ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಕ್ರಾಂತಿ

ಎಳ್ಳುಬೆಲ್ಲಿನ ಸಂಕ್ರಮಣ

ಸುಲೋಚನಾ ಮಾಲಿಪಾಟೀಲ

ಸೂರ್ಯ ತನ್ನ ಪಧ ಉತ್ತರದಲ್ಲಿರಿಸಿದ
ಸಂಕ್ರಮಣವ ಹಬ್ಬ ನೀವೆಲ್ಲ ಆಚರಿಸಲೆಂದ
ಸಂಗಮೇಶ್ವರನ ಜಾತ್ರೆ ನಡೆಯಿತಂದು
ಭಕ್ತಿ ಮಂಡಳಿ ಪೂಜಿಸಲು ಸೇರಿತಂದು

ನದಿ ದಂಡೆಯಲ್ಲಿ ತುಂಬಿದ ಜನಸಾಗರ
ಕರಮುಟಿಗಿ ಮೈಸವರಿ ಸ್ನಾನ ಮಾಡುವ ಭರ
ಕಳೆಯಿತು ಕರ್ಮವು ಶುಭ ದಿನದಂದು
ಸ್ವಾಗತಿಸುತಿದೆ ಹೊಲದ ಪೈರು ನಮಗಿಂದು

ಛಜ್ಜಿ ರೊಟ್ಟಿ ಭಜ್ಜಿ ಪಲ್ಲೆ ತಿಂದಾರ ನದಿ ದಂಡೆಯಲ್ಲಿ
ಸಂಗಮೇಶ್ವರ ಪಲ್ಲಕ್ಕಿ ಹಿಡಿದಾರ ಭಕ್ತಿರಸದಲ್ಲಿ
ಸುತ್ತೂರಿನ ಜನ ಜಾತ್ರೆಯ ಗದ್ದಲಲಿ
ಬೇಕಾದ ಆಟಿಕೆ ಮಕ್ಕಳಿಗೆ ಸಿಕ್ಕಿತಲ್ಲಿ

ಮುದ್ದು ಗುಂಡುಗಳ ಹಾರಾಟದಲ್ಲಿ
ಪುರವಂತರ ಆಟ ಮೈನವರೆಳಿಸಿತು ಅಲ್ಲಿ
ಭಕ್ತರ ಜೆಂಕಾರ ಸಂಗಮೇಶ್ವನ ಹೆಸರಲ್ಲಿ
ಜಾತಿ ಮತ ಮರೆತು ಒಂದಾದರು ಭಾವೈಕ್ಯತೆಯಲ್ಲಿ

ಸಂಕ್ರಮಣವ ಹಬ್ಬ ತಂದಿತು ಹರ್ಷತುಂಬುತಲ್ಲಿ
ಹೊಳಿಗೆಯ ಊಟ ಭಕ್ತರು ಸವಿಯುತಲಿ
ಎಳ್ಳು ಬೆಲ್ಲಿನಾ ಮಿಶ್ರಣ ಹಿರಿಯರಿಗೆ ನೀಡುತ
ಹಾರೈಕೆಯ ನುಡಿಗಳು ಸುಖದಿಂದ ಬದುಕಿರೆಂತ

ಸಂಗಮೇಶ್ವನ ಸಾನಿಧ್ಯ ತುಂಬಿತ್ತು ಭಕ್ತರಿಂದ
ಜಾನಪದ ಡೊಳ್ಳು ಕುಣಿತ ನೋಡಲು ಬಲುಚೆಂದ
ಬಣ್ಣಬಣ್ಣದ ಹೂಗಳ ಮಾಲೆಯಲ್ಲಿ ಮುಳಿಗೆದ್ದ
ಕಬ್ಬು ಬಾಳೆ ಟೆಂಗು ತಿಂದು ತೆಗಿದ ಹಬ್ಬ ಚಂದ


ಸುಲೋಚನಾ ಮಾಲಿಪಾಟೀಲ

About The Author

1 thought on “ಸಂಕ್ರಾಂತಿ ವಿಶೇಷ-ಸುಲೋಚನಾ ಮಾಲಿಪಾಟೀಲ”

Leave a Reply

You cannot copy content of this page

Scroll to Top