ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ

ಬೀರುತ ಚೆಲುವ ಒಲವಲಿ ಸೆಳೆದುಬಿಡು ಸಖ.
ಕೋರುತ ಚಂದನದ ಪರಿಮಳದಿ ಎಳೆದುಬಿಡು ಸಖ

ಕಾಡುತ ಬಂಗಾರಿಯ ಕಷ್ಟ ಮರೆತರೆ ಹೇಗೆ ಹೇಳು
ಬೇಡುತ ಸಿಂಗಾರಿಯ ಮಾಟದ ದೃಷ್ಟಿ ಕಳೆದುಬಿಡು ಸಖ

ಹಾರುತ ಹಕ್ಕಿಯಾಗಿ ಹಗೆ ಮರೆತು ಬಿಟ್ಟೆಯಲ್ಲ ದೊರೆ.
ಜಾರುತ ಹನಿಗಳ ಧಗೆ ಕಪೋಲದಿ ತೊಳೆದುಬಿಡು ಸಖ 

ಮೀರುತ ಹಳೆಯ ನೆನಪುಗಳ ಹೊಸದು ಮಾಸದಿರಲಿ.
ಏರುತ ಕಳೆಯ ಒನಪಿನಲಿ ಬೆಸೆದು ಬೆಳೆದುಬಿಡು ಸಖ

ಸಾರುತ ಎದೆಯ ಭಾವದರಸಿ ಜಯಳೆಂದು ಮಿಡಿಯುತಿರು
ಬೀರುತ ಸುಧೆಯ ‌‌‌‌‌‌‌‌‌‌‌‌‌ಸೋಭನದ ವಿಜಯದಿ ಹೊಳೆದುಬಿಡು ಸಖ


About The Author

Leave a Reply

You cannot copy content of this page

Scroll to Top