ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ನಯನ. ಜಿ. ಎಸ್ ನಗುತಿಹ ಕಂಗಳ ಹಿಂದಿಹುದು ಕಡು ನೋವುಗಳು ಬಲ್ಲವರು ಯಾರುಅರಳು ತುಟಿಗಳೊಡಲಿನ ನೊಂದ ಮಾತುಗಳ ಆಲಿಸುವವರು ಯಾರು ! ನಕ್ಕಾಗ ನಗುತ , ನೊಂದಾಗ ಮೌನದಿ ಅತ್ತು ದಣಿಯುತ್ತಿದೆ ಮನಸ್ಸುಮನವ ಹಿಂಡುತಿದೆ ವ್ಯಂಗ್ಯಗಳ ಹಿಂಸೆ ಇದ ಅಳೆಯುವವರು ಯಾರು ! ನಿಶೆಯ ನಶೆಗೂ ಮರೀಚಿಕೆ ಆದಂತಿದೆ ಸುಖ ಸ್ವಪ್ನಗಳ ಸಿಹಿಯಾದ ನಶೆನೀರವ ಕ್ಷಣಗಳನೂ ಭೀತಿಗೊಳಿಸುತಿದೆ ಅಳಲು ಅರಿಯುವವರು ಯಾರು ! ಆಶೆಗಳ ಕನಸು ಹುಸಿಯಾಗುತಿದೆ ಕಪಟಿಗರ ಕ್ರೌರ್ಯದಿ ನಲುಗಿ ಕೊರಗಿಮನದ ತುಮುಲಗಳು ತಾರಕಕ್ಕೇರಿದೆ ಅರಿತು ಸಂತೈಸುವವರು ಯಾರು ! ಬಾಳ್ವೆಯು ಕಂಡಂತಿಲ್ಲ , ಬುಡಮೇಲಾದೀತು ಕನಸುಗಳು ಎಚ್ಚರ ‘ನಯನ’ಬಣ್ಣ ಬಣ್ಣದ ಬೂಟಾಟಿಕೆಯ ಜನರಿಹರು ಜೊತೆ ಬರುವವರು ಯಾರು !

ಗಜಲ್ Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-42 ಏಕನಾಥ ಗುರೂಜಿಯವರ ಪ್ರಖ್ಯಾತಿ ಬಹಳ ಬೇಗನೇ ತಮ್ಮೂರನ್ನು ದಾಟಿ ದೂರ ದೂರದ ಊರು, ನಗರಗಳಿಗೂ ಹಬ್ಬಿತು. ಹಾಗಾಗಿ ಮುಂದೆ ಈಶ್ವರಪುರದ ಸುತ್ತಮುತ್ತದ ಕೆಲವು ಜಿಲ್ಲೆಗಳ ಹಲವಾರು ಬೃಹತ್ ನಾಗಬನಗಳು ಇವರಿಂದಲೇ ಜೀರ್ಣೋದ್ಧಾರಗೊಳ್ಳಲು ಕ್ಷಣಗಣನೆಯಲ್ಲಿದ್ದವು. ಅವನ್ನೆಲ್ಲ ಆದಷ್ಟು ಬೇಗ ಮುಗಿಸಿಬಿಡಬೇಕೆಂಬ ಆತುರ ಅವರಲ್ಲಿತ್ತು. ಆದರೆ ತಮ್ಮ ಯಶಸ್ಸನ್ನು ಮೆಚ್ಚಿ ಆಗಾಗ ಹರಿದು ಬರುವ ಅಭಿನಂದನೆ ಮತ್ತು ಪ್ರಶಸ್ತಿ ಪುರಸ್ಕಾರಗಳಂಥ ಪ್ರತಿಷ್ಠಿತ ಸಮಾರಂಭಗಳು ಹಾಗೂ ಅವುಗಳ ನಡುವೆ ತಮ್ಮ ಜೀವನೋಪಾಯದ ಧಾರ್ಮಿಕ ಚಟುವಟಿಕೆಗಳೆಲ್ಲವೂ ಕೂಡಿ ಆ ಜೀರ್ಣೋದ್ಧಾರ ಕಾರ್ಯಗಳನ್ನು ತಡೆಹಿಡಿಯುತ್ತಿದ್ದವು. ಇವೆಲ್ಲದರ ನಡುವೆ ಅವರು ಭಾಗೀವನದ ಸಮೀಪದ ದೇವರಕಾಡಿನ ಮೇಲೆ ಇಟ್ಟುಕೊಂಡಿದ್ದ ಮಹತ್ವಾಕಾಂಕ್ಷೆಯ ಕೆಲಸವೊಂದು ಹಗಲಿರುಳು ಅವರನ್ನು ಭಾದಿಸುತ್ತಿತ್ತು. ಆದ್ದರಿಂದ ಅದರ ಕುರಿತೂ ಅವರು ಸುಮ್ಮನೆ ಕುಳಿತಿರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಆ ಕಾರ್ಯದಲ್ಲಿ ತೊಡಗುತ್ತಿದ್ದರು. ಆ ಹಾಡಿ ಮತ್ತದರ ಸುತ್ತಮುತ್ತಲಿನ ಪ್ರದೇಶವು ಬಹಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಶೀನಯ್ಯ ಎಂಬವನ ಕುಟುಂಬಕ್ಕೆ ಸೇರಿದ್ದೆಂದೂ ಅವರಲ್ಲಿ ಬಹುತೇಕರು ಎಲ್ಲೆಲ್ಲೋ ಹಂಚಿ ಹೋಗಿದ್ದು ಸದ್ಯ ಆ ಅರಣ್ಯದ ಹತ್ತಿರದ ಹಳೆಯ ಮನೆಯಲ್ಲಿ ಅವನ ಕುಟುಂಬದ ಇಬ್ಬರು ಹಿರಿಯರು ಮಾತ್ರವೇ ಉಳಿದಿರುವರೆಂದೂ ಆ ಮನೆತನದ ನಾಗ, ಪರಿವಾರ ದೈವಗಳು ಅನಾದಿ ಕಾಲದಿಂದಲೂ ಆ ಮನೆಯ ಸಣ್ಣ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆಯೆಂದೂ ರಾಘವನ ಗುಪ್ತ ಅಧ್ಯಯನದಿಂದ ಗುರೂಜಿಯವರಿಗೆ ತಿಳಿದು ಬಂದಿತ್ತು. ಹಾಗಾಗಿ ಆ ಬೃಹತ್ತ್ ಅರಣ್ಯವನ್ನು ತೆರವುಗೊಳಿಸಿ ಅಲ್ಲಿ ಭವ್ಯವಾದ ನಾಗನ ದೇವಸ್ಥಾನವೊಂದನ್ನು ನಿರ್ಮಿಸಬೇಕು ಮತ್ತದರ ಸಮೀಪದ ಮದಗವನ್ನು ನಾಗ ದೇವಳಕ್ಕೆ ಸಂಬಂಧಿಸಿದ ಸುಂದರ ಪುಷ್ಕರಣಿಯನ್ನಾಗಿ ಮಾರ್ಪಡಿಸಿ ಆ ಕ್ಷೇತ್ರವನ್ನು ಬಹಳ ಕಾರಣಿಕದ ಪುಣ್ಯಭೂಮಿಯನ್ನಾಗಿ ಮಾಡಬೇಕೆಂಬ ವಿಶೇಷ ಯೋಜನೆಯು ಗುರೂಜಿಯವರೊಳಗೆ ನಿರಂತರ ಮಥಿಸುತ್ತಲೇ ಇತ್ತು.    