ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗೊಬ್ಬರದೆದೆಯ ಮೇಲೆ ಬೀಜ ಬಿತ್ತಬೇಕಿದೆ

ಡಾ.ಪುಷ್ಪಾ ಶಲವಡಿಮಠ

ಸತ್ತು ಹೋದವರೇ
ಮಣ್ಣಲಿ ಮಣ್ಣಾದಿರಿ
ನೆನಪುಗಳ ಹಂದರವನೆ
ಹಾಕಿ ಹೊದಿಸಿ ಹೋದಿರಿ

ಸತ್ತು ಹೋದವರೇ
ಬದುಕಿದ ನಮ್ಮಗಳ
ಕೊರಗಿಸಿ ಸುಟ್ಟು ಸುಣ್ಣವಾಗಿಸಿದಿರಿ
ಆದರ್ಶಗಳ ಮೂಟೆ ಬಿಟ್ಟು ಹೋದಿರಿ

ಸತ್ತು ಹೋದವರೇ
ನಶ್ವರ ಬದುಕಿಗೆ ಪಾಠವಾದಿರಿ
ಇರುವಷ್ಟು ದಿನ ಪ್ರೀತಿ ಹಂಚಿದಿರಿ
ಕಣ್ಣ ಹನಿ ಆರಿದರೂ ಕಣ್ಣಗೊಂಬೆಯಾದಿರಿ

ಸತ್ತು ಹೋದವರೇ
ಮಸಣದವರೆಗೆ ಕಳುಹ ಬಂದವರು ನಾವು
ಸಮಾಧಿಯೊಳಗೆ ಇಣುಕಲಾರೆವು
ಸವಿನೆನಪುಗಳ ಹೂಳಲಾರದಾದೆವು

ಸತ್ತು ಹೋದವರೇ
ಬದುಕಿದ ನಾವುಗಳು ಜಾತಿಮತಪಂಥ
ದ್ವೇಷಾಸೂಯೆ ಮೀರಬೇಕಿದೆ
ಗಡಿಗಳಾಚೆ ಕೈಯ ಚಾಚಬೇಕಿದೆ
ಸತ್ತ ಮರುಗಳಿಗೆ ಒಯ್ಯುವುದಾದರೂ ಏನಿದೇ?

ಸತ್ತು ಹೋದವರೇ
ರಕ್ತಮಾಂಸಮಜ್ಜೆಯ ದೇಹ ಕಂದುವುದು
ಕೊಳೆತು ಗೊಬ್ಬರವಾಗುವುದು
ಗೊಬ್ಬರದೆದೆಯ ಮೇಲೆ ಬೀಜ ಬಿತ್ತಬೇಕಿದೆ

ಸತ್ತು ಹೋದವರೇ
ಸತ್ತು ಹೋದವರಲ್ಲ ನೀವು
ಬೀಜ ಬಿತ್ತಿ ಮನುಜಮತದ ಧ್ವಜವ ನೆಟ್ಟವರು
ಸತ್ತು ಬದುಕುತಿರುವವರಿಗೆ ಬದುಕಲು ಕಲಿಸಿದವರು


About The Author

1 thought on “ಡಾ.ಪುಷ್ಪಾ ಶಲವಡಿಮಠ-ಗೊಬ್ಬರದೆದೆಯ ಮೇಲೆ ಬೀಜ ಬಿತ್ತಬೇಕಿದೆ”

Leave a Reply

You cannot copy content of this page

Scroll to Top