ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ತ್ರಿದಳ

ಮಹಿಳೆಯರನ್ನು ಸಾಕ್ಷರರನ್ನಾಗಿಸಲು ಪ್ರೇರೇಪಿಸುವ ಕವಯಿತ್ರಿಯ ತ್ರಿಪದಿಯ ಸಾಲುಗಳು ಮಹಿಳಾ ಶಿಕ್ಷಣದ ಜಾಗೃತೆಯನ್ನು ಸಾರುತ್ತವೆ. ಜೀವನದ ವಾಸ್ತವ ಸತ್ಯಗಳನ್ನು ಸಾರುವ ತ್ರಿಪದಿಗಳು ತುಂಬಾ ಮಾರ್ಮಿಕವಾಗಿವೆ. ೭೦ ವರ್ಷದ ವಸಂತದಲ್ಲಿ ಜೀವನಾನುಭವದ ಅಮೃತ ಬಳ್ಳಿಯಲಿ ಅರಳಿದ ಕಾವ್ಯ ಕುಸುಮಗಳಾಗಿ ಶ್ರೀಮತಿ ವಾಸಂತಿ ಮೇಳೆದ ಅವರ ತ್ರಿದಳ ಸಂಕಲನದಲ್ಲಿ ಮೂಡಿಬಂದಿವೆ

ತ್ರಿದಳ Read Post »

ಕಾವ್ಯಯಾನ

ಮಾವನ ಕರೆ

ಕವಿತೆ ಮಾವನ ಕರೆ ಶೃತಿ ಮೇಲುಸೀಮೆ ಮೊಂಡ ಕೋಲ ಕಟ ಕಟ ಕುಟ್ಟುತ್ತಾಒಂಟಿ ಕಾಲ ಕುಂಟ ಮಾವಕೂಗ್ತಾ ಬಂದಿದ್ದ ಕೂಗ್ತಾ ಬಂದಿದ್ದ ನೀಲವ್ವ ತಾರವ್ವ ಎಂದುಕಣ್ ಅಗಲಿಸಿ ಕೇಳ್ತಾನೋಡ್ತಾ ನಿಂತಿದ್ದ ನೋಡ್ತಾ ನಿಂತಿದ್ದ ಹಸಿದ ಹೊಟ್ಟೆ , ಸಪ್ಪೆ ಮಾರಿ ಮಾಡ್ಕೊಂಡುತಿನ್ನಕ ತಾರವ್ವ ತಂಗ್ಯವ್ವ ಎಂದುಕರಿತಾ ನಿಂತಿದ್ದ ಕರಿತಾ ನಿಂತಿದ್ದ ಪುಟ್ಟಿ ಪುಟ್ಟಿ ಹಣ್ಣು ಮಾರುವಾಗರೊಕ್ಕ ಕೊಟ್ಟು ಒಯ್ಯನದಿದ್ದ ಮಾವ ಇಂದುಕಿಸೆಲೀ ರೊಕ್ಕ ಇಲ್ಲದೆ ಬಾಯಿ ಚಪ್ಪರಿಸುತದ್ದಸೊಸೆ ಮುಂದೆ ಸೋತು ಕೇಳ್ತಿದ್ದ ಸೋತು ಕೇಳ್ತಿದ್ದ ಬಾ ಮಾವ ಏನು ಉಂಡಿ ಎಂದಾಗತೊಂಬ್ಲ ತಿಂದು ಬಂದಿನಿ ,ರುಚಿ ಕೆಟ್ಟ ಬಾಯಿಗಂಗಳದಲ್ಲಿ ಅಂಬಲಿ ಆದ್ರೂಕೊಡವ್ವ ಎಂದಿದ್ದ ಕೊಡವ್ವ ಎಂದಿದ್ದ ಹೇಗಿದಿಯಾ ಮಾವ ಎಂದಾಗನನ್ನ ಬದುಕು ನಾಟಕದ ಪಾತ್ರ ಆದಂಗಾಗಿದೆಹರೆದರಲ್ಲಿ ವಿಜೃಂಭಿಸಿದ ಜೀವಸತ್ವ ಕಳಕೊಂಡ ಕಲ್ಕಿ ಜಗ ಎಂದಿದ್ದ ಕಲ್ಕಿ ಜಗ ಎಂದಿದ್ದ ಇದ್ದು ಇಲ್ಲದಂಗಿರುವ ಜೀವ್ನ ಕಾಳು ಇದೆ ಕೂಳಿಲ್ಲಹಣದ ಹುಚ್ಚು ಹಿಡಿದ ಮನಸುಎಲ್ಲಾ ಇದ್ದು ಇಲ್ಲೆ ಸುತ್ತುತ್ತಿದೆ ಏನು ಇಲ್ಲದಂಗ ಎಂದುನಿಟ್ಟುಸಿರು ಬಿಟ್ಟಿದ್ದ ನಿಟ್ಟುಸಿರು ಬಿಟ್ಟಿದ್ದ ****

