ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಮೌನ ಮುರಿದು

ಡಾ ಶಶಿಕಾಂತ ಪಟ್ಟಣ

ಮೌನ ಮುರಿದು
ಮನ ಬಿಚ್ವಿ
ಮಾತನಾಡಿದೆ ನೀನು
ಸಂತಸ ನೆಮ್ಮದಿ
ರೆಕ್ಕೆ ಬಿಚ್ಚಿ ಹಾರಿದ
ಭಾವ ಪಕ್ಷಿ ನಾನು

ಸುಂದರ ನಗೆಗೆ
ಮೋಡ ಜಡೆ ಬಿಚ್ಚಿ
ಮಳೆ ಸುರಿಯಿತು
ಚಿಗುರಿತು ನವ ವಸಂತ
ಹಸಿರು ಹುಲ್ಲಿನ ಮೇಲೆ
ಅರಳಿತು ಮಲ್ಲಿಗೆ

ತಪ್ಪು ನನ್ನದೊ ನಿನ್ನದೊ?
ಸಲ್ಲದ ಗ್ರಹಿಕೆ ಕಲ್ಪನೆ
ಗೋಡೆ ಎದ್ದಿತ್ತು ಮಧ್ಯೆ
ಕಾಣಲಾರಾದೇವು ನಮ್ಮನ್ನು
ನಾವಿಬ್ಬರು ಕೊರಗಿದೆವು
ತೆಗೆದೆವು ಇಂದು ಬೇಡಿ ಸಂಕೋಲೆ

ಸರೆಯಿತು ಕಾರ್ಮೊಡ
ಚೆಲುವ ಚೆಲ್ಲುವ ಸೂರ್ಯ
ಬೆಚ್ಚನೆ ಗೂಡಲ್ಲಿ ಒಲವ ರಾಗ
ಹಗಲು ಇರುಳಿನ ಆಟ
ನಡೆದ ದಾರಿ ಜೀವ ಮಾಟ
ಬೆಸೆದವು ಹೃದಯಗಳ ಕೂಟ


About The Author

3 thoughts on “ಡಾ ಶಶಿಕಾಂತ ಪಟ್ಟಣ ಕವಿತೆ- ಮೌನ ಮುರಿದು”

Leave a Reply

You cannot copy content of this page

Scroll to Top