ಆ ದೇವರ ಕಾಡಿನಲ್ಲಿ ತಾವು ಸ್ಥಾಪಿಸಬೇಕಾದ ನಾಗ ದೇವಸ್ಥಾನದ ಕುರಿತ ತಮ್ಮ ಆಕಾಂಕ್ಷೆಯನ್ನು ಸಿದ್ಧಿಸಿಕೊಳ್ಳಬೇಕಾದ ಮಾರ್ಗೊಪಾಯದ ಚಿತ್ರಣವನ್ನೂ ಹಾಗೂ ಅದಕ್ಕೆ ಬೇಕಾದ ಸೂಕ್ತ ನಕ್ಷೆಯನ್ನೂ ತಮ್ಮೊಳಗೆಯೇ ತಯಾರಿಸುತ್ತಿದ್ದ ಗುರೂಜಿಯವರು ಆವತ್ತೊಂದು ಶುಭಗಳಿಗೆಯಲ್ಲಿ ಆಪ್ತ ಸಹಾಯಕ ರಾಘವನನ್ನು ಕರೆದು ತಮ್ಮ ಯೋಜನೆಯನ್ನು ಅವನಿಗೆ ಕೂಲಂಕಷವಾಗಿ ವಿವರಿಸಿದರು. ಆದರೆ ಅದನ್ನು ಕೇಳಿದ ಅವನು ವಿಪರೀತ ಭಯಕ್ಕೆ ಬಿದ್ದು ಆ ಕೆಲಸಕ್ಕೆ ಸಹಕಾರ ನೀಡಲು ಹಿಂಜರಿದುಬಿಟ್ಟ. ಅದರಿಂದ ಗುರೂಜಿಯವರು ಸ್ವಲ್ಪ ನಿರಾಶರಾದರು. ಆದರೆ ಅವರು ಬೆನ್ನು ಹಿಡಿದರೆ ಬೇತಾಳನಂಥ ಸ್ವಭಾವದವರು. ಆದ್ದರಿಂದ ಅವನ ಭಯವನ್ನು ಕಂಡವರು ಮೆಲುವಾಗಿ ನಕ್ಕು, ‘ನೋಡು ರಾಘವಾ, ಇದು ನಮ್ಮ ಸ್ವಾರ್ಥಕ್ಕೋ ಅಥವಾ ಹಣದ ಲಾಭಕ್ಕೋ  ಹಮ್ಮಿಕೊಂಡಿರುವ ಕಾರ್ಯವೆಂದು ಯಾವತ್ತಿಗೂ ಭಾವಿಸಬೇಡ. ಇದೇನಿದ್ದರೂ ನಮ್ಮ ಊರು ಮಾತ್ರವಲ್ಲದೇ ಇಡೀ ಲೋಕ ಕಲ್ಯಾಣಾರ್ಥವಾಗಿ ಬಹಳ ಹಿಂದೆಯೇ ನಾವು ಸಂಕಲ್ಪಿಸಿಕೊಂಡಿರುವ ಪುಣ್ಯಕಾರ್ಯವಿದು! ಅಷ್ಟಲ್ಲದೇ ಈ ದೈವೀ ಕಾರ್ಯವು ನಿನ್ನ ಹೊರತು ಬೇರೆ ಯಾರಿಂದಲೂ ಸಾಧ್ಯವಾಗುವಂಥದ್ದಲ್ಲ! ಯಾಕೆಂದರೆ ಇದಕ್ಕೆ ಅದರದ್ದೇ ಆದ ಶುದ್ಧ ನೇಮನಿಷ್ಠೆ ಮತ್ತು ಗಟ್ಟಿ ಆತ್ಮಬಲವಿರುವವರೇ ಬೇಕಾಗುತ್ತದೆ. ಅವೆಲ್ಲವೂ ನಿನ್ನಲ್ಲಿವೆ. ಆದ್ದರಿಂದಲೇ ಈ ಕೆಲಸಕ್ಕೆ ನಿನ್ನನ್ನು ಆರಿಸಿರುವುದು. ಇದನ್ನು ನೀನು ಭಕ್ತಿಯಿಂದ ಕೈಗೊಳ್ಳುತ್ತಿಯಾದರೆ ನಿನಗೆ ಯಾವ ಕಂಟಕವೂ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಅಷ್ಟು ಮಾತ್ರವಲ್ಲದೇ ನೀನಿದನ್ನು ಸರಿಯಾಗಿ ನಡೆಸಿಕೊಟ್ಟೆಯೆಂದರೆ ಅದೇ ನಾಗನ ಹೆಸರಿನಲ್ಲಿ ನಿನಗೊಂದು ಐದು ಸೆಂಟ್ಸ್ ಒಳ್ಳೆಯ ಜಾಗವನ್ನೂ ಎರಡು ಸಾವಿರ ಚದರಡಿಯ ಚಂದದ ತಾರಸಿ ಮನೆಯನ್ನೂ ಉಡುಗೊರೆಯಾಗಿ ನೀಡುವ ಆಸೆ ನಮಗಿದೆ. ಯಾವುದಕ್ಕೂ ಯೋಚಿಸಿ ನೋಡು!’ ಎಂದರು ಗಂಭೀರವಾಗಿ. ಗುರೂಜಿಯವರಿಂದ ಉದುರುತ್ತಿದ್ದ ದುಬಾರಿ ನುಡಿಮುತ್ತುಗಳನ್ನು ಆಸ್ಥೆಯಿಂದ ಹೆಕ್ಕಿಕೊಳ್ಳುತ್ತಿದ್ದ ರಾಘವನಿಗೆ ನಾಗನ ಹೆಸರಿನಲ್ಲಿ ಅವರು ನೀಡುತ್ತೇವೆಂದ ಉಡುಗೊರೆಯು ತಟ್ಟನೆ ಅವನ ಭಯವನ್ನೂ ಹಿಂಜರಿಕೆಯನ್ನೂ ಹೊಡೆದೋಡಿಸಿಬಿಟ್ಟಿತು. ‘ಆಯ್ತು ಗುರೂಜಿ. ನನ್ನಿಂದ ನಾಲ್ಕು ಜನರಿಗೆ ಒಳ್ಳೆಯದಾಗುವುದಾದರೆ ತಮಗಾಗಿ ಯಾವ ಕೆಲಸ ಮಾಡಲೂ ಸಿದ್ಧ! ಎಲ್ಲವೂ ತಮ್ಮ ಮಾರ್ಗದರ್ಶನದಿಂದಲೇ ನಡೆದರೆ ಸಾಕು!’ ಎಂದು ಎದೆ ಸೆಟೆಸಿ ಒಪ್ಪಿಗೆ ಸೂಚಿಸಿದ. ಅಷ್ಟು ಕೇಳಿದ ಗುರೂಜಿಯವರ ತುಟಿಯಂಚಿನಲ್ಲಿ ವ್ಯಂಗ್ಯ ನಗುವೊಂದು ಮಿಂಚಿ ಮರೆಯಾಯಿತು. ‘ಹೌದು ರಾಘವಾ ಸರಿಯಾದ ಮಾತು. ನಾವು ಯಾವಾಗಲೂ ಹಾಗೆಯೇ ಯೋಚಿಸುತ್ತ ಜೀವನದಲ್ಲಿ ಮೇಲೆ ಬರುವುದು ಹೇಗೆಂಬುದನ್ನು ಕಲಿಯಬೇಕು. ನೀನು ನಮ್ಮೊಂದಿಗೆ ಇರುವವರೆಗೆ ನಿನ್ನ ರಕ್ಷಣೆಯ ಜವಾಬ್ದಾರಿಯೂ ನಮ್ಮದು!’ ಎಂದು ಗುರೂಜಿ ಅವನಲ್ಲಿ ಇನ್ನಷ್ಟು ಧೈರ್ಯ ತುಂಬಿದರು. ಹಾಗಾಗಿ ಅವರು ಗೊತ್ತುಪಡಿಸಿದ ಶುಭದಿನದಂದು ರಾಘವ ತನ್ನ ಕೆಲಸವನ್ನಾರಂಭಿಸಿದ. ಒಂದು ನರಪಿಳ್ಳೆಗೂ ಸುಳಿವು ಸಿಗದಷ್ಟು ಜಾಗ್ರತೆಯಿಂದ ಆ ದೇವರಕಾಡನ್ನು ಕೆಲವು ಬಾರಿ ಪ್ರವೇಶಿಸಿದವನು, ಅದರೊಳಗೆ ನಾಗಬನ ಮತ್ತು ಭೂತಸ್ಥಾನಗಳು ಇರುವ ಕುರುಹುಗಳನ್ನು ಬಹಳವೇ ಹುಡುಕಾಡಿದ. ಆದರೆ ಆ ಅರಣ್ಯದೊಳಗೆ ಅವನಿಗೆ ಅಂಥ ಯಾವ ಗುರುತುಗಳೂ ಕಾಣಿಸಲಿಲ್ಲ. ಅದರಿಂದ ತೀವ್ರ ನಿರಾಶನಾದ. ತನ್ನ ಇಂಥ ಶ್ರಮಕ್ಕೆ ಗುರೂಜಿಯವರಿಂದ ಕಡಿಮೆಯೆಂದರೂ ನಲವತ್ತು ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತದ ಬಹುಮಾನವು ಸಿಗುವುದರಲ್ಲಿತ್ತು. ಆದರೂ ತನ್ನ ದುರಾದೃಷ್ಟಕ್ಕೆ ಕೈತಪ್ಪಿತಲ್ಲ…! ಎಂದೂ ಕೊರಗಿದ. ಹಾಗಾಗಿ ಅವನಿಗೆ ನಾಗದೇವನ ಮೇಲೆ ವಿಪರೀತ ಕೋಪ ಬಂತು.  ‘ಛೇ! ಛೇ! ಇದೇನಿದು ನಾಗದೇವಾ…! ನಿನಗೊಂದು ಭದ್ರವಾದ ನೆಲೆಯನ್ನು ಕಲ್ಪಿಸಲಿಕ್ಕಾಗಿಯೇ ನಾನೂ ಗುರೂಜಿಯವರೂ ಕೂಡಿ ಒದ್ದಾಡುತ್ತಿರುವುದು ನಿನಗೂ ಕಾಣಿಸುತ್ತಿಲ್ಲವಾ? ಹೀಗಿರುವಾಗ ನಿನ್ನ ಉದ್ಧಾರಕ್ಕೆ ನೀನೇ ಮನಸ್ಸು ಮಾಡದಿದ್ದರೆ ಹೇಗೆ ಹೇಳು…!’ ಎಂದು ಅಸಹನೆಯಿಂದ ಗೊಣಗುತ್ತ ಹಿಂದಿರುಗಿದ.    ತನ್ನ ಪತ್ತೇಧಾರಿ ಕೆಲಸವು ವ್ಯರ್ಥವಾದುದನ್ನು ಗುರೂಜಿಯವರಿಗೆ ಬೇಸರದಿಂದ ವಿವರಿಸಿದ. ಆದರೆ ಆ ಸುದ್ದಿ ಕೇಳಿದ ಗುರೂಜಿಯವರಿಗೆ ಆಘಾತವಾಯಿತು. ‘ಅಯ್ಯಯ್ಯೋ… ನಾಗದೇವಾ! ಅಂಥದ್ದೊಂದು ಪುರಾತನವಾದ ಹಾಡಿಯೊಳಗೆ ನಾಗ, ದೈವಸ್ಥಾನಗಳು ಇರಲೇಬೇಕೆಂದು ತಾವು ಭಾವಿಸಿದ್ದು ಹೇಗೆ ಸುಳ್ಳಾಗಿಬಿಟ್ಟಿತು ಪರಮಾತ್ಮಾ…?’ ಎಂದು ಯೋಚಿಸಿ ತೀವ್ರ ಕಳವಳಪಟ್ಟರು. ಆಗ ಅವರನ್ನು ಇನ್ನೊಂದು ಸಂಗತಿಯೂ ತಲೆ ತಿನ್ನತೊಡಗಿತು. ದಿನನಿತ್ಯ ಒಂದಲ್ಲ ಒಂದು ವಿಧದ ತರಲೆ, ತಾಪತ್ರಯಗಳನ್ನು ತಮ್ಮಲ್ಲಿಗೆ ಹೊತ್ತು ತರುತ್ತಿರುವಂಥ ಬುಕ್ಕಿಗುಡ್ಡೆಯ ನಿವಾಸಿಗಳಿಗೂ ಮತ್ತು ಮುಖ್ಯವಾಗಿ ಭಾಗೀವನದ ಸುಮಿತ್ರಮ್ಮ ಹಾಗೂ ಶಂಕರನಿಗೂ ಅದೊಂದು ಪುರಾತನವಾದ ಕಾರಣಿಕದ ನಾಗಬನವೆಂದೂ, ಈಗ ಅಲ್ಲಿನ ದೈವದೇವರುಗಳೆಲ್ಲ ನೀರು ನೆರಳಿಲ್ಲದೆ ಹತಾಶೆಗೊಂಡು ಗ್ರಾಮದ ಮೇಲೆ ಕುಪಿತರಾಗಿದ್ದಾರೆಂದೂ ಅದರ ಸೂಚನೆಯೇ ಆ ವಠಾರದಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತಿರುವುದೆಂದೂ ಮತ್ತು ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಲೇಬೇಕೆಂದೂ ಸ್ವತಃ ನಾಗದೇವನೇ ಆಜ್ಞೆ ಮಾಡಿದ್ದಾನೆ!’ ಎಂದೂ ತಾವು ಅದೆಷ್ಟು ಬಾರಿ ತಮ್ಮ ಹೊಸ ಜ್ಯೋತಿಷ್ಯಕ್ರಮದ ಪ್ರಕಾರ ಹೇಳುತ್ತ ಬಂದಿಲ್ಲ!    ಅಯ್ಯೋ ದೇವಾ…! ಇನ್ನೇನು ಮಾಡುವುದಪ್ಪಾ…? ಜನರಿಗೆ ತಮ್ಮ ಮೇಲೆ ನಂಬಿಕೆ, ಗೌರವ ಹೊರಟು ಹೋಯಿತೆಂದರೆ ಮುಂದೆ ತಮ್ಮ ಜೀವನದ ಗತಿಯೇನು? ಎಂದುಕೊಂಡ ಅವರು ತೀವ್ರ ಚಿಂತೆಗೊಳಗಾದರು. ಆದರೂ ತೋರಿಸಿಕೊಳ್ಳದೆ, ‘ಸರಿ, ಸರಿ. ಪರ್ವಾಗಿಲ್ಲ ರಾಘವ ಆ ಕುರಿತು ಇನ್ನೊಮ್ಮೆ ಮಾತಾಡುವ. ನಮ್ಮಲ್ಲಿ ಆ ಇಚ್ಛೆಯನ್ನು ಹುಟ್ಟಿಸಿದ ನಾಗನೇ ಏನಾದರೊಂದು ದಾರಿ ತೋರಿಸುತ್ತಾನೆ. ಈಗ ನೀನು ಹೋಗು…!’ ಎಂದು ತಾಳ್ಮೆಯಿಂದ ಹೇಳಿ ಅವನನ್ನು ಕಳುಹಿಸಿದರು. ಆದರೆ ಆಮೇಲೆ ಮತ್ತೆ ಅದೇ ಚಿಂತೆಗೆ ಬಿದ್ದರು. ಕೊನೆಗೂ ಅವರಿಗೊಂದು ಉಪಾಯ ಹೊಳೆಯಿತು. ಮೊದಲಿಗೆ ಅದನ್ನು ಕಾರ್ಯಗತಗೊಳಿಸಲು ಭಯಪಟ್ಟರು. ಬಳಿಕ ಗಟ್ಟಿ ಮನಸ್ಸು ಮಾಡಿದರು. ‘ಹೌದು. ತಮ್ಮ ಬಹು ಅಪೇಕ್ಷಿತವಾದ ಈ ಬೃಹತ್ತ್ ಯೋಜನೆಯೊಂದು ನೆರವೇರಬೇಕಾದರೆ ಅದೇ ಸರಿಯಾದ ಮಾರ್ಗ. ಅಷ್ಟಕ್ಕೂ ನಾವೇನು ಜನರ ಮನೆ ಮಠ ಒಡೆದು ದೇವರಕ್ಷೇತ್ರ ನಿರ್ಮಿಸಲು ಹೊರಟಿದ್ದೇವಾ, ಇಲ್ಲವಲ್ಲಾ! ಭೂಮಿಗೆ ಭಾರವಾಗಿರುವ ಒಂದಷ್ಟು ಕ್ರೂರಮೃಗಗಳೂ, ವಿಷಜಂತುಗಳೂ ಮತ್ತು ಕೆಲಸಕ್ಕೆ ಬಾರದ ಕ್ರಿಮಿಕೀಟ, ಹಕ್ಕಿಪಕ್ಷಿಗಳೂ ತುಂಬಿ ಜನರಿಗೆ ಆಗಾಗ ಹಾನಿಯಾಗುತ್ತಿರುವಂಥ ಆ ಕಗ್ಗಾಡನ್ನು ದೇವರ ಹೆಸರಿನಲ್ಲಿ ಕಡಿದು ಜೀರ್ಣೋದ್ಧಾರ ಮಾಡುವುದರಿಂದ ನಾಡಿಗೆ ಒಳ್ಳೆಯದಾಗುತ್ತದೆಯೇ ಹೊರತು ಕೆಟ್ಟದ್ದಾಗಲಿಕ್ಕಿದಿಲ್ಲ! ಆದ್ದರಿಂದ ತಾವು ಅಂದುಕೊಂಡ ಕಾರ್ಯವನ್ನು ಹೇಗಾದರೂ ಸಾಧಿಸಿ ಜನರು ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿದರು.    ಆವತ್ತು ಅಮಾವಾಸ್ಯೆಯ ದಿನ. ಅಂದು ದಟ್ಟ ಕಾರ್ಗತ್ತಲ ನಡುರಾತ್ರಿಯಲ್ಲಿ ರಾಘವನನ್ನು ನಿಶ್ಶಬ್ದವಾಗಿ ಕೂರಿಸಿಕೊಂಡ ಗುರೂಜಿಯವರ ಕಾರು ಪೋರ್ಟಿಕೋದಿಂದ ಹೊರಬಿತ್ತು. ಸ್ವಲ್ಪಹೊತ್ತಿನಲ್ಲಿ ಹೂಮ್ಮಣ್ಣು ಗ್ರಾಮವನ್ನು ತಲುಪಿತು. ಅಲ್ಲಿ ಒಂದು ಕಡೆ ಸುಮಾರು ಮೂರು ಶತಮಾನಗಳಷ್ಟು ಪ್ರಾಚೀನವಾದ ದೊಡ್ಡ ನಾಗಬನವೊಂದು ಕೆಲವು ಕಾಲದ ಹಿಂದೆ ಗುರೂಜಿಯವರ ಸುಪರ್ದಿಯಲ್ಲಿಯೇ ಜೀರ್ಣೋದ್ಧಾರಗೊಂಡಿತ್ತು. ಆದರೆ ಬನಕ್ಕೆ ಸಂಬಂಧಪಟ್ಟವರು ಅಲ್ಲಿನ ಹಳೆಯ ನಾಗನ ಕಲ್ಲುಗಳನ್ನು ಇನ್ನೂ ವಿಸರ್ಜನೆ ಮಾಡಿರಲಿಲ್ಲ. ಈಗ ಮಬ್ಬು