ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಾಂಧಿ ಜಯಂತಿ ವಿಶೇಷ

ಗಜಲ್

ಕನ್ನಡಕ ಕೋಲು ಹಿಡಿಸಿ ಬೆದರು ಗೊಂಬೆ ಮಾಡಿದರು ನೋಡು
ಸತ್ಯ ಅಹಿಂಸೆಗಳು ಶಬ್ದ ಕೋಶದಲಿ ಉಳಿಸಿದರು ನೋಡು

ಜನಕೆ ಸ್ವಾವಲಂಬಿ ಬದುಕು ನಡೆಸಲು ಮಾರ್ಗ ಸೂಚಿಸಿದೆ
ನೀ ತಿರುಗಿಸಿದ ಚರಕಾ ಪ್ರದರ್ಶಕೆ ಇಟ್ಟಿರುವರು ನೋಡು

ಆದರ್ಶಗಳನು ಗಾಳಿಗೆ ತೂರಿ ಕುಡಿದು ತೂರಾಡುವರು
ಮಹಾತ್ಮ ರಾಷ್ಟ್ರಪಿತ ಎಂದು ಪಟಕೆ ಪೂಜಿಸಿದರು ನೋಡು

ಇರುಳೆಲ್ಲಾ ಮೋಜು ಮಸ್ತಿಮಾಡಿ ನಶೆಯಲಿ ಹೊರಳಾಡುವರು
ಹಗಲು ಉಪವಾಸ ಸತ್ಯಾಗ್ರಹದಲ್ಲಿ ಪಾಲುಗೊಂಡರು ನೋಡು

ಬುವಿಯಲಿ ಅಹಿಂಸ ಬೀಜಬಿತ್ತಿದೆ ಮಳೆಯಿಲ್ಲದೆ ಒಣಗಿತು
ಕಸತಿಂದು ಅಮಲಿನಲಿ ನೆತ್ತರ ಕಾಲುವೆ ಹರಿಸಿದರು ನೋಡು

ರಾಮ ರಹೀಮ ಭಾರತಾಂಬೆಯ ಎಡ ಬಲ ಭುಜಗಳೆಂದೆ
ಎಡ ಬಲ ಬೇರಾಗಿ ಕತ್ತಿ ಹಿಡಿದು ಬಡದಾಡಿದರು ನೋಡು

ಸೃಷ್ಟಿಸಿದ ಮೂರು ಮಂಗಗಳು ಇಂದು ನಿಜೀ೯ವವಾಗಿವೆ
ವಿಶ್ವಕೆ ನೀಡಿದ ಆದರ್ಶ “ಪ್ರಭೆ” ನಂದಿಸಿದರು ನೋಡು


ಪ್ರಭಾವತಿ ಎಸ್ ದೇಸಾಯಿ

About The Author

1 thought on “”

Leave a Reply

You cannot copy content of this page

Scroll to Top