ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತಾಯ್ತನದ ಹಿರಿಮೆ

ಲಕ್ಷ್ಮೀದೇವಿ ಪತ್ತಾರ

ತಾಯಿಯಾದಳು ಅವಳು
ಬಹಳಷ್ಟು ಬದಲಾದಳು
ಮಗುನಿಂದಾಗಿ ಅವಳ ಬಿಗುವು
ಕಳೆದು ಆಗಿಹಳು ಮೃದು

ದೇಹ ಸೌಂದರ್ಯದ ಆರಾಧನೆಯಲ್ಲಿದ್ದವಳಿಗೆ
ದೇಹದ ಪರವೇ ಇಲ್ಲ
ಎದೆಹಾಲು ಕುಡಿಸುವದರಲ್ಲಿ ತಲ್ಲಿನ
ಮಗುವಿನಲಂಕಾರದಲ್ಲಿ ಮೈಮನ

ಮಲಮೂತ್ರ ಕಂಡರೆ
ಮೂಗು ಮೂರಿಯುತ್ತ
ಮಾರು ದೂರ ಓಡುತ್ತಿದ್ದವಳು
ಮೈಯೆಲ್ಲಾ ಹೇಸಿಗೆ
ಮಾಡಿಕೊಂಡ ಬರುವ ಕೂಸನೆತ್ತುವಳು ಆತುರದಿ
ಶುಚಿಗೊಳಿಸುವಳು ಬೇಸರಿಸದೆ

ಯಾರನ್ನು ಕೇರ್ ಮಾಡದೆ
ಮೋದಲು ತಾನುಂಡು ತಣಿಯುತ್ತಿದ್ದವಳಿಂದು
ಮಗುವಿಗೆ ಉಣುಸುವದರಲಿ
ತನ್ನ ಹಸಿವ ಮರೆತಿಹಳು

ಗಡದ್ದಾಗಿ ನಿದ್ದೆ ಹೊಡೆದು
ಪೂರ್ವದಲಿ ರವಿ ಮೂಡಿ
ಮೂರು ಘಳಿಗೆ ದಾಟಿದರು
ಏಳದವಳು
ಕರುಳ ಬಳ್ಳಿಗಾಗಿ ಹಗಲಿರುಳೆನ್ನದೆ
ಆರೈಕೆ ಮಾಡುವಳು


About The Author

4 thoughts on “ಲಕ್ಷ್ಮೀದೇವಿ ಪತ್ತಾರ ಕವಿತೆ-ತಾಯ್ತನದ ಹಿರಿಮೆ”

  1. Raghavendra Mangalore

    ನಿಜ ಮಾತೃತ್ವವನ್ನು ನೆನಪಿಸುವ ಕವಿತೆ. ಚೆನ್ನಾಗಿದೆ. ಅಭಿನಂದನೆಗಳು.

  2. ತಾಯಿತನ ಎನ್ನುವುದೆ ಬದುಕಿನ ಮಮತೆಯ ತಿರುವು.
    ಸೊಗಸಾಗಿ ಮಗಳಲ್ಲಿ ಕಂಡು ಸಾದರಪಡಿಸಿದ್ದಿರಿ….

    ನಾಗಜಯನ ಅನಿಸಿಕೆ

Leave a Reply

You cannot copy content of this page

Scroll to Top