ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

“ಬಿಂಬ”

ಕಾಡಜ್ಜಿ ಮಂಜುನಾಥ

ಸಮಸ್ಯೆಗಳ
ಬಿಂಬವು ಸರ್ಕಾರಕ್ಕೆ
ಕಾಣದ ದೃಶ್ಯ!

ಬೇಡಿಕೆಗಳ
ಸುರಿಮಳೆ ಕಂಡರೂ
ಮೌನದ ದಾಸ್ಯ!

ನಾಗರೀಕರ
ಆರ್ತನಾದ ಕೇಳುವ
ಕರ್ಣವೇ ಹಾಸ್ಯ!

ಜನರ ಕಷ್ಟ
ಆಳೋ ಧಣಿಗಳನು
ರಕ್ಷಿಸೋ ಅಸ್ತ್ರ!

ಧಮನೀತರ
ಧ್ವನಿಗಳು ,ಧಣಿಗೂ
ತಟ್ಟದ ಶಾಸ್ತ್ರ!

ಪ್ರಜಾಪ್ರಭುತ್ವ
ದೃಶ್ಯವಾದ್ರೂ ಸಮಸ್ಯೆ
ಮಾತ್ರ ,ಅದೃಶ್ಯ!


About The Author

1 thought on “ಕಾಡಜ್ಜಿ ಮಂಜುನಾಥರವರ ಕವಿತೆ-“ಬಿಂಬ””

Leave a Reply

You cannot copy content of this page

Scroll to Top