ಬೆಳಕಿನ ಬ್ಯಾಟರಿಯನ್ನು ಹಿಡಿದುಕೊಂಡ ಗುರೂಜಿಯವರು ನಿಧಾನವಾಗಿ ಆ ಬನವನ್ನು ಹೊಕ್ಕರು. ಅವರ ಹಿಂದೆ ರಾಘವನೂ ನಡುಗುತ್ತ ಹೆಜ್ಜೆ ಹಾಕಿದ. ಗುರೂಜಿಯವರು ತಮಗೆ ಬೇಕಾದ ಕೆಲವು ನಾಗನ ಕಲ್ಲುಗಳನ್ನು ಬೇಗಬೇಗನೇ ಆಯ್ದು ರಾಘವನಿಂದ ಕಾರಿನ ಡಿಕ್ಕಿಗೆ ತುರುಕಿಸಿದರು. ಬಳಿಕ ಕೂಡಲೇ ಅವರ ಕಾರು ಮಿಂಚಿನ ವೇಗದಲ್ಲಿ ಅಲ್ಲಿಂದ ಮಾಯವಾಗಿ ಭಾಗೀವನದ ಸಮೀಪದ ದೇವರಕಾಡಿನೆದುರು ಪ್ರತ್ಯಕ್ಷವಾಯಿತು. ಅಲ್ಲೊಂದು ದೈತ್ಯ ರೆಂಜೆಮರದ ಬುಡದಲ್ಲಿ ರಾಘವ ಹಿಂದಿನ ದಿನ ರಾತ್ರಿಯೇ ತೋಡಿಟ್ಟಿದ್ದ ಹೊಂಡದೊಳಗೆ ಆ ಕಲ್ಲುಗಳನ್ನು ಸಾಲಾಗಿ ಇಟ್ಟು ಯಾರಿಗೂ ಚೂರೂ ಸುಳಿವು ಸಿಗದಂತೆ ಮಣ್ಣು ಮುಚ್ಚಿ ಅದರ ಮೇಲೆ ತರಗೆಲೆಗಳನ್ನು ಹರಡಿ ಮರೆಮಾಚಿದವರು ಕ್ಷಣದಲ್ಲಿ ಮನೆಯನ್ನು ಸೇರಿದರು.    ಈ ಅದ್ಭುತ ಕಾರ್ಯಸಾಧನೆ ನಡೆದ ಆರು ತಿಂಗಳ ಬಳಿಕ ಗುರೂಜಿಯವರು ಆ ದೇವರಕಾಡಿನಲ್ಲಿ ನಾಗನ ದೇವಸ್ಥಾನ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲು ಮುಂದಾದರು. ಜಾಗದ ವಾರಸುದಾರರಾದ ಮುದಿ ಗಂಡಹೆಂಡತಿಯನ್ನೂ ಅವರ ದೂರದೂರದ ಕೆಲವು ಸಂಬಂಧಿಕರನ್ನೂ ರಾಘವನ ಮೂಲಕ ಸಂಪರ್ಕಿಸಿ ಅಲ್ಲಿನ ದೈವದೇವರುಗಳ ಕಾರಣಿಕವನ್ನು ಕಣ್ಣಾರೆ ಕಂಡಂತೆ ಅವರಿಗೆ ವಿವರಿಸಿದರು. ಅದೇ ಕಾರಣಕ್ಕೆ ಭಾಗೀವನದೊಳಗೂ ನಾಗಧೂತನು ಸುತ್ತಾಡುತ್ತಿರುವ ಉದಾಹರಣೆಯನ್ನೂ ನೀಡಿ ಅವರಲ್ಲೂ ದೋಷದ ಭೀತಿಯನ್ನು ಸೃಷ್ಟಿಸಿ ಸಜ್ಜುಗೊಳಿಸಿದರು. ಒಂದು ಶುಭದಿನದಂದು ಊರ ಮುಖ್ಯಸ್ಥರನ್ನೂ ಕಾಡಿನ ವಾರಸುದಾರರನ್ನೂ ಮತ್ತು ಭಾಗಿವನದವರನ್ನೂ ಆ ಕಾಡಿನಲ್ಲಿ ಬಂದು ಸೇರುವಂತೆ ಆಜ್ಞಾಪಿಸಿದರು. ಆ ದಿನವೂ ಬಂದಿತು. ಅಂದು ಸೂರ್ಯೋದಯವಾಗಿ ಒಂದು ಗಳಿಗೆಯ ಬಳಿಕ ಗುರೂಜಿಯವರು ಸರ್ವಸಮಸ್ತರ ಸಮ್ಮುಖದಲ್ಲಿ ದೇವರಕಾಡನ್ನು ಪ್ರವೇಶಿಸಲು ಹೊರಟು ಬಂದವರು ಕಾರಿನಿಂದಿಳಿದು ಕಾಡಿನತ್ತ ಹೆಜ್ಜೆ ಹಾಕಿದರು. ಆಗ ಅಲ್ಲಿ ವಿಲಕ್ಷಣ ವಿದ್ಯಾಮಾನವೊಂದು ಸಂಭವಿಸತೊಡಗಿತು.     ಆ ಅರಣ್ಯದ ಸಮೃದ್ಧಿಯಲ್ಲೂ ಮತ್ತು ಸುತ್ತಲಿನ ಜನಜೀವನದ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರವಹಿಸಿರುವ ಕಟ್ಟಿರುವೆಗಳ ದೊಡ್ಡ ಕುಟುಂಬವೊಂದು ಮಿತಿಮೀರಿ ಬೆಳೆದ ತಮ್ಮ ಸಂಸಾರ ಬಾಹುಳ್ಯದಿಂದಾಗಿ ಒಂದೇ ಗೂಡಿನೊಳಗೆ ವಾಸಿಸಲಾಗದೆ ಹೊಸ ಪ್ರದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿದ್ದವು. ಆದ್ದರಿಂದ ಅವುಗಳು ಅಂದು ಬೆಳಗ್ಗಿನಿಂದಲೇ ಶಿಸ್ತಿನ ಸಿಪಾಯಿಗಳಂತೆ ಕವಲು ಕವಲುಗಳಾಗಿ ಪ್ರಯಾಣ ಬೆಳೆಸಿದ್ದವು. ಅಲ್ಲಿನ ಹಸಿರು ಸಂರಕ್ಷಣೆಯಲ್ಲಿ ತೊಡಗಿದ್ದ ಗೆದ್ದಲ ಕುಟುಂಬವೂ ತಮ್ಮ ವಂಶೋತ್ಪತಿಗಾಗಿ ಹೊಸ ಹುತ್ತಗಳನ್ನು ಕಟ್ಟುವುದರಲ್ಲಿ ನಿರತವಾಗಿದ್ದವು. ಆ ಅಡವಿಯ ಅಸಂಖ್ಯಾತ ಕ್ರಿಮಿಕೀಟಗಳು ತಮ್ಮ ಜೀವನ ನಿರ್ವಹಣೆಯ ಮೂಲಕವೇ ವಿವಿಧ ಬಗೆಯಿಂದ ಹಸಿರು ಪರಿಸರದ ಸ್ವಚ್ಛತೆಯಲ್ಲಿತೊಡಗಿದ್ದವು. ಅನೇಕ ಜಾತಿ ಮತ್ತು ಪ್ರಭೇದಗಳ ಹಾವುಗಳು ಇಲಿ, ಹೆಗ್ಗಣ, ಕಪ್ಪೆ, ಹಲ್ಲಿ, ಅರಣೆ, ಓತಿಕ್ಯಾತ ಮತ್ತು ಉಡಗಳಂಥ ಜೀವರಾಶಿಗಳ ಚಟುವಟಿಕೆಯೂ ಅವಕ್ಕೆ ಸಂಬಂಧಿಸಿದ ಆಹಾರದ ಜೀವಿಗಳ ಕೋಲಾಹಲ, ಕಲರವಗಳೂ ಕಾಡಿನೊಳಗಿನ ಜೀವಂತಿಕೆಯನ್ನು ಸಾರುತ್ತಿದ್ದವು. ಗೊರವಂಕ, ಮಂಗಟ್ಟೆ, ನವಿಲು, ಜಿಂಕೆ, ಕಾಡುಕೋಣ, ಚಿಟ್ಟೆಹುಲಿ, ಹಂದಿ, ಬರಿಂಕಗಳಂಥ ವನ್ಯಪ್ರಾಣಿಗಳ ಕೆನೆತ, ನೆಗೆತ ಗುಟುರು ಗರ್ಜನೆಗಳು ಅರಣ್ಯದ ಮೌನಕ್ಕೆ ಹೊಸ ಮೆರುಗನ್ನು ನೀಡಿ ಮಾರ್ದನಿಸುತ್ತ ಆ ಕಾಡು ಮನೋಹರವಾಗಿ ನಳನಳಿಸುತ್ತಿತ್ತು. ಆದರೆ ಕೆಲವೇ ಕ್ಷಣದಲ್ಲಿ ಅಲ್ಲೊಂದು ಕೆಟ್ಟ ಅಪಶಕುನದ ಛಾಯೆಯೂ ಉದ್ಭವಿಸಿಬಿಟ್ಟಿತು.

