ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ವಿಶ್ವನಾಥದತ್ತ ಭುವನೇಶ್ವರಿಯ ಮಗನಾಗಿ ಹುಟ್ಟಿದರು ವಿವೇಕಾನಂದ
ಭಾರತೀಯ ಸಂಸ್ಕೃತಿಯ ವಿಶ್ವವಿಖ್ಯಾತಕ್ಕೆ ಮೆರಗಾದರು ವಿವೇಕಾನಂದ

ಚಿಕಾಗೋದಲ್ಲಿಯ ಭಾಷಣದಿ ವಿಶ್ವವನ್ನೇ ಬೆರಗುಗೊಳಿದ್ದರು
ಸಹೋದರತ್ವದ ಗುಣದಿ ವೀರಸನ್ಯಾಸಿಯಾಗಿ ಬೆಳೆದರು ವಿವೇಕಾನಂದ

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಘರ್ಜಸಿದ ವೀರಪುತ್ರ
ಯುವಕರಲ್ಲಿದ್ದ ಸೋಮಾರಿತನ ಬಡಿದೋಡಿಸಿದರು ವಿವೇಕಾನಂದ

ಜೀವ ನಮ್ಮ ಕೈಯ್ಯಲ್ಲಿ ಇಲ್ಲ ಜೀವನ ನಮ್ಮ ಕೈಯ್ಯಲ್ಲಿದೆ ಎನ್ನುವ ಗಟ್ಟಿತನ
ಮೂಢನಂಬಿಕೆ ತೊರೆದು ಜೀವನ ಮಾರ್ಗ ತೋರುಸಿದರು ವಿವೇಕಾನಂದ

ಭಾರತ ನಿರ್ಮಾಣ ಅದಮ್ಯ ಚೇತನ ಆಧ್ಯಾತ್ಮಿಕತೆಯ ಮೇರುಪರ್ವತ ಇವರು
“ಮಾಜಾ” ನರೇಂದ್ರರು ವಿಶ್ವ ಮಾನವ ಸಿಡಿಲು ಸಂತರಾಗಿ ಮಿಂಚಿದರು ವಿವೇಕಾನಂದ


About The Author

Leave a Reply

You cannot copy content of this page

Scroll to Top