ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಹಮೀದಾ ಬೇಗಂ ದೇಸಾಯಿ

ಯಾರ ಮೊರೆ

ಅಜ಼ಾನ್ ಆಗುತಿದೆ
ದೂರದ ಮಸೀದಿಯಲಿ
ಗಂಟೆ ಮೊಳಗುತಿದೆ
ಓಣಿಯ ದೇವಸ್ಥಾನದಲಿ
ಮೇಣಬತ್ತಿ ಬೆಳಗುತಿದೆ
ಸಮೀಪದ ಚರ್ಚಿನಲಿ…

ಆದರೆ, ಖುಷಿಯಾಗಿಲ್ಲ ಯಾರೂ
ನಿಷ್ಕ್ರಿಯ ಯಂತ್ರದಂತೆ ;
ಅಲ್ಲಾಹು ,ಶಿವ, ಏಸು ಎಲ್ಲರೂ
ಕಣ್ಮುಚ್ಚಿದ್ದಾರೆ ಒಳಗಣ್ಣನು
ಕಣ್ತೆರೆದರೂ ಏನೂ ಕಾಣದಂತೆ ;
ಜಾಣ ಕಿವುಡರಾಗಿದ್ದಾರೆ
ಜಗದ ಕೊಳಕು ಸಂತೆಯ ಗದ್ದಲಕೆ…

ಯಾರ ಮೊರೆ ಕೇಳಬೇಕವರು..?
ಹಸಿರು ಕೇಸರಿ ಬಿಳಿ
ಕತ್ತಿ ತಲವಾರಗಳ ಝಳಪಿನ
ಕಿತ್ತಾಟದ ಗೋಳಿನ ಹುಚ್ಚಾಟವನ್ನು…

ಆತಂಕದ ಗಳಿಗೆಗಳು
ದಿನ ದಿನವೂ ತುಳಿಸಿಕೊಂಡವನಿಗೆ
ಬದುಕಿನ ಭರವಸೆ ಇಲ್ಲ
ಬೆಳಗಾಗುವ ಖಾತ್ರಿ ಇಲ್ಲ
ಬರೀ ಕಪ್ಪು ರಾತ್ರಿಗಳು…
ತೋಳಗಳ ಕೆಂಗಣ್ಣಿನ ನೋಟಗಳು…

About The Author

1 thought on “ಹಮೀದಾ ಬೇಗಂ ದೇಸಾಯಿ-ಯಾರ ಮೊರೆ..”

  1. Dr.Pushpavati Shalavadimath

    ತುಂಬಾ ಅರ್ಥಗರ್ಭಿತ ಕವಿತೆ ಮೇಡಂ
    ಡಾ. ಪುಷ್ಪಾ ಶಲವಡಿಮಠ

Leave a Reply

You cannot copy content of this page

Scroll to Top