ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಗುಡಾರದಲ್ಲಿದ್ದು ಕಲ್ಲು ಮುಳ್ಳಿನ ದಾರಿ
ತುಳಿಯುವವರು ನಾವು
ಬಡತನದ ಬದುಕನ್ನೆ ಕೊನೆತನಕ ನೋಡಿ
ಉಳಿಯುವವರು ನಾವು

ಬೆವರಿಳಿಸಿ ಅಗ್ನಿಯ ಕುಲುಮೆಯಲ್ಲಿ
ಬೆಂದವೆಯಲ್ಲ ಏಕೆ
ತವನಿಧಿಯ ಕಾಣದೆ ಪುಡಿಗಾಸಿನಲಿ
ಕೊಳೆಯುವವರು ನಾವು

ಅಕ್ಷರದ ಜ್ಞಾನವಿರದೆ ಊರೂರು
ತಿರುಗುವ ಫಕೀರರು
ಪಕ್ಷಪಾತಮಾಡದೆ ಸಮಾನತೆ ತೇರನು
ಎಳೆಯುವವರು ನಾವು

ಒಪ್ಪತ್ತಿನ ಗಂಜಿಗೆ ಬಿಸಿಲುನೆರಳೆನ್ನದೆ
ದುಡಿದೆವಲ್ಲ ಜಗದಿ
ಚಿಪ್ಪಿನೊಳಗಿನ ಮುತ್ತಂತೆ ಲೋಕದಿ
ಹೊಳೆಯುವವರು ನಾವು

ಕಡೆತನಕ ಸುಖದ ಐಭೋಗವನು
ಕಾಣದ ಯಾತ್ರಿಕರು
ನುಡಿಗೊಮ್ಮೆ ಅಭಿನವನ ನೆನೆದು
ಬೆಳೆಯುವವರು ನಾವು


About The Author

Leave a Reply

You cannot copy content of this page

Scroll to Top