ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಗೇಪಲ್ಲಿ.

ಗಜಲ್

ಮಳೆ ಎಂದರೆ ಬಲು ಇಷ್ಟ ಎಂದೆಲ್ಲಾ ಸಖಾ! ಕೊಡೆ ತಂದಿರುವೆ
ಬಿಸಿಲಿಲ್ಲದಿರೆ ನನಗೆ ಬೇಸರ ಎಂದೆಲ್ಲಾ ಸಖಾ! ನೆರಳ ಹುಡುಕುವೆ

ಬಿರುಗಾಳಿಗೆ ಹೆದರುವುದು ಸಹಜ ಎಲ್ಲ ಜನರು ನಡೆವ ಹಾದಿಯಲಿ
ಮಂದಗಾಳಿ ಇಂದ ಏನು ನಷ್ಟ ಎಂದೆಲ್ಲಾ ಸಖಾ! ಕಿಟಕಿ ಮುಚ್ಚುವೆ

ಜಗದ ಬಾಯಿಗೆ ಹೆದರುವರು ಪ್ರೇಮಿಗಳು ಗುಟ್ಟಾಗಿ ಭೇಟಿ ಆಗುವರು
ಹೆದರದವನೆ ಶ್ರೇಷ್ಠ ಪ್ರೇಮಿ ಎಂದೆಲ್ಲಾ ಸಖಾ! ಊರಾಚೆ ಬಾ ಎನುವೆ

ಪ್ರಾಣಕ್ಕೆ ಪ್ರಾಣ ನೀಡುವುದೇ ಪವಿತ್ರ ಪ್ರೇಮದಗುರಿ ಎಂದಿದ್ದೆ ನೆನಪುಂಟೇ
ಊರಾಚೆ ಗುಡಿಯ ಸಲ್ಲಾಪ ಅನಿಷ್ಟ ಎಂದೆಲ್ಲಾ ಸಖಾ!ಅಲ್ಲಿಗೆ ಬಂದಿರವೆ

ಕೃಷ್ಣಾ! ಯೋಗಿಯ ಗುಟ್ಟು ಸಾವಿನಲಿ ಎನುವರು ಲೋಕ ರೂಡಿಯಲಿ
ನಡೆಯ ಮುಂದೆ ನುಡಿ ಕನಿಷ್ಠ ಎಂದೆಲ್ಲಾ ಸಖಾ! ನಿನ ನಿಜರೂಪ ತೋರುವೆ


About The Author

Leave a Reply

You cannot copy content of this page

Scroll to Top