Read Post »

ಕಾವ್ಯಯಾನ, ಗಝಲ್

ಗಜಲ್ ಜುಗಲ್ ಬಂದಿ

ಗಜಲ್ ಜುಗಲ್ ಬಂದಿ ಇರುಳು ಮಲ್ಲೆ ಮಾಲೆ ಹಿಡಿದು ಅಮಲೇರಿಸಲು ಇದಾರು ಬಂದರುತುಂಟ ಕಣ್ಣಲಿ ಮಿಂಚಿನ ಕನಸು ತೋರಿಸಲು ಇದಾರು ಬಂದರು ವಾರದ ಪೇಟೆಯಲ್ಲಿ ಅಲೆಯುತಿರುವೆ ಕಳೆದ ಹೃದಯ ಹುಡುಕುತಾಸಂತೆಯಾ ಗದ್ದಲದಲಿ ಸಂಪಿಗೆ ಮುಡಿಸಲು ಇದಾರು ಬಂದರು ಹೃದಯ ವೀಣೆಯ ಮೀಟಿ ದೂರಾದ ವೈಣಿಕನಿಗೆ ಹಂಬಲಿಸಿದೆಮುರಿದ ಎದೆ ತಂಬೂರಿಗೆ ಶ್ರುತಿ ಸೇರಿಸಲು ಇದಾರು ಬಂದರು ನೆನಪಿನ ಮೊಗ್ಗುಗಳು ಬಿರಿದು ಏನೋ ಹೇಳಿ ಜಗವ ಮರೆಸಿದವುಮೆಲು ಹೆಜ್ಜೆ ಇಡುತ ನಯನ ಮುಚ್ಚಿ ಕಾಡಿಸಲು ಇದಾರು ಬಂದರು ಬದುಕ ಬಂಡಿ ಪಯಣ ರಣ ಬಿಸಿಲಿಗೆ ಬಾಯಾರಿ ದಣಿಯಿತು ಜೀವಬಳಲಿದ ಮೈ ಮನಕೆ ಅಧರ ಜೇನು ಕುಡಿಸಲು ಇದಾರು ಬಂದರು ಕ್ರೂರ ಕಾಲಚಕ್ರ ಸುಳಿಗೆ ಸಿಲುಕಿ ಬಾಳ ನೌಕೆ ಹೊಯ್ದಾಡಿತುಅನುರಾಗದ ಬದುಕಿನ ಒಳ ಗುಟ್ಟನು ತಿಳಿಸಲು ಇದಾರು ಬಂದರು ಶಶಿ ಇಲ್ಲದ ಏಕಾಂತದ ನಿಶೆ ಧಗೆಯಲಿ ಜೀವನವು ಸವೆಯಿತು“ಪ್ರಭೆ” ಯ ತುಟಿ ಅಂಚಿನಲಿ ನಗೆ ಹೂ ಅರಳಿಸಲು ಇದಾರು ಬಂದರು ************** ಪ್ರಭಾವತಿ ಎಸ್ ದೇಸಾಯಿ ಕಂಗಳಲಿ ಪ್ರೀತಿಯ ಬಟ್ಟಲಿದೆ ಕುಡಿಸಲು ಇದಾರು ಬಂದರುಬಾಹುಗಳಲಿ ಪ್ರೀತಿಯ ಜೋಗುಳ ಹಾಡಲು ಇದಾರು ಬಂದರು ಹುಡುಕಲೇನಿದೆ ಈ ಹೃದಯ ನಿನ್ನ ಎದೆಯಲ್ಲಿ ಮಿಲನವಾಗಿದೆಏಕಾಂತದಿ ಅಧರಕ್ಕೆ ಅಧರ ಸೇರಿಸಲು ಇದಾರು ಬಂದರು ದೂರಾಗುವ ಮಾತು ಕನಸಲ್ಲೂ ಕನವರಿಸದಿರು ಮುದ್ದು ಮರಿಆಲಿಂಗನದ ಬಿಸಿ ಅಂಟನ್ನು ಲೇಪಿಸಲು ಇದಾರು ಬಂದರು ಮರೆತವನಿಗೆ ನೆನಪುಗಳು ಊರುಗೋಲು ಆಗಬಲ್ಲವು ಗೆಳತಿಹೆಜ್ಜೆ ಮೇಲೆಜ್ಜೆಯಿಟು ಸಪ್ತಪದಿ ತುಳಿಯಲು ಇದಾರು ಬಂದರು ನಿನ್ನ ಸಾಂಗತ್ಯದಿ ದಣಿವೆನ್ನುವ ಭಾವ ಚಿರ ನಿದ್ರೆಯಲ್ಲಿದೆಮೈ ಸೋಕದೆ ಮನದಿ ಪ್ರೇಮರಸ ಬೆರೆಸಲು ಇದಾರು ಬಂದರು ಒಲವಿನ ದಡ ಸೇರದೆಯೆ ಸಂಸಾರ ನೌಕೆ ಮುಳಗದು ಬೇಗಂಸುಮೆಯ ಕಂಪನು ನನ್ನಯ ಬದುಕಲಿ ಹರಡಲು ಇದಾರು ಬಂದರು ಬನದ ತುಂಬೆಲ್ಲ ಅನುರಾಗದ ಮಣ್ಣಿದೆ ಮಲ್ಲಿಗೆಯ ಸಸಿ ನೆಡು‘ಮಲ್ಲಿ’ಯ ಬಾಳಿನ ಉಯ್ಯಾಲೆಯನು ತೂಗಲು ಇದಾರು ಬಂದರು ****** ರತ್ನರಾಯ ಮಲ್ಲ

ಗಜಲ್ ಜುಗಲ್ ಬಂದಿ Read Post »

ಕಾವ್ಯಯಾನ

ಶಸ್ತ್ರಗಳೆ ಕ್ಷಮಿಸಿಬಿಡಿ

ಹಗಲು ಹಸಿರು ಕೆಂಪು ಕೇಸರಿ ಬಿಳಿ ನೀಲ ನೂರೆಂಟು ಬಣ್ಣ
ಕತ್ತಲೆ ಕರ್ರಗಿನ ಕಪ್ಪೊಂದೇ ಹಾಕಿಕೊಂಡಿದೆ ಕಣ್ಣ
ಒಂಟಿ ಯಾಗಿದ್ದು ಹರಿತ ಅದರ ಆಯುಧ

ಶಸ್ತ್ರಗಳೆ ಕ್ಷಮಿಸಿಬಿಡಿ Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಬಾಲ್ಯ ಭಾಗ-ಒಂದು ಭಾರತದಲ್ಲಿ ಶತಶತಮಾನಗಳಿಂದ ಐದನೇ ಒಂದು ಭಾಗದಷ್ಟು ಜನರನ್ನು ಶೂದ್ರರೆಂದು, ಅಸ್ಪೃಶ್ಯರೆಂದು, ಅಂತ್ಯಜರೆಂದು, ಅಪವಿತ್ರರೆಂದು, ಅವರ್ಣಿಯರೆಂದು ಮಲಿನರೆಂದು ಊರ ಹೊರಗೆ ಪಶುವಿಗಿಂತ ಕೀಳಾಗಿ ಅಮಾನವೀಯ ಜೀವನ ಸಾಗಿಸುತ್ತಾ ಸವರ್ಣೀಯರಿಂದ ತುಳಿಯಲ್ಪಟ್ಟ ಸಮುದಾಯವೆ ನಿಮ್ನ ವರ್ಗದ ಜನ, ಋಗ್ವೇದದ ಪುರುಷ ಸೂಕ್ತದಲ್ಲಿ ವರ್ಣಿಸಿದಂತೆ ಪುರುಷನೆಂಬಾತನ ಮುಖದಿಂದ ಬ್ರಾಹ್ಮಣರು, ಬಾಹುಗಳಿಂದ ಕ್ಷತ್ರೀಯರು, ತೊಡೆಯಿಂದ ವೈಶ್ಯರು ಮತ್ತು ಪಾದದಿಂದ ಶೂದ್ರರು ಜನಿಸಿದರೆಂದು ಜನರನ್ನು ವರ್ಗಿಕರಿಸಿ ಶೂದ್ರರನ್ನು ಇನ್ನು