ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಕಾವ್ಯ ಸಂಗಾತಿ

ಇಮಾಮ್.ಮದ್ಗಾರ

ತಾಳ್ಮೆ …ತಾಳ್ಮೆ …ಎಂದು ತಾಳ್ಮೆಯೇ.. ತಾಳ್ಮೆಗೆಟ್ಟು ರೊಚ್ಚಿಗೆಳುವ ಮುನ್ನ!
ಕನ್ನಡಿಗರ ಪ್ರೀತಿ ನಿಮಗೆರವಾಗುವ ಮುನ್ನ!
ಬಿಟ್ಟು ಬಿಡಿ ನಮ್ಮ ಬೆಳಗಾವಿಯ ತಂಟೆ ಬಿಟ್ಟುಬಿಡಿ

ಕರುನಾಡ ಕೋಪ ದಿಗ್ದಿಕ್ಕಿಗೆ ಪಸರಿಸುವ ಮುನ್ನ !
ನಮ್ಮಕೋಪದಕಾರ್ಮುಗಿಲ ಕಟ್ಟೆ ಒಡೆಯುವ‌ಮುನ್ನ..!
ಬಿಟ್ಟು ಬಿಡಿ ನಮ್ಮ ಬೆಳಗಾವಿಯ ತಂಟೆ ಬಿಟ್ಟುಬಿಡಿ.

ಖಣ್. ಖಣ್. ಖಡ್ಗದ ಝೇಂಕಾರ ನಿಮ್ಮ ಕಿವಿಗಪ್ಪುವ ಮುನ್ನ.
ಕನ್ನಡಿಗರ ಕರಕರಗಳ ಕಠಿಣಾಘಾತ ನಿಮ್ಮೆದೆಯ ತಟ್ಟುವ ಮುನ್ನ! ಬಿಟ್ಟು ಬಿಡಿ ನಮ್ಮ ಬೆಳಗಾವಿಯ ತಂಟೆ ಬಿಟ್ಟುಬಿಡಿ

ರಾಣಿ ಚನ್ನಮ್ಮನ ಖಡ್ಗ ಮತ್ತೆ ರಾರಾಜಿಸುವ ಮುನ್ನ ಸಂಗೊಳ್ಳಿ ರಾಯರ ಹೂಂಕಾರ ಮುಗಿಲು ಮುಟ್ಟುವ ಮುನ್ನ. ಬಿಟ್ಟುಬಿಡಿ.ನಮ್ಮ ಬೆಳಗಾವಿಯ ತಂಟೆ ಬಿಟ್ಟುಬಿಡಿ

ನಮ್ಮ ಮಮತೆಯ ಕಣ್ಗಳಿಂದ ಸುಡುವ ಕಿಡಿ ಜಾರುವ ಮುನ್ನ
ನಾವು ಬೆದರುವ ಮುನ್ನ ನೀವು ಬೆಚ್ಚುವ‌ ಮುನ್ನ !
ಸಹೋದರತೆಯ ಸಂಭಂದ ಕಡಿದು ಹೋಗುವ ಮುನ್ನ ಬಿಟ್ಟು ಬಿಡಿ
ನಮ್ಮ ಬೆಳಗಾವಿಯ ತಂಟೆಬಿಟ್ಟುಬಿಡಿ ಬಿಡಿ.


About The Author

Leave a Reply

You cannot copy content of this page

Scroll to Top