ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನ್ಯಾಯ ಪಂಚಾಯಿತಿ

ಶ್ರೀಕಾಂತಯ್ಯ ಮಠ

ಕುರುಡು ಮತೀಯ ಕಟ್ಟೆ ಮೇಲೆ ನ್ಯಾಯ ಪಂಚಾಯಿತಿ ಯಾಕೆ..!
ಕಿವುಡು ಮಾತಿನ ಚರ್ಚೆಯೊಳಗೆ ಕುದುರುವುದೆ ನೀತಿ ರೀತಿ ಸಂಧಾನವೇಕೆ..!

ಹಳೆಯದಲ್ಲ ಹೊಸದಲ್ಲ ನಟ್ಟ ನಡುವೆ ಕೆಂಪು ದೀಪದಂತೆ ಎಚ್ಚರಿಕೆ ಕೊಟ್ಟರೂ
ಬದಲಾಗದ ಮನಸ್ಸಿನ ಭಾವಕ್ಕೆ ಭಾವನೆಯಿಂದ ಅಂಧಾಭಿಮಾನವೇಕೆ..?

ನೀರೊಳಗೆ ಬೆಂಕಿ ಹತ್ತುವುದೆ
ಗಾಳಿಯಲ್ಲಿ ಸುದ್ದಿ ನಂಬುವುದೆ ಪಾಠಗಳ ಅರ್ಥ ಬೇಕಿಲ್ಲದವರ ಮುಂದೆ
ಹರಡುವ ಸೋಂಕುಗಳ ಚಿಕಿತ್ಸೆ ಕಟ್ಟೆಯಲ್ಲಿ ಬಗೆಹರಿಯುವುದೆ..?
ನಿಯಮ ಮೀರಿದವರ ಗುಣ ಸದ್ಗುಣವೆಂದು ತಿಳಿಯುವುದೆ..?

ನಿಲ್ಲದ ನೀರಾಟವಿದು ಬೆವರಿಳಿಸಿ ಬದುಕುವುದು
ರಕ್ತ ತಿಲಕ ಮಾಡಿಕೊಳ್ಳುವರ ನಡಿಗೆಯನ್ನ ಮೆಚ್ಚುವವರು ಹುಡುಕಿ
ಕಣ್ಣೆದುರಿಗೆ ಕಾಂಚಾಣ ಮೆರೆದು ಚಂಚಲ ಮನಸ್ಸಿಗೆ ಬೆಳಕು ಹಚ್ಚಿದರೆ ಹಣವು ಗುಣ ಬದಲಾಯಿಸುವುದೆ..?

ಬದುಕು ಬಡಿವಾರವಾದರೂ ಭಿನ್ನಾಣದ ಮೆರವಣಿಗೆ ಕಾಣುತ್ತಿದೆ ಕಣ್ಣ ದೃಷ್ಠಿಯಲ್ಲಿ ಅಸಹ್ಯವೆನಿಸುತ್ತಿದೆ.
ಇಂಥ ನೀಚರ ಕೈಬೆರಳು ಗುರುತು ತರುವುದೆ..!
ಒಂದು ಮಾಹಿತಿಯಿಲ್ಲದ ವಚನ ಕಟ್ಟೆ ದಿನಕ್ಕೊಂದು ಪಾಲಿಸಿ ಶೋಭೆ ತರುವುದೆ..?
——————–

About The Author

Leave a Reply

You cannot copy content of this page

Scroll to Top