ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ರೋಹಿಣಿ ಯಾದವಾಡ

f

ನಂಬಿಕೆಗೆ ಇನಿತು ದ್ರೋಹ ಬಗೆಯಬೇಡ ಮನವೆ
ಗೆಳೆತನಕೆ ಕಿಂಚಿತ ಕುಂದು ತರಬೇಡ ಮನವೆ

ಅಪ್ಪಿ ಒಪ್ಪಿದ ಬಾಂಧವ್ಯ ನಮ್ಮದು ತಿಳಿಯು
ಮಾತು ಬಂತು ಅಂತ ಮುನಿಯಬೇಡ ಮನವೆ

ಸ್ನೇಹ ಕದಡದಂತೆ ಅರಿತು ನಡೆದುಕೊಳ್ಳು ಮನವೆ
ಒಮ್ಮನಕೆಂದೂ ಹುಸಿಯ ನುಡಿಯಬೇಡ ಮನವೆ

ದೇಹವೆರಡಾದರೂ ನಾನು ನೀನು ಬೇರಲ್ಲ ತಿಳಿ
ಮುನಿದ ಮನಸ್ಸಲ್ಲಿ ನಿಂತುಕೊಲಬೇಡ ಮನವೆ

ಪ್ರೀತಿ ಉಸಿರಾದ ಜೀವಕೆ ಇಂಬುಕೊಡು ದೊರೆಯೆ
ಉದಾಸೀನದಿ ನಿರಾಕರಿಸಿತೋರಬೇಡ ಮನವೆ

ಈ ದುನಿಯಾ ಬಲು ವಿಚಿತ್ರವೆಂಬುದು ತಿಳಿ
ರೋಹಿಣಿಯ ಅಚಲ ವಿಶ್ವಾಸ ಹಳಿಯಬೇಡ ಮನವೆ.



About The Author

Leave a Reply

You cannot copy content of this page

Scroll to Top