ಮಾವನ ಕರೆ Read Post »

ಕಾವ್ಯಯಾನ

ವೀಣಾ ನಿರಂಜನರವರ ಕವಿತೆ

ಕವಿತೆ ವೀಣಾ ನಿರಂಜನರವರ ಕವಿತೆ ನಕ್ಷತ್ರಗಳನ್ನು ನೋಡುವಾಗನನ್ನ ಜೊತೆಗಿರುತ್ತಿದ್ದ ಅಕ್ಕ ತಂಗಿಯರುಈಗ ಖುದ್ದು ನಕ್ಷತ್ರವಾಗಿದ್ದಾರೆಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗಿನಕ್ಷತ್ರವಾಗಿ ಬಿಡುವವರ ಕುರಿತುನಾನೀಗ ಯೋಚಿಸುತ್ತಿದ್ದೇನೆ ಅಂಗಳದ ತುಂಬ ಚೆಲ್ಲಿದ್ದಮಲ್ಲಿಗೆಯ ಹೂಗಳನ್ನಾಯುತ್ತಿದ್ದವರುಹೂಗಳು ಬಾಡುವ ಮುನ್ನವೇಪರಿಮಳವ ಅಲ್ಲೇ ಬಿಟ್ಟುನಡೆದೇ ಬಿಟ್ಟರು ಸದ್ದಿಲ್ಲದೆಆ ಪರಿಮಳವಿನ್ನೂ ಹಾಗೇ ಇದೆನನ್ನ ಮನದೊಳಗೆ ರಾತ್ರಿ ನೀರವ ಮೌನದಲ್ಲಿಬಿಚ್ಚಿ ಕೊಳ್ಳುತ್ತಿದ್ದ ಬದುಕ ಕಟ್ಟುವಕನಸುಗಳು, ಪಿಸುಮಾತು, ನಸುನಗೆಹಾಡಾಗಿ ಹೊಮ್ಮುತ್ತಿದ್ದ ಭಾವಗಳುಎದೆಯ ದನಿಗೆ ರಾಗವಾಗುವ ಮುನ್ನವೇಸ್ವರಗಳ ಕಳಚಿಟ್ಟು ನಡೆದರು ಎಲ್ಲೋ ದೂರದಲ್ಲಿ ಪುಟ್ಟ ನಕ್ಷತ್ರಗಳಾಗಿಮಿನುಗುತ್ತಿರುವ ಈ ನನ್ನ ಜನಕಾಲ ಕಾಲಕ್ಕೆ ಸುರಿವ ಮಳೆಯಂತೆ,ಕಡಲ ಭೋರ್ಗರೆತದಂತೆಎಲೆ ಕಳಚಿ ಮರುಹುಟ್ಟುಪಡೆಯುವ ವೃಕ್ಷ ಸಂಕುಲದಂತೆಮರಳಿ ಬಾರರೆ… ಹೊತ್ತು ಮುಳುಗುವ ಮುನ್ನವೇತೆರೆದುಕೊಳ್ಳುವಹೊತ್ತೇರುವ ಮುನ್ನವೇಮರೆಯಾಗುವ ಈ ತಾರಾ ಲೋಕನಮ್ಮೊಳಗೊಂದು ಬೆಳಕಿನ ಕಿರಣಹಡೆದು ಬಿಡುವ ಸೋಜಿಗದಲ್ಲಿರುವೆನಾನೀಗ… ******

ವೀಣಾ ನಿರಂಜನರವರ ಕವಿತೆ Read Post »

ಇತರೆ, ವಾರದ ಕತೆ

ಶಾಲೆಯ ಹೆಡ್ ಬಾಯೋರು ಬಳಸಿದ ಹಳೆಯ ಕರಿ ಬಣ್ಣದ ಮೊಬೈಲನ್ನು ಸಾಳೂಗೆ ಕೊಟ್ಟಿದ್ದರು. ಅದೇ ಮೊಬೈಲು ರ‍್ಸಿನಿಂದ ತೆಗೆದು ಘಂಟೆ ಎಷ್ಟಾಯಿತೆಂದು ನೋಡಿದಳು. ಏಳು ಗಂಟೆಯಾಗುತ್ತಾ ಬಂತು ಬೇಗ ಮುಟ್ಟಬೇಕು ಎಂದುಕೊಳ್ಳುತ್ತಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕಲು ಶುರು ಮಾಡಿದಳು. ಆದರೆ ಈಗೀಗ ಸಾಳೂಗೆ ನಡೆಯಲು ತುಂಬಾ ತ್ರಾಸು ಆಗುತ್ತಿತ್ತು

Read Post »

You cannot copy content of this page

Scroll to Top