ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಮತ್ತದೇ ಸುಂದರ ಭಾರತ ರೂಪತಾಳಲಿ

ಲಕ್ಷ್ಮೀದೇವಿ ಪತ್ತಾರ

ಮತ್ತೆ ಕಟ್ಟುವ ನಾವು ರಾಷ್ಟ್ರ ಕಟ್ಟುವ
ಒಡೆದುಹೋದ ರಾಷ್ಟ್ರವು ಒoದುಗೋಡೆ ಕಟ್ಟುವ
ಮತ್ತೆ ಮೊದಲಿನಂತೆ ಕಟ್ಟುವ
ಸಮೃದ್ಧ ಸಿರಿಸಂಪತ್ತಿನ ರಾಷ್ಟ್ರವ

ಹಳ್ಳಿ ಹಳ್ಳಿಯಲ್ಲೂ ನ್ಯಾಯನೀತಿ
ನಮ್ಮವರೆಂದು ಅಪ್ಪಿಕೊಳ್ಳುವ ತ್ಯಾಗ ಪ್ರೀತಿ
ಮತ್ತೆ ಮೂಡಿಬರಲಿ ಅದೇ ಖ್ಯಾತಿ
ಎಲ್ಲಿ ನೋಡಿದರಲ್ಲಿ ಆಗ ಸುಖ ಸಮೃದ್ಧಿ ಹಂಚಿ ಉಣ್ಣುವ ಸನ್ನಡತಿ
ವಿವಿಧತೆಯಲ್ಲಿ ಏಕತೆ ಸಾರುವುದು ನಮ್ಮ ಸಂಸ್ಕೃತಿ

ಪರಕೀಯರ ದಾಳಿಯಿಂದ ನಲುಗಿದೆ ನಮ್ಮ ಸುಸಂಸ್ಕೃತ ಸುಂದರ ಭಾರತ
ಒಳ್ಳೆಯದೆಲ್ಲವೂ ಕೊಳ್ಳೆ ಹೊಡೆದ ಕಳ್ಳರು ಕೆಟ್ಟದನ್ನು ಬಿತ್ತಿ ಹೋದರು

ಇನ್ನಾದರೂ ತಿಳಿಯಬೇಕು ನಾವು
ಖಲರೊಡನೆ ಎಂದಿಗೂ ಸಲ್ಲದು ಸಲುಗೆ ಕೊನೆಗೆ ಕಲಹವು
ಗೊತ್ತಿಲ್ಲ ವೈರಿಗಳಿಗೆ ಎಷ್ಟೇ ಕದ್ದೊಯ್ದರು ಹಾಳು ಮಾಡಿದರು
ಭರತಭೂಮಿ ಪರುಷಮಣಿ ಎಂದು ಬಾರದು ದಾರಿದ್ರ್ಯವು
ಬತ್ತದ ದೇವಗoಗೆ ನಮ್ಮ ಭಾರತಾoಬೆ ಸದಾ ಚಲನಶೀಲಳು

ಸುಂದರ ಹೂತೋಟ ನಮ್ಮ ಭಾರತ
ಬಗೆಬಗೆ ಬಣ್ಣದ ಹೂವುಗಳoತೆ ಜಾತಿಮತ
ವೈವಿಧ್ಯತೆಯಿಂದ ಕಂಗೊಳಿಸಳಿಸುವುದೆ
ಭಾರತದ ವೈಶಿಷ್ಟ್ಯ
ವೈಮನಸ್ಸಿನ ಕಸ ಬಂದಾಗಲೊಮ್ಮೆ ಕಿತ್ತು ಹಾಕುತ್ತ
ಮತ್ತೆ ಕಟ್ಟುವ ನಾವು ರಾಷ್ಟ್ರ ಕಟ್ಟುವ

ಮುತ್ತು ರತ್ನ ವಜ್ರಗಳನ್ನು ಬಳ್ಳದಲ್ಲಿ ಅಳೆಯುವಂತ ಕಲೆ ಸಂಸ್ಕೃತಿಯಿಂದ ತುಂಬಿತುಳುಕುವಂತ
ಮತ್ತದೆ ಶ್ರೀಮಂತ ಸುಂದರ ಬಲಿಷ್ಠ
ರಾಷ್ಟ್ರ ಕಟ್ಟುವ ನಾವು ರಾಷ್ಟ್ರ ಕಟ್ಟುವ


About The Author

Leave a Reply

You cannot copy content of this page

Scroll to Top