ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಿಡ ಮರಗಳ ಮನದ ಮಾತು

ಅನ್ನಪೂರ್ಣ ಸು ಸಕ್ರೋಜಿ

ವಟವೃಕ್ಷ ಕೇಳಿತು ಕೈಯ್ಯಾಡಿಸುತ
ಶಮಿವೃಕ್ಷಕೆ ಪ್ರೀತಿಯಿಂದ ನೋವಾ
ಎನುತ ತನ್ನ ನೋವ ಮರೆತು
ಅಳುತ ಮುಖ ಮುಚ್ಚಿಕೊಂಡಿತು

ದಸರೆದಿನ ಬನ್ನಿ ಬಂಗಾರವೆಂದು
ನನ್ನ ರೆಂಬೆ ಕೊಂಬೆ ಚಿಗರುತಿರುವ
ನಾಜೂಕ ಎಲೆಗಳನು ಕಿತ್ತು ಹಾಕು
ಮಾನವರಲ್ಲ ಇವರು

ನನಗೆ ನೋವನಿತ್ತು ಆನಂದಿಸುವ
ಮನುಜರು ಹಣಕಾಗಿ ಹಬ್ಬವೆಂದು ಆಚರಿಸುವ
ಮುಗ್ಧರೊ ಮೂಢರೊ ಮೂರ್ಖರೋ

ಬಂಗಾರದ ಸನ್ಮಾನಕೆ ಹಿಗ್ಗಿದೆ ಆರಿ
ಪೂಜೆಗೊಂಡೆ ನಲಿದಾಡಿದೆ ಆದರೆ
ಕಸದಲಿ ಬಿದ್ದಾಡಿ ನರಳಿದೆ ಮರುದಿನ ಕೇಳುವವರಾರಿಲ್ಲ

ಹೌದು ಶಮಿ,ಆರಿ ನನ್ನಗತಿ ಅದೇ
ಏಳು ಜನ್ಮದ ಸಂಗಾತಿಗಾಗಿ ಬಲಿ
ನಾ, ನಾವು ನೆರಳು ಆಶ್ರಯ ಕೊಟ್ಟಿದ್ದನ್ನು ಮರೆವ ಕಟುಕರು

ನೆಲ್ಲಿಕಾಯಿ, ತುಳಸಿ, ಬಿಲ್ವ,ಎಕ್ಕಿ
ಎಲ್ಲ ಒಕ್ಕೊರಲಿನಿಂದಹೌದೆಂದವು
ಗರಿಕೆ ಮಾತ್ರ ಗಹಗಹಿಸಿ ನಕ್ಕಿತು ಮತ್ತೆ ಚಿಗುರುವೆನೆಂಬ ಭರವಸೆ
ಇರಲಿ ನನ್ನವರೆ ದೇವನಿದ್ದಾನೆ


About The Author

1 thought on “ಅನ್ನಪೂರ್ಣ ಸು ಸಕ್ರೋಜಿ- ಗಿಡ ಮರಗಳ ಮನದ ಮಾತು”

  1. ಹೆಚ್. ಮಂಜುಳಾ.

    ಎಲ್ಲಾ ಗಿಡ ಮರ ಬಳ್ಳಿಗಳೂ ಹೀಗೆ ಅಂದುಕೊಳ್ಳುತ್ತಿರಬಹುದು.!

Leave a Reply

You cannot copy content of this page

Scroll to Top