ನಿಮ್ನಕರಿಸಿ ಚಂಡಾಲರನ್ನು ಅಸ್ಪೃಶ್ಯರೆಂದು ಅತ್ಯಂತ ಹೀನ ನಿಕೃಷ್ಠ ಅವಮಾನವಿತೆಯಿಂದ ನಡೆಸಿಕೊಂಡು ಬಂದಿದ್ದು ಸತ್ಯ ಸಂಗತಿಯಾಗಿದೆ,  ಶೂದ್ರರನ್ನು ಹೊಲೆಯ, ಮಾದಿಗ, ಚಮ್ಮಾರ, ಡೋರ, ಭಂಗಿ, ಇತ್ಯಾದಿ ಜಾತಿಗಳಿಂದ ಹಣೆಪಟ್ಟಿ ಕಟ್ಟಿ ಊರ ಒಳಗೆ ಬರದಂತೆ, ದೇವಸ್ಥಾನ ಪ್ರವೇಶಿಸದಂತೆ ಊರಿನ ಕೆರೆ ಬಾವಿಗಳಿಂದ ನೀರು ಮುಟ್ಟಿ ತೆಗೆದುಕೊಳ್ಳದಂತೆ ನಿರ್ಭಂದಿಸಿ, ಬಹಿಸ್ಕರಿಸಿ ಅವರ ನೆರಳೂ ತಮ್ಮ ಮೇಲೆ ಬಿಳದಂತೆ ಮುಟ್ಟಿಸಿಕೊಳ್ಳದಂತೆ ದೂರವಿರಿಸಿ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದ ಕಾಲವದು, ಅಸ್ಪೃಶ್ಯತೆಯ ಕರಾಳ ವಾತಾವರಣ ಕಾಲದಲ್ಲಿ 1891 ನೇ ಇಸ್ವಿಯ ಏಪ್ರಿಲ್ 14 ನೇ ತಾರಿಖಿನ ದಿನದಂದು ಮಧ್ಯಪ್ರದೇಶದ ಮಹೌ ಎಂಬಲ್ಲಿ ರಾಮಜಿ ಸಕ್ಪಾಲ ಮತ್ತು ಭೀಮಾಬಾಯಿ ದಂಪತಿಗಳಿಗೆ 14 ನೇ ಮಗುವಾಗಿ ಭೀಮರಾವ ಅಂಬೇಡ್ಕರ್ ಜನಿಸುತ್ತಾರೆ. ಹದಿನಾಲ್ಕು ಮಕ್ಕಳಲ್ಲಿ ಬದುಕುಳಿದವರು ಬಾಳಾರಾವ, ಆನಂದರಾವ ಮತ್ತು ಭೀಮಾರಾವ ಗಂಡುಮಕ್ಕಳಾದರೆ ಮಂಜುಳಾ, ತುಳಸಿ ಹೆಣ್ಣು ಮಕ್ಕಳು, ರಾಮಜಿ ಸಕ್ಪಾಲರು ಅವರ ತಂದೆ ಮಾಲೋಜಿ ಸಕ್ಪಾಲರಂತೆ ಬ್ರಿಟಿಷ ಸೈನ್ಯದಲ್ಲಿ ಸುಭೇದಾರಾಗಿ ಸೇವೆ ಸಲ್ಲಿಸಿದವರು. ತಾಯಿ ಭೀಮಾಬಾಯಿ ಠಾಣಾ ಜಿಲ್ಲೆಯ ಮುರ್ಚಾದ ಗ್ರಾಮದವರಾಗಿದ್ದರು, ತಾಯಿಯ ಸಂಬಂಧಿಕರು ಬ್ರಿಟಿಷ ಸೈನ್ಯದಲ್ಲಿ ಸುಭೇದಾರರಾಗಿದ್ದರು,  ರಾಮಜಿಯವರಂತೆ ಅವರು ಕೂಡಾ ಕಬೀರ ಪಂಥದ ಅನುಯಾಯಿಯಾಗಿದ್ದರು. ಭೀಮ ಎರಡು ವರ್ಷ ವಯಸ್ಸಿನವನಿದ್ದಾಗ ರಾಮಜಿ ಸಕ್ಪಾಲ ನಿವೃತ್ತಿ ಹೊಂದುತ್ತಾರೆ, ನಿವೃತ್ತಿ ನಂತರ ಮಹಾರಾಷ್ಟ್ರ, ಕೊಂಕಣದ ದಾಪೋಲಿಗೆ ಬಂದು ನೆಲೆಸುತ್ತಾರೆ ರಾಮಜಿ ಸಕ್ಪಾಲ ತುಂಬಾ ಸರಳ ಜೀವಿ ಮಾಂಸಹಾರ ಮಧ್ಯಪಾನದಿಂದ ದೂರವಿದ್ದವರು, ಸದಾ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ, ಅವರಿಗೆ ಕೆಲಸ ಸಿಗದೆ ಇದ್ದಾಗ ಸಂಸಾರ ಸಾಗಿಸೋದು ಕಷ್ಟವಾಗುತ್ತದೆ. ಕೆಲಸ ಅರಸಿಕೊಂಡು ಸಾತಾರಕ್ಕೆ ಬಂದು ನೆಲೆಸುತ್ತಾರೆ ಇಲ್ಲಿಯೇ, ಭೀಮ ಮತ್ತು ಆತನ ಅಣ್ಣಂದಿರು ಪ್ರಾಥಮಿಕ ಶಾಲೆಗೆ ಸೇರಿಕೊಳ್ಳುತ್ತಾರೆ, ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುವ ಕನಸನ್ನು ರಾಮಜಿ ಹೊಂದಿರುತ್ತಾರೆ, ಆದರೆ ಸಾತಾರಕ್ಕೆ ಬಂದ ಕೆಲವೆ ದಿನಗಳಲ್ಲಿ ಭೀಮಾಬಾಯಿ ತೀರಿಕೊಳ್ಳುತ್ತಾರೆ ಇದು ರಾಮಜಿ ಸಕ್ಪಾಲ ಕುಟುಂಬಕ್ಕೆ ಬಾರಿ ಆಘಾತವನ್ನುಂಟು ಮಾಡುತ್ತದೆ. ತಾಯಿ ತೀರಿಕೊಂಡಾಗ ಭೀಮನಿಗೆ ಆಗ ಇನ್ನು ಐದು ವರ್ಷ ವಯಸ್ಸು, ರಾಮಜಿ ಸಕ್ಪಾಲರ ಕುಟುಂಬದ ನಿರ್ವಹಣೆ ಮಕ್ಕಳ ಪಾಲನೆ ಪೋಷಣೆಯ ಹೋರೆ ತಂಗಿ ಮೀರಾಬಾಯಿ ಮೇಲೆ ಬೀಳುತ್ತದೆ, ಕಷ್ಟದಲ್ಲಿಯು ರಾಮಜಿ ಸಕ್ಪಾಲರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಅವರ ಸರಳ ಸಜ್ಜನಿಕೆಯ ಸನ್ನಡತೆ ಮಕ್ಕಳ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿತ್ತು. ಭೀಮನು ಸಾತಾರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಡ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾನೆ. ಅಸ್ಪೃಶ್ಯತೆಯ ನರಕಯಾತನೆ ಕಹಿ ನೋವುಗಳ ಅನುಭವ ಆಗಲೇ ದರ್ಶನವಾಗ ತೋಡಗಿತ್ತು. ತಾನು ಮಹಾರ ಜಾತಿಗೆ ಸೇರಿದವನು ಮಹಾರ ಅಸ್ಪೃಶ್ಯತೆ ಜಾತಿ ಎಂಬುದರ ಶಾಲಾ ದಿನಗಳ ಅನುಭವಗಳನ್ನು ಮುಂದೆ ಅಂಬೇಡ್ಕರರು ಬೆಳೆದು ದೊಡ್ಡವರಾದಾಗ ತಮ್ಮ ಆತ್ಮಕಥನ “ವೇಟಿಂಗ್ ಫಾರ ವಿಸಾ” ಅಂದರೆ ವಿಸ್ ಕ್ಕಾಗಿ ಕಾಯುವ ಜನ ಎಂಬ ಬರಹಗಳಲ್ಲಿ ಪ್ರಸ್ತೂತ ಪಡೆಸಿದ್ದಾರೆ. 