ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎಂ. ಆರ್. ಅನಸೂಯ ಎರಡು ಕವಿತೆ

ಉಚಿತವಾಗಿ ಕೊಟ್ಟಿಲ್ಲ ಬದುಕು
ಕನಸು ನನಸಾದ ದಿನಗಳನ್ನು
ವಸೂಲಿ ಮಾಡಿ
ಲೆಕ್ಕಕ್ಕೆ ಸಿಗದ ಕಂಬನಿಗಳನ್ನು
ನೋವಿನ ನಿಟ್ಟುಸಿರುಗಳನ್ನು
ಉಪೇಕ್ಷೆಯ ತಾತ್ಸಾರವನ್ನು
ನೀಡಿದೆ
ಭರಪೂರ ಆತ್ಮವಿಶ್ವಾಸದ ರಸೀತಿಯನ್ನು

****

ಧರ್ಮರಾಯ
ಧರ್ಮ ಸೂಕ್ಷ್ಮವ ಅರೆದು ಕುಡಿದವ
ಅಜೀರ್ಣವಾಗಿ ಗಬ್ಬುನಾತ ಬೀರಿದರೂ
ಬಿಡಲಾಗದ ಕರ್ಮಠ ಧರ್ಮಭೀರು
ಚಟಕ್ಕೆ ಜೂಜಾಡಿ ಸೋತು
ಪಣಕ್ಕಿಟ್ಟರೂ ಹೆಂಡತಿಯ
ಪಡೆದ ಬಿರುದು ಮಾತ್ರ ಧರ್ಮನಿಷ್ಟ
ಕೈ ಹಿಡಿದ ದ್ರೌಪದಿಯ
ಕಂಗಳಲಿ ಅಸಹ್ಯವಾಗಿ ಅತಿ ನಿಕೃಷ್ಟ


About The Author

Leave a Reply

You cannot copy content of this page

Scroll to Top