ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತನಗಗಳು

ಶಂಕರಾನಂದ ಹೆಬ್ಬಾಳ

ನೀನೊಮ್ಮೆ ಮನಬಿಚ್ಚಿ
ಹೃದಯದಿ ಮಾತಾಡು
ಪ್ರೀತಿಸಿದ ಜೀವವ
ಬಿಡದಂತೆ ಕಾಪಾಡು

ಕಣ್ಣಿಗೆ ರೆಪ್ಪೆಯಂತೆ
ಜೊತೆಯಾಗಿ ಇರುವೆ
ಎದೆಯಲಿ ಪ್ರೇಮದ
ಹೊನಲಾಗಿ ಹರಿವೆ

ನನ್ನೆದೆಯ ಆಳದಿ
ಮಿಂಚೊಂದು ಮೂಡುತಿದೆ
ಪ್ರೇಮದಾ ಗೀತೆಯನು
ತೋಷದಿ ಹಾಡುತಿದೆ

ಒಲವಿನ ಗೀತೆಗೆ
ಮುನ್ನುಡಿಯ ಬರೆದೆ
ಹೃದಯದ ಬಾಗಿಲ
ಛಲತೊಟ್ಟು ತೆರೆದೆ


About The Author

Leave a Reply

You cannot copy content of this page

Scroll to Top