1901 ರಲ್ಲಿ ನಡೆದ ಒಂದು ಘಟನೆ ಭೀಮಜಿ ಮಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಬರಪೀಡತದಿಂದಾಗಿ ಸಾವಿರಾರು ಜನರು ಹೊಟ್ಟೆಪಾಡಿಗಾಗಿ ಉದ್ಯೋಗವಿಲ್ಲದೆ ಸಯುವಂತಾಗಿತ್ತು, ಆ ಸಂದರ್ಭದಲ್ಲಿ ಬಾಂಬೆ ಸರಕಾರವು ಖಟವ್ ತಾಲೂಕಿನ ಗೋರೆಗಾಂವ ಗ್ರಾಮದಲ್ಲಿ ಕೆರೆ ನಿರ್ಮಾಣ ಕಾರ್ಯ ಆರಂಭಿಸಿ ಜನರಿಗೆ ಉದ್ಯೋಗ ಒದಗಿಸುತ್ತದೆ. ರಾಮಜಿ ಕೆಲಸ ಹುಡುಕಿಕೊಂಡು ಗೋರೆಗಾಂವಗೆ ಹೋಗುತ್ತಾರೆ, ಅಲ್ಲಿ ಹಣ ಬಟವಾಡೆ ಮಾಡುವ ಗುಮಾಸ್ತನ ಕೆಲಸ ಸಿಗುತ್ತದೆ. ಕೆಲಸ ಸಿಕ್ಕಿದ್ದರಿಂದ ಆಗ ಅಲ್ಲಿಯೆ ಉಳಿದುಕೊಂಡಿದ್ದರು ಬೇಸಿಗೆ ಕಾಲವಾಗಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಿರುತ್ತದೆ. ರಜಾ ದಿನಗಳಲ್ಲಿ ತನ್ನ ಜೊತೆ ಕಾಲ ಕಳೆಯಲು ಗೋರೆಗಾಂವಗೆ ಬರಲು ಮಕ್ಕಳಿಗೆ ರಾಮಜಿ ಪತ್ರ ಬರೆದಿದ್ದರು. ಭೀಮ ತನ್ನ ಅಣ್ಣ ಮತ್ತು ಅಕ್ಕನ ಮಗನೊಂದಿಗೆ ಕೂಡಿ ಮೂವರು ಗೋರೆಗಾಂವಗೆ ರೈಲು ಮೂಲಕ ಪ್ರಯಾಣ ಮಾಡುತ್ತಾರೆ ಹೊಸ ಹೊಸ ಬಟ್ಟೆತೊಟ್ಟುಕೊಂಡು ಅತ್ತೆ ಮೀರಾಬಾಯಿ ಮಾಡಿದ ರುಚಿ ರುಚಿಯಾದ ಅಡುಗೆಯ ಬುತ್ತಿ ಕಟ್ಟಿಕೊಂಡು ಒಂದಿಷ್ಟು ದುಡ್ಡು ಹೊಂದಿಸಿಕೊಂಡು ರೈಲು ಬಂಡಿಯಲ್ಲಿ ಪ್ರಯಾಣ ಮಾಡುತ್ತಾರೆ ಮೊದಲಸಲ ರೈಲು ಬಂಡಿಯಲ್ಲಿ ಪ್ರಯಾಣ ಮಾಡುತ್ತಿರುವುದು ಅವರ ಆನಂದಕ್ಕೆ ಪಾರವೆ ಇರಲಿಲ್ಲ. ಗೋರೆಗಾಂವ ಗ್ರಾಮಕ್ಕೆ ರೈಲು ಮಾರ್ಗ ಇಲ್ಲದ್ದರಿಂದ ಹತ್ತಿರದ ಗ್ರಾಮ ಮಾಸೂರ ನಿಲ್ದಾಣಕ್ಕೆ ರೈಲು ಬಂದು ತಲುಪಿದಾಗ ಸಂಜೆಯಾಗಿತ್ತು, ಅಲ್ಲಿಂದ ಗೋರೆಗಾಂವಗೆ ಹೋಗಲು ಹತ್ತು ಮೈಲು ದೂರ ಕ್ರಮಿಸಬೇಕಿತ್ತು, ಆಗಲೇ ಸಂಜೆ ಆಗಿದ್ದರಿಂದ ರಾತ್ರಿ ಕತ್ತಲಾಗುವುದರೊಳಗಾಗಿ ಅಲ್ಲಿಗೆ ತಲುಪಬೇಕೆಂದು ನಿರ್ಧರಿಸುತ್ತಾರೆ. ಭೀಮ ಮತ್ತು ಆತನ ಸಹೋದರರು ರೈಲಿನಿಂದ ಕೆಳಗೆ ಇಳಿದು ನಿಂತು ನೋಡುತ್ತಾರೆ. ಅಲ್ಲಿ ಪರಿಚಿತರು ಯಾರು ಕಾಣುವುದಿಲ್ಲ ತಾವು ಇಂತದಿನ ಬರುವುದಾಗಿ ಪತ್ರ ಬರೆದಿದ್ದರಿಂದ ಅಪ್ಪ ತಮ್ಮನ್ನು ಕರೆದುಕೊಂಡು ಹೋಗಲು ಸೇವಕನನ್ನು ಕಳುಹಿಸಿರುತ್ತಾನೆಂದು ನೋಡುತ್ತಾರೆ. ಭೀಮನು ಬರೆದ ಪತ್ರ ಅಂಚೆಯವನು ರಾಮಜಿಗೆ ತಲುಪಿಸದೆ ಇಟ್ಟುಕೊಂಡಿದ್ದು ಮಕ್ಕಳು ಬರುತ್ತಿರುವುದು ರಾಮಜಿಗೆ ತಿಳಿದಿರಲಿಲ್ಲ. ಅಂಚೆಯವನ ಎಡವಟ್ಟಿನಿಂದ ಅವರನ್ನು ಕರೆದುಕೊಂಡುಹೊಗಲು ಯಾರು ಬಂದಿರಲಿಲ್ಲ. ಮಕ್ಕಳು ಚಿಂತಿತರಾಗುತ್ತಾರೆ. ಭೀಮ ಹೇಗೋ ಉಪಾಯಮಾಡಿ ಅಲ್ಲಿದ್ದ ಸ್ಟೇಷನ ಮಾಸ್ತರನ ಸಹಾಯದೊಂದಿಗೆ ಒಂದು ಎತ್ತಿನ ಬಂಡಿಯನ್ನು ಗೋತ್ತು ಮಾಡಿಕೊಂಡು ಅಲ್ಲಿಂದ ಗೋರೆಗಾಂವಗೆ ಹೊರಡುತ್ತಾರೆ. ಹುಡುಗರು ಹೊಸ ಬಟ್ಟೆ ತೊಟ್ಟಿದ್ದರಿಂದ ಮೊದ ಮೊದಲು ಬಂಡಿಯವನಿಗೆ ಅವರು ಅಸ್ಪೃಶ್ಯರೆಂದು ಸಂಶಯ ಬಂದಿರಲಿಲ್ಲ. ಹೇಗೋ ಏನೋ ಸ್ವಲ್ಪ ದೂರ ಹೋಗುವುದರಲ್ಲಿ ಎತ್ತಿನ ಬಂಡಿಯವನಿಗೆ ಇವರು ಮಹಾರರೆಂಬುವುದು