿದು
ಮಾದಾರ  ಚೆನ್ನಯ್ಯನವರ
ನಡೆ ನುಡಿ  ಒಂದಾದದ್ದು
ಡೋಹರ  ಕಕ್ಕಯ್ಯನವರ
ಆಸೆ  ಆಮಿಷಗಳು  ಅಳಿದದ್ದು
ತಿಳಿಯುತ
ಪಾವನವಾಯಿತು
ನನ್ನೀ  ಜೀವನ

ಜೇಡರ  ದಾಸಿಮಯ್ಯನವರ
ನಿರ್ಮೋಹ  ಭಕ್ತಿ
ಅಂಗವು  ಲಿಂಗವಾಗುವುದ
ಸುಲಭೋಪಾಯವನ್ನು
ತೆರೆದಿಟ್ಟ  ಆದಯ್ಯ  ಶೆಟ್ಟಿಯ
ಪರಮಾನಂದವನ್ನು ನೋಡಿ
ಪಾವನವಾಯ್ತು
ನನ್ನೀ  ಜೀವನ

ಅದು ಬೇಕು ಇದು ಬೇಕು
ಎಂಬ  ವಾಂಚಲ್ಯ  ಬೇಡ
ಎನ್ನುವ  ಸಕಲೇಶ  ಮಾದರಸರ
ತತ್ವವ  ನೋಡಿ
ಅಂಬಿಗರ  ಚೌಡಯ್ಯನವರ
ಮಾಯೆಯ  ತೊಡೆಯುವ
ಗುಣವ  ನೋಡಿ
ಪಾವನವಾಯ್ತು
ನನ್ನೀ  ಜೀವನ

ಮೇದಾರ  ಕೇತಯ್ಯನವರ
ಪಂಚೇದ್ರಿಯಗಳ  ಹತೋಟಿಯ
ಅರಿತು
ಕಿನ್ನರಿಯ  ಬ್ರಹ್ಮಯ್ಯನ
ಗುರು  ಲಿಂಗ ಜಂಗಮದ
ಆಳವಾದ  ಜ್ಞಾನವ ತಿಳಿದು
ಪಾವನವಾಯ್ತು
 ನನ್ನೀ  ಜೀವನ


ಸುಧಾ ಪಾಟೀಲ್

About The Author

Leave a Reply

You cannot copy content of this page

Scroll to Top