ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗುಬ್ಬಚ್ಚಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಹಾರಿ ಬಂತು ಗುಬ್ಬಿ ಮರಿ
ಬಿದ್ದ ಅಕ್ಕಿ ತಿನ್ನಲು ಅಂಗಳದಿ

ಅದಕಾಗಿ ಕಾಯುತ ಕುಳಿತಿದ್ದ
ಅಕ್ಕಿ ಹಾಕುತ ಸಾಯಿರಾಜ

ಗುಬ್ಬಚ್ಚಿಯ ಸಂಗ ಬಯಸಿದ
ಅದರ ಕಾಲಿಗೆ ದಾರ ಕಟ್ಟಿದ

ದಾರವನು ಕಲ್ಲಿಗೆ ಕಟ್ಟಿದ
ಹಾರಲಾರದ ಮರಿ ಅಳುತ್ತಿತ್ತು

ತಾಯಿ ಹಾರಿ ಬಂದು ಕಂದನ
ಕಿವಿಯಲಿ ಉಸಿರಿತು ಮಾತೊಂದ

ಕಲ್ಲಿಗಿಂತ ಕಠಿಣ ನಿನ್ನ ಚುಂಚು
ಕಚ್ಚಿ ಹಾಕು ದಾರ ಹುಚ್ಚು ಮರಿ

ತಾಯ ಮಾತು ಕೇಳಿ ನಕ್ಕಿತು
ತನ್ನೊಳಗಿನ ಶಕ್ತಿ ಬಳಸಿತು

ಆತ್ಮ ನಿರ್ಭರತೆಯಿಂದ ಮೇಲೆ
ಎತ್ತರಕೆ ಹಾರಿ ತಾಯ ಸೇರಿತು

ಹಾರುವಾಗ ಕಿವಿಮಾತು ಹೇಳಿತು
ಸಾಯಾರಾಜಗೆ ಕಟ್ಟಿಹಾಕಬೇಡ

ನನ್ನವ್ವ ಕಲಿಸಿರುವಳು ನೀತಿ
ನೀನೆಂದರೆ ನನಗೂ ಪ್ರೀತಿ

ನಿತ್ಯವೂ ನನಗಾಗಿ ನೀರಿಡುವೆ
ತಿನ್ನಲಿಡುವೆ ಧನ್ಯವಾದ ನಿನಗೆ

ನನ್ನ ಸ್ವಾತಂತ್ರ್ಯ ಕಸಿಯಬೇಡ
ಮತ್ತೆ ಬರುವೆ ನೀ ತೋರಿಸು ಪ್ರೀತಿ


About The Author

Leave a Reply

You cannot copy content of this page

Scroll to Top