ಗೋತ್ತಾಗಿ ಗೊಬ್ಬರ ಸಾಗಿಸುವ ತನ್ನ ಬಂಡಿ ಮೈಲಿಗೆ ಮಾಡಿದರೆಂದು ಕೋಪಗೊಂಡು ಬೈಯುತ್ತ ಬಂಡಿಯ ನೊಗ ಬಿಚ್ಚಿ ಮೇಲಿಂದ ಸುರಿಯುವಂತೆ ಎತ್ತಿ ಬಿಟ್ಟು ಬಂಡಿಯಲ್ಲಿ ಕುಳಿತ ಹುಡುಗರನ್ನು ಕೆಳಗೆ ಬಿಳಿಸಿ ಬಿಡುತ್ತಾನೆ. ಮಕ್ಕಳು ಭಯಗೊಂಡು ಚಿಂತಿತರಾಗಿ ನೋವನ್ನು ಸಹಿಸಿಕೊಂಡು, ಬಂಡಿಯವನಿಗೆ ತಮ್ಮನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಳ್ಳುತ್ತಾರೆ. ಬಂಡಿಯವನು ಹುಡುಗರನ್ನು ದಿಟ್ಟಿಸುತ್ತಾ ನೀವು ಅಸ್ಪೃಶ್ಯರು, ಬಂಡಿ ಮುಟ್ಟಿ ಮೈಲಿಗೆ ಮಾಡಿದ್ದಿರಿ ನೀವು ಬೇರೆ ಬಂಡಿ ನೋಡಿಕೊಳ್ಳಿ ಎನ್ನುತ್ತಾನೆ. ಭೀಮನು ಉಪಯಮಾಡಿ ಬಂಡಿಯವನಿಗೆ ಅಣ್ಣ ನಾವು ಎರಡರಷ್ಷು ಬಾಡಿಗೆ ಕೊಡುತ್ತೆವೆ. ಮೇಲಾಗಿ ನಾವೆ ಬಂಡಿ ನಡೆಸುತ್ತೆವೆ, ಎಂದಾಗ ಎರಡು ಪಟ್ಟು ಬಾಡಿಗೆ ಸಿಗುವುದು ಖಾತ್ರಿಯಾದಗ ಬಂಡಿಯವನು ಹುಡುಗರನ್ನು ಕರೆದುಕೊಂಡು ಹೋಗಲು ಒಪ್ಪಿಕೊಳ್ಳುತ್ತಾನೆ. ರೈಲು ಬಂಡಿಯ ಪ್ರಾಯಾಣದ ಖುಷಿಯಲ್ಲಿ ಮುಂಜಾನೆಯಿಂದ ಊಟಮಾಡಿರಲಿಲ್ಲ. ರುಚಿಯಾಗಿ ಅಡುಗೆ ಮಾಡಿಕೊಂಡು ತಂದಿದ್ದ ಬುತ್ತಿಯನ್ನು ಊಟಮಾಡಬೇಕೆಂದರೆ ದಾರಿ ಉದ್ದಕ್ಕು ಯಾರು ನೀರು ಕೊಟ್ಟಿರಲಿಲ್ಲ. ಸುಂಕದ ಕಟ್ಟೆಗೆ ಬಂದು ತಲುಪಿದಾಗ ತಡರಾತ್ರಿ ಯಾಗಿತ್ತು. ಕತ್ತಲಾಗಿದ್ದರಿಂದ ರಾತ್ರಿ ಕಳೆದು ನಸುಕಿನ ಜಾವ ಪ್ರಯಾಣ ಬೆಳೆಸುವುದಾಗಿ ನಿರ್ಧರಿಸಿ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಅಲ್ಲಿ ಬಹಳಷ್ಟು ಎತ್ತಿನ ಬಂಡಿಗಳು ವಿಶ್ರಾಂತಿಗೆ ತಂಗಿದ್ದವು. ಅಸಿವು ನೀರಡಿಕೆ ಯಾಗಿತ್ತು ಎಲ್ಲಿಯು ನೀರು ಸಿಕ್ಕಿರಲಿಲ್ಲ ಬಂಡಿಯವನು ಕೈಮಾಡಿ ತೋರಿಸಿ ಅಲ್ಲಿ ಸುಂಕದ ಸಂಗ್ರಹಗಾರನ ಗುಡಿಸಲು ಇದೆ ಅಲ್ಲಿಗೆ ಹೋಗಿ ನೀರು ತರಬಹುದು, ನೀವು ಮಹಾರ ಅಂತ ಹೇಳಬೇಡಿ, ಮುಸಲ್ಮಾನರು ಅಂತ ಹೇಳಿ ನಿಮ್ಮ ಅದೃಷ್ಟ! ನೀರು ಸಿಗಬಹುದು ಎಂದು ಹೇಳಿದನು ಭೀಮನು ಸ್ವಲ್ಪ ದೂರದಲ್ಲಿ ಇದ್ದ ಸುಂಕದ ಸಂಗ್ರಹಕಾರನ ಹತ್ತಿರ ಹೋಗಿ ಹಸಿವು ಆಗಿದೆ, ನೀರಿಲ್ಲ ಊಟಮಾಡಲು ನೀರುಕೊಡಲು ಕೇಳುತ್ತಾರೆ ಸಂಗ್ರಹಕಾರ ಯಾರು ನೀವು ಎಂದು ಪ್ರಶ್ನಿಸುತ್ತಾನೆ. ಉರ್ದು ಬರುತ್ತಿರುವುದರಿಂದ ಭೀಮ ಉರ್ದುವಿನಲ್ಲಿ ಮುಸಲ್ಮಾನರು ಎನ್ನುತ್ತಾನೆ. ನಿಮಗಾಗಿ ನೀರು ಇಡೋಕೆ, ಆಗುತ್ತಾ? ಗುಡ್ಡದ ಮೇಲೆ ನೀರು ಇದೆ ಅಲ್ಲಿಗೆ ಹೋಗಿ ಎಂದು ನೀರು ಕೋಡದೆ ಸುಂಕದ ಸಂಗ್ರಹಕಾರ ಸುಮ್ಮನಾದ. ರಾತ್ರಿ ಸಮಯ ಗುಡ್ಡದ ಮೇಲೆ ಹೋಗುವುದರಿಂದ ಅಪಾಯವೆಂದು ತಿಳಿದು, ಬುತ್ತಿ ಇದ್ದರು ಯಾರು ನೀರು ಕೋಡದೆ ಇದ್ದುದ್ದರಿಂದ ಊಟಮಾಡದೆ ಉಪವಾಸ ಮಲಗುತ್ತಾರೆ. ರಕ್ಷಣೆಗಾಗಿ ಮೂವರು ಒಬ್ಬರಾದ ಮೇಲೆ ಒಬ್ಬ ಸರದಿಯಂತೆ ಎಚ್ಚರವಿದ್ದು ಇನ್ನಿಬ್ಬರು ಮಲಗುವಂತೆ ರಾತ್ರಿ ಕಳೆದು, ಮುಂಜಾನೆ ಗೋರೆಗಾಂವಗೆ ತಲುಪಿದ್ದರು. ನಿಸರ್ಗದ ನೀರನ್ನು ಕುಡಿಯಲು ಬಿಡದ, ಸಗಣಿ ಸಾಗಿಸುವ ಬಂಡಿಯಲ್ಲಿ ಕೂಡ್ರಲು ಬಿಡದ ಈ ಅಸ್ಪೃಶ್ಯತೆಯ ಕರಾಳ ಘಟನೆ ಒಂಭತ್ತು ವರ್ಷದ ಬಾಲಕ ಭೀಮನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ——————————— ಸೋಮಲಿಂಗ ಗೆಣ್ಣೂರ

Read Post »

You cannot copy content of this page

Scroll to Top